Rajyotsava award 2020: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅರ್ಹ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

2020ರ ಸಾಲಿನ "ರಾಜ್ಯೋತ್ಸವ ಪ್ರಶಸ್ತಿ" ಪುರಸ್ಕೃತರ ಪಟ್ಟಿಯನ್ನು ಇಂದು ವಿಧಾನಸೌಧದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅರ್ಹ 65 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

Last Updated : Oct 28, 2020, 05:36 PM IST
Rajyotsava award 2020: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅರ್ಹ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ title=
ಸಾಂದರ್ಭಿಕ ಚಿತ್ರ

ಬೆಂಗಳೂರು: 2020ರ ಸಾಲಿನ "ರಾಜ್ಯೋತ್ಸವ ಪ್ರಶಸ್ತಿ" ಪುರಸ್ಕೃತರ ಪಟ್ಟಿಯನ್ನು ಇಂದು ವಿಧಾನಸೌಧದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅರ್ಹ 65 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

ಈ ಬಾರಿ ಕೊರೊನಾ ಇರುವ ಹಿನ್ನಲೆಯಲ್ಲಿ ಸರಳ ರಾಜ್ಯೋತ್ಸವ ಆಚರಣೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ. ಇನ್ನೊಂದೆಡೆ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮೂಲಕ ಎಲ್ಲ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿದೆ."ವಿವಿಧ ಕ್ಷೇತ್ರಗಳಲ್ಲಿ ನಾಡು ನುಡಿಗಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕರು ನಮ್ಮ ರಾಜ್ಯದ ಹೆಮ್ಮೆಯಾಗಿದ್ದಾರೆ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ 65 ಸಾಧಕರಿಗೆ ರಾಜ್ಯದ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು." ಎಂದು ಟ್ವೀಟ್ ಮಾಡಿದೆ.

ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ (List) ಇಲ್ಲಿದೆ

ಸಾಹಿತ್ಯ ಕ್ಷೇತ್ರ _ ಧಾರವಾಡದ ಪ್ರೊ. ಸಿ.ಪಿ ಸಿದ್ದಾಶ್ರಮ, ಕೋಲಾರದ ವಿ. ಮುನಿವೆಂಕಟಪ್ಪ, ಗದಗದ ವಿಶೆಷ ಚೇತನ ವರ್ಗದ ರಾಮಣ್ಣ ಬ್ಯಾಟಿ, ದಕ್ಷಿಣ ಕನ್ನಡದ ವಲೇರಿಯನ್ ಡಿಸೋಜ, ಯಾದಗಿರಿಯ  ಡಿ.ಎನ್ ಅಕ್ಕಿ, 
ಸಂಗೀತ ಕ್ಷೇತ್ರ _ ರಾಯಚೂರಿನ ಅಂಬಯ್ಯ ನೂಲಿ, ಬೆಳಗಾವಿಯ ಅನಂತ ತೇರದಾಳ, ಬೆಂಗಳೂರಿವ ಬಿ ವಿ ಶ್ರೀನಿವಾಸ್ ಮತ್ತು ಗಿರಿಜಾ ನಾರಾಯಣ್, ದಕ್ಷಿಣ ಕನ್ನಡದ ಕೆ ಲಿಂಗಪ್ಪ ಶೇರಿಗಾರ ಕಟೀಲು, 
ನ್ಯಾಯಾಂಗ ಕ್ಷೇತ್ರ _ ಬೆಂಗಳೂರಿನ ಕೆ ಎನ್ ಭಟ್, ಉಡುಪಿಯ ಕೆ ಎನ್ ವಿಜಯಕುಮಾರ್
ಮಾಧ್ಯಮ ಕ್ಷೇತ್ರ _ ಮೈಸೂರಿನ ಸಿ ಮಹೇಶ್ವರನ್, ಬೆಂಗಳೂರಿನ ಟಿ. ವೆಂಕಟೇಶ್
ಯೋಗ ಕ್ಷೇತ್ರ _ ಮೈಸೂರಿನ ಡಾ . ಎ. ಎಸ್ ಚಂದ್ರಶೇಖರ್
ಶಿಕ್ಷಣ ಕ್ಷೇತ್ರ _ ಚಿಕ್ಕಮಗಳೂರಿನ  ಎನ್ ಷಡಾಕ್ಷರಿ, ಚಾಮರಾಜನಗರದ ಡಾ ಆರ್ ರಾಮಕೃಷ್ಣ, ದಾವಣಗೆರೆಯ ಎಂ ಜಿ ಈಶ್ವರಪ್ಪ, ಮೈಸೂರಿನ ಡಾ ಪುಟ್ಟಸಿದ್ದಯ್ಯ, ಬೆಳಗಾವಿಯ ಅಶೋಕ್ ಶೆಟ್ಟರ್, ಗದಗದ ಡಿ ಎಸ್ ದಂಡಿನ್,
ಹೊರನಾಡು ಕನ್ನಡಿಗ ವಿಭಾಗ – ದ.ಕ ದ ಕುಸುಮೋದರ ದೇರಣ್ಣ ಶೆಟ್ಟಿ ಕೇಲ್ತಡ್ಕಾ, ಮುಂಬಯಿನ ವಿದ್ಯಾ ಸಿಂಹಾಚಾರ್ಯಮಾಹುಲಿ
ಕ್ರೀಡಾ ಕ್ಷೇತ್ರ _ ತುಮಕೂರಿನ ಹೆಚ್ ಬಿ ನಂಜೇಗೌಡ, ಬೆಂಗಳೂರಿನ ಉಷಾರಾಣಿ
ಸಂಕೀರ್ಣ ಕ್ಷೇತ್ರ _ ಕೋಲಾರದ ಡಾ ಕೆ ವಿ ರಾಜು, ಹಾಸನದ ನಂ. ವೆಂಕೋಬರಾವ್, ವಿಶೇಷ ಚೇತನರಾದ ಮಂಡ್ಯದ ಡಾ ಕೆ ಎಸ್ ರಾಜಣ್ಣ, ಮಂಡ್ಯದ ವಿ ಲಕ್ಷ್ಮೀ ನಾರಾಯಣ್
ಸಂಘ ಸಂಸ್ಥೆ _ ಬೆಂಗಳೂರಿನ ಯೂತ್ ಫಾರ್ ಸೇವಾ, ಬಳ್ಳಾರಿಯ ದೇವದಾಸಿ ಸ್ವಾವಲಂಬನಾ ಕೇಂದ್ರ, ಬೆಂಗಳೂರಿನ ಬೆಟರ್ ಇಂಡಿಯಾ, ಬೆಂಗಳೂರು ಗ್ರಾಮಾಂತರದ ಯುವಬ್ರಿಗೆಡ್, ದಕ್ಷಿಣ ಕನ್ನಡದ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್

ಸಮಾಜ ಸೇವೆ _ ಉತ್ತರಕನ್ನಡದ ಎನ್ ಎಸ್ ಹೆಗಡೆ, ಚಿಕ್ಕಮಗಳೂರಿನ ಪ್ರೇಮಾ ಕೋದಂಡರಾಮ ಶ್ರೇಷ್ಠಿ, ಉಡುಪಿಯ ಮಣೆಗಾರ್ ಮೀರಾನ್ ಸಾಹೇಬ್, ಚಿಕ್ಕಮಗಳೂರಿನ ಮೋಹಿನಿ ಸಿದ್ದೇಗೌಡ

ವೈದ್ಯಕೀಯ ಕ್ಷೇತ್ರ_ ಬಾಗಲಕೋಟೆಯ ಅಶೋಕ್ ಸೊನ್ನದ್ , ಶಿವಮೊಗ್ಗದ ಡಾ ಬಿಎಸ್ ಶ್ರೀನಾಥ್, ಬಳ್ಳಾರಿಯ ಡಾ ಎ ನಾಗರತ್ನ, ರಾಮನಗರದ ಡಾ. ವೆಂಕಟಪ್ಪ
ಕೃಷಿ ಕ್ಷೇತ್ರ _ ಬೀದರ್ ನ ಸೂರತ್ ಸಿಂಗ್ ಕನೂರ್ ಸಿಂಗ್ ರಜಪೂತ್, ಚಿತ್ರದುರ್ಗದ ಎ ಸ್ ವಿ ಸುಮಂಗಲಮ್ಮ, ವೀರಭದ್ರ, ಕಲಬುರ್ಗಿಯ  ಡಾ ಸಿದ್ದರಾಮಪ್ಪ, ಬಸಂತರಾವ್ ಪಾಟೀಲ್, 

ಪರಿಸರ ಕ್ಷೇತ್ರ _ ಚಿಕ್ಕಬಳ್ಳಾಪುರದ  ಅಮರ ನಾರಾಯಣ, ವಿಜಯಪುರದ ನ್.ಡಿ ಪಾಟೀಲ್
ವಿಜ್ಞಾನ-ತಂತ್ರಜ್ಞಾನ  _ ಉಡುಪಿಯ ಪ್ರೊ. ಉಡುಪಿ ಶ್ರೀನಿವಾಸ್, ಶಿವಮೊಗ್ಗದ ಡಾ. ಚಿಂದಿ ವಾಸುದೇವಪ್ಪ, 

ಸಹಕಾರ ಕ್ಷೇತ್ರ– ಬೆಂಗಳೂರಿನ ಡಾ. ಸಿ ಎನ್ ಮಂಜೇಗೌಡ, 
ಬಯಲಾಟ – ಬೆಳಗಾವಿಯ ಕೆಂಪವ್ವ ಹರಿಜನ, ಹಾವೇರಿಯ ಚೆನ್ನಬಸಪ್ಪ ಬೆಂಡಿಗೇರಿ
ಯಕ್ಷಗಾನ – ಚಾಮರಾಜನಗರದ ಬಂಗಾರ್ ಆಚಾರಿ, ಶಿವಮೊಗ್ಗದ ಡಾ ಎಂಕೆ ರಮೇಶ್ ಆಚಾರ್ಯ
ರಂಗಭೂಮಿ _ ಹಾಸನದ ಅನುಸೂಯ, ದಾವಣಗೆರೆಯ  ಹೆಚ್ ಷಡಕ್ಷರಪ್ಪ, ಚಿತ್ರದುರ್ಗದ ತಿಪ್ಪೇಸ್ವಾಮಿ
ಚಲನಚಿತ್ರ ವಿಭಾಗದಲ್ಲಿ ತುಮಕೂರಿನ ಬಿ.ಎಸ್. ಬಸವರಾಜು, ಕೊಡಗಿನ ಆಪಾಢಾಂಡ ತಿಮ್ಮಯ್ಯ ರಘು - ಎ.ಟಿ. ರಘು,
ಚಿತ್ರಕಲೆ – ಧಾರವಾಡದ ಎಂ ಜೆ ವಾಜೇದ್ ಮಠ
ಜಾನಪದ _ ಬಾಗಲಕೋಟೆಯ ಗುರುರಾಜ್ ಹೊಸಕೋಟೆ, ಹಾಸನದ ಹಂಪನಹಳ್ಳಿ ತಿಮ್ಮೇಗೌಡ
ಜಾನಪದ ತೊಗಲುಬೊಂಬೆ ವಿಭಾಗ – ಕೊಪ್ಪಳದ ಕೇಶಪ್ಪಶಿಳ್ಳೆಕಕ್ಯಾತರ  
ಶಿಲ್ಪಕಲೆ _ ಮೈಸೂರಿನ ಎನ್ ಎಸ್ ಜನಾರ್ದನ ಮೂರ್ತಿ, 
ನೃತ್ಯ _ ನಾಟ್ಯ ವಿದೂಷಿ ಜ್ಯೋತಿಪಟ್ಟಾಭಿರಾಮನ್
ಚಿತ್ರಕಲೆ- ಧಾರವಾಡದ ಎಂ.ಜೆ. ವಾಜೇದ್ ಮಠ, ಜಾನಪದ - ಬಾಗಲಕೋಟೆಯ ಗುರುರಾಜ ಹೊಸಕೋಟೆ, ಹಾಸನದ ಡಾ. ಹಂಪನಹಳ್ಳಿ ತಿಮ್ಮೇಗೌಡ,
ಶಿಲ್ಪಕಲೆ- ಮೈಸೂರಿನ ಎನ್.ಎಸ್. ಜನಾರ್ದನ ಮೂರ್ತಿ, ನೃತ್ಯ- ನಾಟ್ಯ ವಿದೂಷಿ ಜ್ಯೋತಿ ಪಟ್ಟಾಭಿರಾಮನ್, ಇವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಸಂದಿದೆ.

 

Trending News