Sabarimala Temple Open: ಅಯ್ಯಪ್ಪ ಭಕ್ತರಿಗೆ ಗುಡ್ ನ್ಯೂಸ್: ತೆರೆಯಿತು ಶಬರಿಮಲೆ ದೇಗುಲ-ದರ್ಶನ ಈ ದಿನ ಪ್ರಾರಂಭ

Sabarimale Online Booking: 41 ದಿನಗಳ ಕಾಲ ಮಂಡಲ ಪೂಜೆಗಳು ನಡೆಯಲಿವೆ. ಡಿಸೆಂಬರ್ 27ಕ್ಕೆ ಪೂಜೆ ಮುಕ್ತಾಯವಾಗಲಿದೆ. ಸ್ವಾಮಿಯ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ ಅಧಿಕಾರಿಗಳು ಸಂಪೂರ್ಣ ವ್ಯವಸ್ಥೆ ಮಾಡುತ್ತಿದ್ದಾರೆ. ಮತ್ತೊಂದೆಡೆ, ವೈದ್ಯಕೀಯ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

Written by - Bhavishya Shetty | Last Updated : Nov 17, 2022, 11:32 AM IST
    • ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಂಡಲ ಪೂಜೆಗೆ ಸಿದ್ಧ
    • ಅರ್ಚಕ ಎನ್.ಪರಮೇಶ್ವರನ್ ನಂಬೂದರಿ ನೇತೃತ್ವದಲ್ಲಿ ಬುಧವಾರ ದೇವಸ್ಥಾನದ ಬಾಗಿಲು ಓಪನ್
    • ಬುಧವಾರ ಸುಮಾರು 28,000 ಭಕ್ತರು ದರ್ಶನಕ್ಕೆ ಸ್ಲಾಟ್ ಕಾಯ್ದಿರಿಸಿದ್ದಾರೆ
Sabarimala Temple Open: ಅಯ್ಯಪ್ಪ ಭಕ್ತರಿಗೆ ಗುಡ್ ನ್ಯೂಸ್: ತೆರೆಯಿತು ಶಬರಿಮಲೆ ದೇಗುಲ-ದರ್ಶನ ಈ ದಿನ ಪ್ರಾರಂಭ title=
Sabarimale

Sabarimale Online Booking: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಂಡಲ ಪೂಜೆಗೆ ಸಿದ್ಧವಾಗುತ್ತಿದೆ. ಕೊರೊನಾ ಲಾಕ್‌ಡೌನ್ ನಂತರ ನಡೆಯಲಿರುವ ಮಂಡಲ ಪೂಜೆಗಾಗಿ ಅಧಿಕಾರಿಗಳು ಬುಧವಾರ ದೇವಾಲಯದ ಬಾಗಿಲು ತೆರೆದಿದ್ದಾರೆ. ದೇವಸ್ಥಾನದ ಪ್ರಧಾನ ಅರ್ಚಕ ಎನ್.ಪರಮೇಶ್ವರನ್ ನಂಬೂದರಿ ನೇತೃತ್ವದಲ್ಲಿ ಬುಧವಾರ ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಯಿತು. ಬುಧವಾರ ಸುಮಾರು 28,000 ಭಕ್ತರು ದರ್ಶನಕ್ಕೆ ಸ್ಲಾಟ್ ಕಾಯ್ದಿರಿಸಿದ್ದಾರೆ. ಗುರುವಾರ 50 ಸಾವಿರ ಭಕ್ತರು ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: Shraddha Murder Case : ಗರ್ಭಿಣಿಯಾಗಿದ್ದಳಾ ಶ್ರದ್ಧಾ!? ಬಗೆದಷ್ಟು ಹೊರಬರುತ್ತಿದೆ ಈ ʻಪೀಸ್‌ʼವಾಲಾನ ಕುಕೃತ್ಯ!

41 ದಿನಗಳ ಕಾಲ ಮಂಡಲ ಪೂಜೆಗಳು ನಡೆಯಲಿವೆ. ಡಿಸೆಂಬರ್ 27ಕ್ಕೆ ಪೂಜೆ ಮುಕ್ತಾಯವಾಗಲಿದೆ. ಸ್ವಾಮಿಯ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ ಅಧಿಕಾರಿಗಳು ಸಂಪೂರ್ಣ ವ್ಯವಸ್ಥೆ ಮಾಡುತ್ತಿದ್ದಾರೆ. ಮತ್ತೊಂದೆಡೆ, ವೈದ್ಯಕೀಯ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಆಸ್ಪತ್ರೆಗಳಲ್ಲಿ ಶಬರಿಮಲೆ ವಿಶೇಷ ವಾರ್ಡ್ ಸಿದ್ಧಪಡಿಸಲಾಗುತ್ತಿದೆ. ಔಷಧಿಗಳು ಮತ್ತು ಲ್ಯಾಬ್ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ. ಆಧುನಿಕ ಸೌಲಭ್ಯಗಳೊಂದಿಗೆ ವಾರ್ಡ್ ಸ್ಥಾಪಿಸಲಾಗುವುದು ಎಂದು ಕೇರಳ ವೈದ್ಯಕೀಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ..

ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕೇರಳ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ವಾಹನ ದಟ್ಟಣೆ ಹೆಚ್ಚಿಸುವ ಕೆಲ ನೂಕುನುಗ್ಗಲು ಸೇರಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಯೋಜಿತ ಯೋಜನೆಯೊಂದಿಗೆ ಮುನ್ನೆಚ್ಚರಿಕೆ ವಹಿಸಲು ನಿರ್ಧರಿಸಲಾಗಿದೆ. ಭದ್ರತೆಗಾಗಿ ಸುಮಾರು 13,000 ಪೊಲೀಸರನ್ನು ನೇಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Dog Snake Fight: ಮಾಲೀಕನ ಜೀವ ಉಳಿಸಲು ಕೊನೆ ಕ್ಷಣದವರೆಗೂ ಹಾವಿನ ಜತೆ ಕಾದಾಡಿದ ಶ್ವಾನ!

NDRF ಮತ್ತು Rapid Action Force ನಂತಹ ತುಕಡಿಗಳನ್ನು ಸಹ ಲಭ್ಯಗೊಳಿಸಲಾಗಿದೆ. ತಾತ್ಕಾಲಿಕ ಪೊಲೀಸ್ ಠಾಣೆಗಳನ್ನು ಸಹ ಸ್ಥಾಪಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News