ಇನ್ನು 24 ಗಂಟೆಗಳಲ್ಲಿ ಈ ರಾಶಿಯವರ ಭಾಗ್ಯ ಬದಲಿಸಲಿದ್ದಾನೆ ಶನಿ ಮಹಾತ್ಮ..! ತೆರೆಯಲಿದ್ದಾನೆ ಅದೃಷ್ಟದ ಬಾಗಿಲು

ಶನಿವಾರದಂದು ಅಮಾವಾಸ್ಯೆ ಬೀಳುವುದರಿಂದ ಇದನ್ನು ಶನಿಶ್ಚರಿ ಅಥವಾ ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.  ಈ ಅಮಾವಾಸ್ಯೆಯಂದು ಹಲವು ಶುಭ ಯೋಗಗಳು ಕೂಡ ರೂಪುಗೊಳ್ಳುತ್ತಿದ್ದು, ಇದು 5 ರಾಶಿಯವರಿಗೆ ಶುಭವಾಗಲಿದೆ.

Written by - Ranjitha R K | Last Updated : Aug 26, 2022, 08:31 AM IST
  • ನಾಳೆ ಶನಿಶ್ಚರಿ ಅಥವಾ ಶನಿ ಅಮಾವಾಸ್ಯೆ
  • ಈ ಅಮಾವಾಸ್ಯೆಯಂದು ರೂಪುಗೊಳ್ಳುತ್ತಿದೆ ವಿಶೇಷ ಶುಭ ಯೋಗ
  • 5 ರಾಶಿಯವರಿಗೆಅತ್ಯಂತ ಶುಭ ಫಲ ನೀಡಲಿದೆ
ಇನ್ನು 24 ಗಂಟೆಗಳಲ್ಲಿ ಈ ರಾಶಿಯವರ ಭಾಗ್ಯ ಬದಲಿಸಲಿದ್ದಾನೆ ಶನಿ ಮಹಾತ್ಮ..!  ತೆರೆಯಲಿದ್ದಾನೆ ಅದೃಷ್ಟದ ಬಾಗಿಲು   title=
Shanishchari Amavasya effect (file photo)

ಬೆಂಗಳೂರು : ವರ್ಷದ ಕೊನೆಯ ಅಮಾವಾಸ್ಯೆಯು ಭಾದ್ರಪದ ಮಾಸದಲ್ಲಿ ಬೀಳುತ್ತಿದೆ. ಆಗಸ್ಟ್ 27, 2022, ಶನಿವಾರದಂದು ಭಾದ್ರಪದ ಅಮವಾಸ್ಯೆ. ಶನಿವಾರದಂದು ಅಮಾವಾಸ್ಯೆ ಬೀಳುವುದರಿಂದ ಇದನ್ನು ಶನಿಶ್ಚರಿ ಅಥವಾ ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಅಮಾವಾಸ್ಯೆಯಂದು ಹಲವು ಶುಭ ಯೋಗಗಳು ಕೂಡ ರೂಪುಗೊಳ್ಳುತ್ತಿದ್ದು, ಇದು 5 ರಾಶಿಯವರಿಗೆ ಶುಭವಾಗಲಿದೆ. ಭಾದ್ರಪದ ಅಮಸ್ಯೆಯಂದು ದಾನ ಮಾಡುವುದು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಅಲ್ಲದೆ, ಈ ಶನಿವಾರದಂದು, ಈ ಕೆಳಗಿನ ರಾಶಿಯವರು ಶನಿಮಹಾತ್ಮನ ವಿಶೇಷ ಕೃಪೆಗೆ ಪಾತ್ರರಾಗಲಿದ್ದಾರೆ. 

ಮೇಷ : ಕಠಿಣ ಪರಿಶ್ರಮಕ್ಕೆ ಶುಭ ಫಲ ಸಿಗಲಿದೆ. ಮೇಷ ರಾಶಿಯವರ ಜಾತಕದಲ್ಲಿ ಶನಿ ಮಹಾತ್ಮನ ವಿಶೇಷ ಕೃಪೆ ಇರಲಿದೆ.  ಶನಿದೇವನ ಕೃಪಾ ದೃಷ್ಟಿಯ ಪರಿಣಾಮ, ಈ ರಾಶಿಯವರ ಗೌರವ ಹೆಚ್ಚಾಗಲಿದೆ. ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಸಿಗಲಿದೆ. ಆದಾಯ ಹೆಚ್ಚಲಿದೆ. ವೃತ್ತಿಯಲ್ಲಿ ಪದೊನ್ನತಿಯಾಗುವ ಸಾಧ್ಯತೆ ಇದೆ. ಪ್ರತಿ ಕೆಲಸವನ್ನು ಉತ್ಸಾಹದಿಂದ ಮುಗಿಸುವ ಮೂಲಕ ಗೌರವ  ಸಿಗಲಿದೆ. 

ಇದನ್ನೂ ಓದಿ : Planetary Transit 2022: ಅಕ್ಟೋಬರ್ 26 ರವರೆಗೆ ಈ ರಾಶಿಗಳ ಜನರ ಪಾಲಿಗೆ ಸಮಯ ಬಂಬಾಟಾಗಿರಲಿದೆ, ಸಿಗಲಿದೆ ಬಂಪರ್ ಲಾಭ

ಮಿಥುನ : ಮಿಥುನ ರಾಶಿಯವರಿಗೆ ಎರಡೂವರೆ ಶನಿ ದೆಸೆಯ ಕೊನೆಯ ಹಂತ ನಡೆಯುತ್ತಿದೆ.   ಈ ದೆಸೆ ಕೊನೆಯ ಹಂತ ತಲುಪುತ್ತಿದ್ದಂತೆ ಶನಿಯು ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ಒದಗಿ ಬರಲಿದೆ.  ಹೊಸ ಉದ್ಯೋಗ ಸಿಗಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಸ್ಥಗಿತಗೊಂಡ ಕೆಲಸಗಳು ಮತ್ತೆ ವೇಗ ಪಡೆಯಲಿವೆ.  

ಕನ್ಯಾ: ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ಕನ್ಯಾ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ಉತ್ತಮ ಅವಕಾಶಗಳು ಸಿಗಲಿವೆ. ಆದಾಯ ಹೆಚ್ಚಲಿದೆ. ಹಣ ಸಿಗುವ ಸಾಧ್ಯತೆಗಳಿವೆ. ಹೊಸ ಕೆಲಸ ಆರಂಭಿಸುವ ಯೋಚನೆ ಇರುವವರುಗೆ ಇದು ಒಳ್ಳೆಯ ಸಮಯ. ಯಾಕಂದರೆ ಈ ಸಮಯದಲ್ಲಿ ಶನಿಯ ಕೃಪೆಯಿಂದ ಯಶಸ್ಸು ಸಿಗಲಿದೆ. 

ಇದನ್ನೂ ಓದಿ : Numerology: ನಿಮ್ಮ ಜನ್ಮದಿನಾಂಕದ ಮೂಲಕ ಯಾವ ವೃತ್ತಿ ಉತ್ತಮ ಎಂದು ತಿಳಿಯಿರಿ!

ತುಲಾ: ತೊಂದರೆಗಳು ದೂರವಾಗುತ್ತವೆ. ತುಲಾ ರಾಶಿಯಲ್ಲೂ ಶನಿಯ ಧೈಯ್ಯಾ ಅಂದರೆ ಎರಡೂವರೆ ಶನಿ ನಡೆಯುತ್ತಿದೆ. ತುಲಾ ರಾಶಿಯವರಿಗೂ ಸದ್ಯದಲ್ಲಿ ಇದರಿಂದ ಮುಕ್ತಿ ಸಿಗಲಿದೆ.    ಈ ಕಾರಣದಿಂದಾಗಿ ಶನಿಯು ಉತ್ತಮ ಫಲಿತಾಂಶಗಳನ್ನು ನೀಡುತ್ತಾನೆ. ಸ್ಥಗಿತಗೊಂಡಿರುವ  ಕೆಲಸ ಮತ್ತೆ ಚುರುಕು ಪಡೆದು ಪೂರ್ಣಗೊಳ್ಳಲಿದೆ. ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಗೌರವ ಹೆಚ್ಚಾಗಲಿದೆ.  ಯಾವುದೇ ಕೆಲಸ ಮಾಡಿದರೂ ಉತ್ತಮ ಫಲಿತಾಂಶ ಸಿಗಲಿದೆ. ಉದ್ಯೋಗಾಕಾಂಕ್ಷಿಗಳು ದೊಡ್ಡ ಅವಕಾಶವನ್ನು ಪಡೆಯಬಹುದು. 

ಮೀನ : ಶನಿದೇವನ ಕೃಪೆಯಿಂದ ಒಳ್ಳೆಯ ದಿನಗಳು ಆರಂಭವಾಗಲಿವೆ. ಕಠಿಣ ಪರಿಶ್ರಮದ ಸಂಪೂರ್ಣ ಫಲ ಸಿಗಲಿದೆ. ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ವೃತ್ತಿಜೀವನದ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಪ್ರಚಂಡ ಪ್ರಗತಿ ಇರುತ್ತದೆ. ಮನದ ಇಷ್ಟಾರ್ಥ ನೆರವೇರಬಹುದು. ಉದ್ಯೋಗ ಬದಲಾವಣೆಗೆ ಇದು ಉತ್ತಮ ಸಮಯ. 

 

 ( ಸೂಚನೆ : ಇಲ್ಲಿ ನೀಡಲಾದ  ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News