ಮೀನ ರಾಶಿಗೆ ಗುರುವಿನ ಪ್ರವೇಶ: ಈ 4 ರಾಶಿಯವರ ಅದೃಷ್ಟವೇ ಬದಲಾಗಲಿದೆ, ಹಣದ ಮಳೆಯಾಗಲಿದೆ!

ದೇವರ ಗುರು ಎಂದು ಕರೆಯಲ್ಪಡುವ ಗುರು ಗ್ರಹವು ನವೆಂಬರ್ 24ರಂದು ರಾಶಿ ಬದಲಾಯಿಸಲಿದೆ. ಇದರಿಂದ 4 ರಾಶಿಗಳ ಅದೃಷ್ಟವು ಸುಧಾರಿಸಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.

Written by - Puttaraj K Alur | Last Updated : Nov 5, 2022, 07:34 AM IST
  • ಗುರು ನವೆಂಬರ್ 24ರಂದು ರಾಶಿ ಬದಲಾಯಿಸಿ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ
  • ಗುರುವಿನ ರಾಶಿ ಬದಲಾವಣೆಯಿಂದ ಕರ್ಕ, ವೃಶ್ಚಿಕ, ಕನ್ಯಾ, ವೃಷಭ ರಾಶಿಗಳ ಭವಿಷ್ಯ ಸುಧಾರಿಸಲಿದೆ
  • ಗುರು ಗ್ರಹವನ್ನು ಮೀನ ಮತ್ತು ಧನು ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ
ಮೀನ ರಾಶಿಗೆ ಗುರುವಿನ ಪ್ರವೇಶ: ಈ 4 ರಾಶಿಯವರ ಅದೃಷ್ಟವೇ ಬದಲಾಗಲಿದೆ, ಹಣದ ಮಳೆಯಾಗಲಿದೆ! title=
ಮೀನ ರಾಶಿಗೆ ಗುರುವಿನ ಪ್ರವೇಶ

ನವದೆಹಲಿ: ಜ್ಯೋತಿಷ್ಯದ ಪ್ರಕಾರ ಪ್ರತಿ ತಿಂಗಳು ಕೆಲವು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಒಂದು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ ಅದು ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ.

ದೇವತೆಗಳ ಗುರುವೆಂದು ಪರಿಗಣಿತವಾಗಿರುವ ಗುರು ಈ ತಿಂಗಳು ನವೆಂಬರ್ 24ರಂದು ರಾಶಿಯನ್ನು ಬದಲಾಯಿಸಿ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಗುರುವಿನ ಈ ರಾಶಿಚಕ್ರ ಚಿಹ್ನೆಯ ಬದಲಾವಣೆಯ ಪರಿಣಾಮವು 4 ರಾಶಿಯವರಿಗೆ ದೊಡ್ಡ ಲಾಭವನ್ನು ತುಂದುಕೊಡಲಿದೆ. ಗುರು ರಾಶಿ ಬದಲಾಯಿಸುವುದರಿಂದ ಈ ರಾಶಿಯವರ ಮನೆಯಲ್ಲಿ ಬಹಳಷ್ಟು ಸುಖ-ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಇದಲ್ಲದೆ ಸಾಕಷ್ಟು ಹಣದ ಮಳೆಯಾಗುತ್ತದೆ.

ಇದನ್ನೂ ಓದಿ: Money Tips: ಹವನದ ಚಿತಾಭಸ್ಮವು ನಿಮಗೆ ಸಾಕಷ್ಟು ಸಂಪತ್ತು & ಅದೃಷ್ಟ ತಂದುಕೊಡುತ್ತದೆ!

ಜುಲೈ 29ರಂದು ದೇವಗುರು ಗುರುಗ್ರಹವು ಹಿಮ್ಮೆಟ್ಟಿತು

ಧಾರ್ಮಿಕ ವಿದ್ವಾಂಸರ ಪ್ರಕಾರ, ಗುರು ಈ ವರ್ಷ ಜುಲೈ 29ರಂದು ಮೀನ ರಾಶಿಯಲ್ಲಿ ಹಿಮ್ಮುಖವಾಗಿದೆ. ಈಗ ಅದು ನವೆಂಬರ್ 24ರಂದು ಈ ರಾಶಿಯಲ್ಲಿ ಬದಲಾವಣೆಯಾಗಲಿದೆ. ಗುರು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಸುಮಾರು 1 ವರ್ಷ ತೆಗೆದುಕೊಳ್ಳುತ್ತದೆ. ಎಲ್ಲಾ 12 ಗ್ರಹಗಳಲ್ಲಿ ಗುರು ಅತ್ಯಂತ ಮಂಗಳಕರ ಗ್ರಹವೆಂದು ನಂಬಲಾಗಿದೆ. ಇದು ಸಂಪತ್ತು, ವೈಭವ, ಶಿಕ್ಷಣ, ಮಕ್ಕಳು, ಆಧ್ಯಾತ್ಮಿಕತೆ, ಮದುವೆ, ಗೌರವ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ. ಈ ಸಂಚಾರದಿಂದ ಅನೇಕ ಜನರ ಆಶಯಗಳು ಈಡೇರಲಿವೆ.

ಈ 4 ರಾಶಿಗಳ ಮೇಲೆ ಗುರುವಿನ ಕೃಪೆ  

ಗುರುವಿನ ರಾಶಿ ಬದಲಾವಣೆಯಿಂದ ಕರ್ಕ, ವೃಶ್ಚಿಕ, ಕನ್ಯಾ, ವೃಷಭ ರಾಶಿಗಳ ಭವಿಷ್ಯ ಸುಧಾರಿಸಲಿದೆ ಎನ್ನುತ್ತಾರೆ ಜ್ಯೋತಿಷಿಗಳು. ಈ ರಾಶಿಯವರು ಉದ್ಯೋಗ-ವ್ಯವಹಾರದಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಹಲವರಿಗೆ ಬಡ್ತಿ ಮತ್ತು ಇನ್‌ಕ್ರಿಮೆಂಟ್ ಸಿಗುವ ಸಾಧ್ಯತೆಗಳೂ ಇವೆ. ಇವರು ವ್ಯವಹಾರದಲ್ಲಿ ಉತ್ತಮ ಲಾಭ ಪಡೆಯಬಹುದು. ಹಳೆಯ ನ್ಯಾಯಾಲಯದ ಪ್ರಕರಣಗಳು ನಿಮ್ಮ ಪರವಾಗಿರುತ್ತವೆ. ದೀರ್ಘಕಾಲದ ಕಾಯಿಲೆ ಗುಣವಾಗಲಿದೆ. ಮಕ್ಕಳ ವಿದ್ಯಾಭ್ಯಾಸದ ಕಡೆಯಿಂದ ಒಳ್ಳೆಯ ಸುದ್ದಿ ಸಿಗಬಹುದು.

ಇದನ್ನೂ ಓದಿ: Chanakya Niti : ಹೆಣ್ಣಿನ ಈ ಗುಣಗಳಿಗೆ ತಲೆ ಬಾಗಲೇಬೇಕಂತೆ ಪುರುಷರು!

ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿ 'ಗುರು'

ಗುರು ಗ್ರಹವನ್ನು ಮೀನ ಮತ್ತು ಧನು ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಇದು ಯಾವಾಗಲೂ ಈ ರಾಶಿಗಳ ಮೇಲೆ ವಿಶೇಷ ಅನುಗ್ರಹವನ್ನು ಹೊಂದಿರುತ್ತಾರೆ. ಮತ್ತೊಂದೆಡೆ ಜಾತಕದಲ್ಲಿ ಗುರುವಿನ ಸ್ಥಾನವು ಉತ್ತಮವಾಗಿಲ್ಲದಿದ್ದರೆ, ಅವರು ವಿಶೇಷ ಕ್ರಮ  ತೆಗೆದುಕೊಳ್ಳಬೇಕಾಗುತ್ತದೆ. ಇಂತವರು ಪ್ರತಿ ಗುರುವಾರದಂದು ಭಗವಾನ್ ವಿಷ್ಣುವನ್ನು ಆರಾಧಿಸಬೇಕು. ಅಲ್ಲದೆ ಹಳದಿ ವಸ್ತುಗಳನ್ನು ದಾನ ಮಾಡಬೇಕು ಮತ್ತು ಸಾಧ್ಯವಾದಷ್ಟು ಹಸುಗಳಿಗೆ ಆಹಾರ ತಿನ್ನಿಸಬೇಕು. ಈ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗುರುವು ಸಂತಸಗೊಂಡು ವ್ಯಕ್ತಿಯ ಮೇಲೆ ತನ್ನ ಆಶೀರ್ವಾದ ನೀಡುತ್ತಾನೆಂದು ನಂಬಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News