ಒಂದುವರೆ ತಿಂಗಳ  ನವ ದಂಪತಿಗಳ ಬಾಳಲ್ಲಿ  ವಿಧಿಯಾಟ ಬೇರೆಯಾಗಿತ್ತು.!

Road Accident:ಮದುವೆಯಾಗಿ ಕೇವಲ ಒಂದುವರೆ  ತಿಂಗಳಾಗಿತ್ತು. ನವ ದಂಪತಿ ಎಂದ ಮೇಲೆ ಹುಮಸ್ಸು ಹುರುಪು ಸಾಮಾನ್ಯ.ಇನ್ನು ವಿವಾಹ ಹುರುಪು ಮಾಸಿರಲಿಲ್ಲ. ತಮ್ಮ ಮುಂದಿನ  ಜೀವನದ ಬಗ್ಗೆ ಅದೇಷ್ಟು ಕನಸು ಕಟ್ಟಿದ್ದರೋ ಕಾಣೆ .ಆದರೆ  ಈ ದಂಪತಿಗಳ ವಿಧಿಯಾಟನೇ  ಬೇರೆ ಇತ್ತು. 

Written by - Zee Kannada News Desk | Last Updated : Feb 11, 2023, 05:57 PM IST
  • ಲಾರಿಗೆ ಡಿಕ್ಕಿ ಹೊಡೆದ ಕಾರು ನವ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವು..
  • ಮದುವೆಯಾಗಿ ಕೇವಲ ಒಂದುವರೆ ತಿಂಗಳಾಗಿತ್ತು.
  • ಬಳ್ಳಾರಿ ಮದುವೆಗೆ ತೆರಳುತ್ತಿ ದಂಪತಿ
ಒಂದುವರೆ ತಿಂಗಳ  ನವ ದಂಪತಿಗಳ ಬಾಳಲ್ಲಿ  ವಿಧಿಯಾಟ ಬೇರೆಯಾಗಿತ್ತು.! title=

Road Accident:ಮದುವೆಯಾಗಿ ಕೇವಲ ಒಂದುವರೆ  ತಿಂಗಳಾಗಿತ್ತು. ನವ ದಂಪತಿ ಎಂದ ಮೇಲೆ ಹುಮಸ್ಸು ಹುರುಪು ಸಾಮಾನ್ಯ.ಇನ್ನು ವಿವಾಹ ಹುರುಪು ಮಾಸಿರಲಿಲ್ಲ. ತಮ್ಮ ಮುಂದಿನ  ಜೀವನದ ಬಗ್ಗೆ ಅದೇಷ್ಟು ಕನಸು ಕಟ್ಟಿದ್ದರೋ ಕಾಣೆ .ಆದರೆ  ಈ ದಂಪತಿಗಳ ವಿಧಿಯಾಟನೇ  ಬೇರೆ ಇತ್ತು. 

ರಘು ಹಾಗೂ  ಅನುಷಾ  ಎಂಬ ಇಬ್ಬರು ದಂಪತಿಗಳು   ತಿಗಳನಹಳ್ಳಿಯಿಂದ ಬಳ್ಳಾರಿಗೆ ಸಂಬಂಧಿಕರ ಮದುವೆಗೆಂದು ಕಾರಿನಲ್ಲಿ ಮದುವೆಗೆ ತೆರಳುತ್ತಿದ್ದರು.. ಈ ವೇಳೆ ಏಕಾಏಕಿ  ಲಾರಿಗೆ ಕಾರು   ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ  ನವ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನೊಪ್ಪಿದ್ದಾರೆ.

 ಇದನ್ನೂ ಓದಿ:ಬೈಕ್ ಕಳ್ಳತನದ ದೂರು ದಾಖಲಿಸಿಕೊಳ್ಳು ಪೊಲೀಸರ ಹಿಂದೇಟು : ಕಮಿಷನರ್ ಎಚ್ಚರಿಕೆ 

ಹಾಸನ ಜಿಲ್ಲೆ ಅರಸಿಕೆರೆ ಮೂಲದವರಾಗಿದ್ದು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರೆಂದು ಮೂಲಗಳು ತಿಳಿಸಿವೆ. ತುಮಕೂರು ಜಿಲ್ಲೆ, ಚಿಕ್ಕನಾಯಕನಳ್ಳಿ ತಾಲೂಕಿನ, ಹುಳಿಯಾರ್ ಗೇಟ್ ಬಳಿ ಘಟನೆ ಸಂಭವಿಸಿದೆ. 

 ಇದನ್ನೂ ಓದಿ:R Ashok : ಸಿಎಂ ಆಯ್ಕೆ ಹೈ ಕಮಾಂಡ್ ನಿರ್ಧಾರ : ಸಚಿವ ಆರ್ ಅಶೋಕ್ 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News