ಮೂರು ದಿನಗಳ ನಂತರ ರೂಪುಗೊಳ್ಳಲಿದೆ ಲಕ್ಷ್ಮೀ ನಾರಾಯಣ ಯೋಗ, ಈ ಎರಡು ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲು

ಜ್ಯೋತಿಷಿಗಳ ಪ್ರಕಾರ ಬುಧ ಮತ್ತು ಶುಕ್ರ ಒಂದೇ ರಾಶಿಯಲ್ಲಿದ್ದಾಗ ಲಕ್ಷ್ಮೀ ನಾರಾಯಣ ಯೋಗ ರೂಪುಗೊಳ್ಳುತ್ತದೆ. ಜ್ಯೋತಿಷ್ಯದಲ್ಲಿ ಈ ಯೋಗವನ್ನು  ಬಹಳ ಅಪರೂಪವೆಂದು ಪರಿಗಣಿಸಲಾಗಿದೆ.  

Written by - Ranjitha R K | Last Updated : Jun 15, 2022, 01:33 PM IST
  • ಮೂರು ದಿನಗಳ ನಂತರ ರೂಪುಗೊಳ್ಳಲಿದೆ ಲಕ್ಷ್ಮೀ ನಾರಾಯಣ ಯೋಗ
  • ಜ್ಯೋತಿಷ್ಯದಲ್ಲಿ ಈ ಯೋಗವನ್ನು ಬಹಳ ಅಪರೂಪವೆಂದು ಪರಿಗಣಿಸಲಾಗಿದೆ
  • ಈ ಎರಡು ರಾಶಿಯವರಿಗೆ ಹೊತ್ತು ತರಲಿದೆ ಅದೃಷ್ಟ
ಮೂರು ದಿನಗಳ ನಂತರ ರೂಪುಗೊಳ್ಳಲಿದೆ ಲಕ್ಷ್ಮೀ ನಾರಾಯಣ ಯೋಗ, ಈ ಎರಡು ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲು  title=
Venus transit (file photo)

ಬೆಂಗಳೂರು : ಶುಕ್ರ ರಾಶಿ ಪರಿವರ್ತನೆ 2022 ಜೂನ್: ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗುತ್ತದೆ.ಯಾವುದೇ ಗ್ರಹವನ್ನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುವ ಪ್ರಕ್ರಿಯೆಯನ್ನು ರಾಶಿ ಬದಲಾವಣೆ ಅಥವಾ ರಾಶಿ ಸಂಕ್ರಮಣ ಎಂದು ಕರೆಯಲಾಗುತ್ತದೆ. ಜೂನ್ 18 ರಂದು ಶುಕ್ರನು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಶುಕ್ರನು ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಬುಧ ಈಗಾಗಲೇ ಈ ರಾಶಿಯಲ್ಲಿದ್ದಾನೆ. ಜ್ಯೋತಿಷಿಗಳ ಪ್ರಕಾರ ಬುಧ ಮತ್ತು ಶುಕ್ರ ಒಂದೇ ರಾಶಿಯಲ್ಲಿದ್ದಾಗ ಲಕ್ಷ್ಮೀ ನಾರಾಯಣ ಯೋಗ ರೂಪುಗೊಳ್ಳುತ್ತದೆ. ಜ್ಯೋತಿಷ್ಯದಲ್ಲಿ ಈ ಯೋಗವನ್ನು  ಬಹಳ ಅಪರೂಪವೆಂದು ಪರಿಗಣಿಸಲಾಗಿದೆ. ಬುಧ ಮತ್ತು ಶುಕ್ರನ ಸಂಯೋಜನೆಯಿಂದ ರೂಪುಗೊಂಡ ಯೋಗವು ಕೆಲವು ರಾಶಿಯವರಿಗೆ ಅದೃಷ್ಟವನ್ನೇ ಹೊತ್ತು ತರುತ್ತದೆ.  

ಶುಕ್ರ ಮತ್ತು ಬುಧದ ಅಂಶಗಳು ಯಾವುವು?
ಜ್ಯೋತಿಷ್ಯದಲ್ಲಿ, ಶುಕ್ರನನ್ನು ಕಲೆ, ಸಾಹಿತ್ಯ ಮತ್ತು ಸೌಕರ್ಯಗಳ ಅಂಶವೆಂದು ಪರಿಗಣಿಸಲಾಗಿದೆ. ಬುಧ ಗ್ರಹವನ್ನು ಬುದ್ಧಿವಂತಿಕೆ, ವ್ಯವಹಾರ ಮತ್ತು ಸಂವಹನ ಇತ್ಯಾದಿಗಳ ಅಂಶವೆಂದು ಹೇಳಲಾಗುತ್ತದೆ. ಜಾತಕದಲ್ಲಿ ಶುಕ್ರ ಮತ್ತು ಬುಧನ ಸ್ಥಾನವು ಉತ್ತುಂಗದಲ್ಲಿದ್ದರೆ, ಆ ವ್ಯಕ್ತಿಗೆ ಜೀವನದಲ್ಲಿ ಯಾವ  ಕೊರತೆಯೂ ಇರುವುದಿಲ್ಲ. 

ಇದನ್ನೂ ಓದಿ :  Surya Gochar 2022: ಮಿಥುನ ರಾಶಿಗೆ ಸೂರ್ಯನ ಪ್ರವೇಶ, ಈ ರಾಶಿಯವರು ಜಾಗರೂಕರಾಗಿರಿ

ಲಕ್ಷ್ಮೀ ನಾರಾಯಣ ಯೋಗವು ಈ ರಾಶಿಯವರಿಗೆ ಮಂಗಳಕರ : 
ವೃಷಭ ರಾಶಿ  : ಲಕ್ಷ್ಮೀ ನಾರಾಯಣ ಯೋಗವು ವೃಷಭ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಜೂನ್ 18 ರಿಂದ ಜುಲೈ 2 ರವರೆಗಿನ ಸಮಯವು  ಈ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ವ್ಯವಹಾರದಲ್ಲಿ ಲಾಭವಾಗಲಿದೆ. ಕೆಲಸ ಮಾಡುವವರಿಗೂ ಒಳ್ಳೆಯ ಸುದ್ದಿ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ಸೌಕರ್ಯಗಳು ಹೆಚ್ಚಾಗಬಹುದು.

ವೃಶ್ಚಿಕ ರಾಶಿ :  ವೃಶ್ಚಿಕ ರಾಶಿಯ ಜನರು ಲಕ್ಷ್ಮೀ ನಾರಾಯಣ ಯೋಗದಿಂದ ಬಹಳ ಲಾಭ ಪಡೆಯುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಕೆಲಸ ಮಾಡುವವರು ಉನ್ನತ ಅಧಿಕಾರಿಗಳ ಬೆಂಬಲವನ್ನು ಪಡೆಯಲಿದ್ದಾರೆ. ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಉದ್ಯೋಗ ಹುಡುಕುತ್ತಿರುವವರಿಗೆ ಈ ಸಮಯದಲ್ಲಿ ಹೊಸ ಉದ್ಯೋಗ ಸಿಗಲಿದೆ. 

ಇದನ್ನೂ ಓದಿ : Salt Remedies: ಚಿಟಿಕೆ ಉಪ್ಪಿನಲ್ಲಿದೆ ಭಾಗ್ಯ ಬದಲಾಯಿಸುವ ಮಹಾ ತಾಕತ್ತು, ಈ ಉಪಾಯ ಒಮ್ಮೆ ಟ್ರೈ ಮಾಡಿ ನೋಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News