Vastu Tips: ಸಂಪತ್ತು ವೃದ್ಧಿಗೆ, ಸುಖಕರ ಜೀವನಕ್ಕೆ ಮನೆ ಮುಂದಿರಲಿ ಅಶೋಕ ಮರ

ಭಾರತೀಯರ ನಂಬಿಕೆಯಲ್ಲಿ ಕೆಲವು ಮರಗಳು ಮತ್ತು ಸಸ್ಯಗಳು ದೇವ-ದೇವತೆಗಳ ವಾಸಸ್ಥಾನವೆಂದು ನಂಬಲಾಗಿದೆ. ಅವುಗಳನ್ನು ಮನೆಯ ಸುತ್ತಲೂ ನೆಡುವುದರಿಂದ ಧನಾತ್ಮಕ ಶಕ್ತಿಯು ಹರಡುತ್ತದೆ. ಅದೇ ರೀತಿ ಜೀವನದಲ್ಲಿ ಸುಖ-ಸಂತೋಷ, ಸಮೃದ್ಧಿಯೂ ಬರುತ್ತದೆ.

Written by - Puttaraj K Alur | Last Updated : Mar 1, 2022, 05:09 PM IST
  • ಅಶೋಕ ವೃಕ್ಷವು ಔಷಧೀಯ ಗುಣಗಳನ್ನು ಹೊಂದಿದೆ ಎಂದು ಗ್ರಂಥಗಳಲ್ಲಿ ವಿವರಿಸಲಾಗಿದೆ
  • ಮನೆ ಮುಂದೆ ಅಶೋಕ ಮರ ನೆಟ್ಟರೆ ದುಃಖ ಮಾಯವಾಗಿ ಸುಖ-ಸಂತೋಷ ನೆಲೆಸುತ್ತದೆ
  • ಸಂಪತ್ತು ವೃದ್ಧಿಗೆ, ಕೆಲಸದಲ್ಲಿ ಯಶಸ್ಸು ಸಿಗಬೇಕಾದರೆ ಅಶೋಕ ಮರವನ್ನು ಪೂಜಿಸಬೇಕು
Vastu Tips: ಸಂಪತ್ತು ವೃದ್ಧಿಗೆ, ಸುಖಕರ ಜೀವನಕ್ಕೆ ಮನೆ ಮುಂದಿರಲಿ ಅಶೋಕ ಮರ title=
ಸಂಪತ್ತು ವೃದ್ಧಿಗೆ ಅಶೋಕ ಮರ ಪರಿಣಾಮಕಾರಿ

ನವದೆಹಲಿ: ಅಶೋಕ ವೃಕ್ಷವು(Ashoka Tree Benefits)ಔಷಧೀಯ ಗುಣಗಳನ್ನು ಹೊಂದಿದೆ ಎಂದು ಗ್ರಂಥಗಳಲ್ಲಿ ವಿವರಿಸಲಾಗಿದೆ. ಇದನ್ನು ಮನೆಯ ಸುತ್ತ ಹಚ್ಚಿದರೆ ದುಃಖ ಮಾಯವಾಗುತ್ತದೆ ಎಂಬ ನಂಬಿಕೆಯೂ ಇದೆ. ಅಶೋಕ ವೃಕ್ಷವಿರುವಲ್ಲಿ ಅದರ ಸುತ್ತ ಧನಾತ್ಮಕ ಶಕ್ತಿಯ ಸಂವಹನವಿರುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ವಾತಾವರಣವು ಶಾಂತ ಮತ್ತು ಸಂತೋಷದಿಂದ ಕೂಡಿರುತ್ತದೆ. ಸಂತೋಷ, ಶಾಂತಿ ಮತ್ತು ಸಂಪತ್ತು ವೃದ್ಧಿಗಾಗಿ ಅಶೋಕ ಎಲೆಗಳಿಂದ ತಂತ್ರಗಳನ್ನು ಮಾಡಲಾಗುತ್ತದೆ. ಅಶೋಕ ಎಲೆ(Ashoka Leaf)ಗಳಿಂದ ಹೇಗೆ ಚಮತ್ಕಾರಗಳನ್ನು ಮಾಡಲಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.

ಸುಖ-ಶಾಂತಿ ಮತ್ತು ಸಮೃದ್ಧಿಗಾಗಿ

ಸುಖ-ಶಾಂತಿ ಮತ್ತು ಸಮೃದ್ಧಿಗಾಗಿ ಮನೆಯಲ್ಲಿ ಅಶೋಕ ಮರವನ್ನು ನೆಟ್ಟು(Benefits Of Ashoka Tree)ಅದರ ಬೇರಿಗೆ ನಿಯಮಿತವಾಗಿ ನೀರು ಹಾಕಿ ಪೋಷಿಸಬೇಕು. ಹೀಗೆ ಮಾಡುವುದರಿಂದ ಕ್ರಮೇಣ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಇದರೊಂದಿಗೆ ಕುಟುಂಬ ಸದಸ್ಯರ ಜೀವನವೂ ಸುಖಮಯವಾಗಿರುತ್ತದೆ.

ಇದನ್ನೂ ಓದಿ: ಸರ್ವಗುಣ ಸಂಪನ್ನರಾಗಿರುತ್ತಾರೆ ಈ ರಾಶಿಯ ಹುಡುಗಿಯರು, ಉತ್ತಮ ಸೊಸೆ ಎಂದು ಸಾಬೀತಾಗುತ್ತಾರೆ

ಯಶಸ್ಸು ಸಾಧಿಸಲು

ನೀವು ಕೆಲವು ಕೆಲಸಗಳಲ್ಲಿ ಯಶಸ್ಸನ್ನು(Ashoka Tree Remedy For Wealth) ಪಡೆಯಲು ಪ್ರಯತ್ನಿಸುತ್ತಿದ್ದರೆ ಅಶೋಕ ಮರ ಪ್ರಯೋಜನಕ್ಕೆ ಬರುತ್ತದೆ. ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗದಿದ್ದರೆ ಪುಷ್ಯ ನಕ್ಷತ್ರದಲ್ಲಿ ಅಶೋಕ ಮರದ 11 ಬೀಜಗಳನ್ನು ತೆಗೆದುಕೊಳ್ಳಿ. ಈ ಬೀಜಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಪೂಜಾ ಸ್ಥಳದಲ್ಲಿ ಇರಿಸಿ. ನೀವು ಕೆಲಸಕ್ಕಾಗಿ ಮನೆಯಿಂದ ಹೊರಟಾಗ ತಪ್ಪದೇ ಅಶೋಕ ಮರಕ್ಕೆ ಭೇಟಿ ನೀಡಿ ಪ್ರಾರ್ಥಿಸಿ. ಹೀಗೆ ಮಾಡುವುದರಿಂದ ಕೆಲಸದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ.     

ವಾಸ್ತು ದೋಷ ಹೋಗಲಾಡಿಸಲು

ವಾಸ್ತು ಶಾಸ್ತ್ರದ ಪ್ರಕಾರ ಅಶೋಕ ಮರವು ಮನೆಯ ವಾಸ್ತು ದೋಷ(Vastu Dosha)ಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಅಶೋಕ ಮರವನ್ನು ನೆಟ್ಟ ಮನೆಯ ಮುಂದೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಇರುವುದಿಲ್ಲ. ಇದಲ್ಲದೇ ಸಂಜೆ ವೇಳೆ ಈ ಮರದ ಕೆಳಗೆ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹರಡುತ್ತದೆ.

ಇದನ್ನೂ ಓದಿ: ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡುವ ಅಭ್ಯಾಸ ಇದೆಯಾ? ಹಾಗಾದ್ರೆ ಹಾನಿ ಕಟ್ಟಿಟ್ಟ ಬುತ್ತಿ!

ಮದುವೆಯ ಅಡೆತಡೆಗಳನ್ನು ತೊಡೆದುಹಾಕಲು

ಮದುವೆ ವಿಳಂಬವಾದರೆ ಅಥವಾ ಯಾವುದೇ ರೀತಿಯ ಅಡೆತಡೆಗಳು ಬಂದರೆ ಅದನ್ನು ಹೋಗಲಾಡಿಸಲು ಅಶೋಕ ಮರದ ಎಲೆಗಳನ್ನು ಮನೆಗೆ ತಂದು ನೀರಿನಲ್ಲಿ ಬೆರೆಸಿ ಸ್ನಾನ ಮಾಡಬೇಕು. ಇದರ ನಂತರ ಅಶೋಕ ಎಲೆಗಳನ್ನು ಅರಳಿ ಮರದ ಕೆಳಗೆ ಹಾಕಿ. 42 ದಿನಗಳ ಕಾಲ ನಿರಂತರವಾಗಿ ಹೀಗೆ ಮಾಡುವುದರಿಂದ ನಿಮಗೆ ಪ್ರಯೋಜನವಾಗಲಿದೆ. ಅವಿವಾಹಿತ ಯುವತಿ ತನ್ನ ಮುಟ್ಟಿನ(Periods) ಸಮಯದಲ್ಲಿ ಈ ತಂತ್ರವನ್ನು ಮಾಡಬಾರದು. ಈ ಟ್ರಿಕ್ ಮಾಡುವುದರಿಂದ ಮದುವೆಗೆ ಸಂಬಂಧಿಸಿದ ಸಮಸ್ಯೆ ಪರಿಹಾರವಾಗುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News