ಮೇಷ ರಾಶಿಗೆ ಬುಧನ ಸಂಚಾರ: ಈ 5 ರಾಶಿಯವರ ವೃತ್ತಿಜೀವನದಲ್ಲಿ ಯಶಸ್ಸು, ಸಂಪತ್ತು ಹರಿದುಬರಲಿದೆ!

ಬುಧ ಗ್ರಹವು ಮಾರ್ಚ್ 31ರಂದು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಬುಧ ಎಲ್ಲಾ 9 ಗ್ರಹಗಳಲ್ಲಿಯೇ ಅತ್ಯಂತ ಬುದ್ಧಿವಂತ ಮತ್ತು ಯಶಸ್ವಿ ಎಂದು ಪರಿಗಣಿಸಲಾಗಿದೆ. ಬುಧನ ಈ ಸಂಚಾರದಿಂದ 5 ರಾಶಿಗಳ ಜೀವನದಲ್ಲಿ ಹಣದ ಹರಿವು ಹೆಚ್ಚಾಗಲಿದೆ.

Written by - Puttaraj K Alur | Last Updated : Mar 5, 2023, 06:52 AM IST
  • ಬುಧದ ಸಂಚಾರವು ಕಟಕ ರಾಶಿಯವರ ಜೀವನದಲ್ಲಿ ತುಂಬಾ ಅನುಕೂಲಕರವಾಗಿರುತ್ತದೆ
  • ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ವೃಶ್ಚಿಕ ರಾಶಿಯವರಿಗೆ ವೃತ್ತಿಪರ ಜೀವನದಲ್ಲಿ ಪ್ರಗತಿ
  • ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದ ಮೇಷ ರಾಶಿಯವರಿಗೆ ಒಳ್ಳೆಯ ಸುದ್ದಿ ಸಿಗಬಹುದು
ಮೇಷ ರಾಶಿಗೆ ಬುಧನ ಸಂಚಾರ: ಈ 5 ರಾಶಿಯವರ ವೃತ್ತಿಜೀವನದಲ್ಲಿ ಯಶಸ್ಸು, ಸಂಪತ್ತು ಹರಿದುಬರಲಿದೆ!  title=
ಮೇಷ ರಾಶಿಗೆ ಬುಧನ ಸಂಚಾರ

ನವದೆಹಲಿ: ಬುಧವನ್ನು ಗ್ರಹಗಳ ರಾಜಕುಮಾರನೆಂದು ಕರೆಯಲಾಗುತ್ತದೆ. ಇದನ್ನು ನವಗ್ರಹಗಳಲ್ಲಿ ಅತ್ಯಂತ ಬುದ್ಧಿವಂತ ಮತ್ತು ಜಿಜ್ಞಾಸೆಯ ಗ್ರಹವೆಂದು ಪರಿಗಣಿಸಲಾಗಿದೆ. ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹದ ಸ್ಥಾನವು ದುರ್ಬಲವಾಗಿದ್ದರೆ, ಅವನು ಎಲ್ಲಾ ಕ್ಷೇತ್ರಗಳಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಬುಧ ಗ್ರಹವು ತನ್ನ ರಾಶಿ ಬದಲಾಯಿಸಿದಾಗ ಅನೇಕ ರಾಶಿಗಳ ಜೀವನದ ಮೇಲೆ ಪರಿಣಾಮ ಉಂಟಾಗುತ್ತದೆ. ಈ ರಾಶಿಯವರು ಎಲ್ಲ ರೀತಿಯ ಯಶಸ್ಸು ಪಡೆಯುತ್ತಾರೆ. ಬುಧ ಮಾರ್ಚ್ 31ರಂದು ಮೇಷ ರಾಶಿಗೆ ಪ್ರವೇಶಿಸಲಿದೆ. ಈ ಸಂಕ್ರಮದಿಂದ 5 ರಾಶಿಯವರ ಮನೆಯ ಸಂಪತ್ತು ತುಂಬಿ-ತುಳಕಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.

ಬುಧ ಸಂಕ್ರಮಣದಿಂದ ಈ ರಾಶಿಯವರಿಗೆ ಲಾಭ  

ಕಟಕ ರಾಶಿ: ಬುಧದ ಸಂಚಾರವು ಈ ರಾಶಿಯವರ ಜೀವನದಲ್ಲಿ ಅನುಕೂಲಕರವಾಗಿರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಉತ್ಸಾಹದಿಂದ ಮುನ್ನಡೆಯುತ್ತೀರಿ ಮತ್ತು ಎಲ್ಲಾ ಗುರಿಗಳನ್ನು ತಲುಪುತ್ತೀರಿ. ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಲಿರುವವರಿಗೆ ಈ ಸಮಯ ಫಲಪ್ರದವಾಗಲಿದೆ. ಶಿಕ್ಷಕರಿಗೆ, ಸಲಹೆಗಾರರಿಗೆ, ವಕೀಲರಿಗೆ, ಮಾಧ್ಯಮದವರಿಗೆ ಈ ಅವಧಿ ಉತ್ತಮವಾಗಿರುತ್ತದೆ. ವೃತ್ತಿಯಲ್ಲಿ ಪ್ರಗತಿಯ ಜೊತೆಗೆ ಸಮಾಜದಲ್ಲಿ ಕೀರ್ತಿಯನ್ನೂ ಪಡೆಯಬಹುದು.

ಇದನ್ನೂ ಓದಿ: Rajyog: 30 ವರ್ಷಗಳ ಬಳಿಕ 3 ರಾಶಿಗಳ ಕುಂಡಲಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಈ ಶುಭಯೋಗ, ಆಕಸ್ಮಿಕ ಧನಲಾಭದ ಜೊತೆಗೆ ಬಡ್ತಿ ಭಾಗ್ಯ! 

ವೃಶ್ಚಿಕ ರಾಶಿ: ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ವೃತ್ತಿಪರ ಜೀವನದಲ್ಲಿ ಪ್ರಗತಿ ಪಡೆಯುತ್ತಾರೆ. ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ಯಶಸ್ಸನ್ನು ಪಡೆಯುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಅಪೇಕ್ಷಿತ ಯಶಸ್ಸು ಸಿಗುವುದಿಲ್ಲ. ವ್ಯಾಪಾರ ಪಾಲುದಾರರೊಂದಿಗೆ ವ್ಯವಹಾರ ಉತ್ತಮವಾಗಿರುತ್ತದೆ. ದುಂದು ವೆಚ್ಚದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕು.

ಮೇಷ ರಾಶಿ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ಮಾರ್ಕೆಟಿಂಗ್, ಹಣಕಾಸು, ಸಮಾಲೋಚನೆ ಮತ್ತು ಬರವಣಿಗೆಯಲ್ಲಿ ತೊಡಗಿರುವ ಜನರಿಗೆ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ಸಹೋದ್ಯೋಗಿಗಳೊಂದಿಗೆ ವಾದ ಮಾಡುವುದನ್ನು ತಪ್ಪಿಸಿ. ಕೆಲಸದ ಹೊರೆಯಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು.

ಕುಂಭ ರಾಶಿ: ಈ ರಾಶಿಯ ಜನರು ಉದ್ಯೋಗ-ವ್ಯವಹಾರದಲ್ಲಿ ತೊಡಗಿರುವವರು ಬಡ್ತಿ ಪಡೆಯುವ ಸಾಧ್ಯತೆಯಿದೆ. ಪ್ರೇಮ ಸಂಬಂಧದಲ್ಲಿ ತೊಡಗಿರುವ ದಂಪತಿಗಳ ವಿವಾಹದ ಬಗ್ಗೆ ಮಾತನಾಡಬಹುದು. ಮಕ್ಕಳ ಸಂತೋಷ ಬಯಸುವ ಜನರು ಒಳ್ಳೆಯ ಸುದ್ದಿ ಪಡೆಯಬಹುದು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದ್ದು, ಉತ್ತಮ ಅಂಕ ಗಳಿಸಬಹುದು. ಗಂಟಲು ಅಥವಾ ಕೈ ಸಮಸ್ಯೆಯು ನಿಮ್ಮನ್ನು ಕಾಡಬಹುದು, ಇದರ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು.

ಇದನ್ನೂ ಓದಿ: Chanakya Niti : ನಿಮ್ಮ ಜೀವನದ ಈ ರಹಸ್ಯಗಳನ್ನು  ಅಪ್ಪಿತಪ್ಪಿಯೂ ಯಾರಿಗೂ ಹೇಳಬೇಡಿ, ಇಲ್ಲದಿದ್ದರೆ ಜೀವನವೇ ಹಾಳಾಗುತ್ತೆ!    

ಮಿಥುನ ರಾಶಿ: ಬುಧ ಸಂಕ್ರಮಣದೊಂದಿಗೆ ನಿಮ್ಮ ವೃತ್ತಿಪರ ಜೀವನವು ಯಶಸ್ವಿಯಾಗಲಿದೆ. ಈ ಅವಧಿಯಲ್ಲಿ ನೀವು ಅನೇಕ ಉತ್ತಮ ವ್ಯಾಪಾರ-ವ್ಯವಹಾರ ಮಾಡುತ್ತೀರಿ. ನೀವು ಸೃಜನಶೀಲತೆ ಬಳಸಿ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ನಿಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಮನಸ್ಥಿತಿ ಬದಲಾವಣೆಯಂತಹ ಸಮಸ್ಯೆಗಳು ನಿಮ್ಮನ್ನು ತೊಂದರೆಗೊಳಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News