ಆಧ್ಯಾತ್ಮದತ್ತ ವಾಲುತ್ತಿದ್ದಾರಾ ಸಮಂತಾ ? ಏನು ಹೇಳುತ್ತಿದೆ ಈ ಫೋಟೋಗಳು ?

 Samantha visits Palani Murugan Temple: ಆರೋಗ್ಯ ಸಮಸ್ಯೆಗಳ ನಡುವೆಯೂ ಸಮಂತಾ ಕಡಿದಾದ ಹಾದಿಯಲ್ಲಿ ಸಾಗಿ ಎಲ್ಲಾ 600 ಮೆಟ್ಟಿಲುಗಳಲ್ಲಿ ಏರಿದ್ದಾರೆ. ಈ ಎಲ್ಲಾ ಮೆಟ್ಟಿಲುಗಳ ಮೇಲೆ ಕರ್ಪೂರವನ್ನು ಬೆಳಗಿದ ನಂತರ ಮುರುಗನ್ ಸ್ವಾಮಿಯ ದರ್ಶನ ಪಡೆಡಿದ್ದಾರೆ.

Written by - Ranjitha R K | Last Updated : Feb 14, 2023, 12:03 PM IST
  • ಸಮಂತಾ ರುತ್ ಪ್ರಭು ಪಳನಿ ಮುರುಗನ್ ದೇವಸ್ಥಾನಕ್ಕೆ ಭೇಟಿ
  • ದೇವಾಲಯದ 600 ಮೆಟ್ಟಿಲುಗಳಲ್ಲಿ ಏರಿದ ಸಮಂತಾ
  • 600 ಮೆಟ್ಟಿಲುಗಳಲ್ಲಿ ಕರ್ಪೂರವನ್ನು ಬೆಳಗಿದ ಸ್ಯಾಮ್
ಆಧ್ಯಾತ್ಮದತ್ತ ವಾಲುತ್ತಿದ್ದಾರಾ ಸಮಂತಾ ? ಏನು ಹೇಳುತ್ತಿದೆ ಈ ಫೋಟೋಗಳು ? title=

ತಮಿಳುನಾಡು : ಸಮಂತಾ ರುತ್ ಪ್ರಭು ಸೋಮವಾರ  ಪಳನಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಾಲಯದ 600 ಮೆಟ್ಟಿಲುಗಳಲ್ಲಿ ಏರಿದ ಸಮಂತಾ 600 ಮೆಟ್ಟಿಲುಗಳಲ್ಲಿ ಕರ್ಪೂರವನ್ನು ಬೆಳಗಿದ್ದಾರೆ. ಸಮಂತಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡುತ್ತಿರುವ ಕೆಲವು ಚಿತ್ರಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. 

ಆರೋಗ್ಯ ಸಮಸ್ಯೆಗಳ ನಡುವೆಯೂ ಸಮಂತಾ ಕಡಿದಾದ ಹಾದಿಯಲ್ಲಿ ಸಾಗಿ ಎಲ್ಲಾ 600 ಮೆಟ್ಟಿಲುಗಳಲ್ಲಿ ಏರಿದ್ದಾರೆ. ಈ ಎಲ್ಲಾ ಮೆಟ್ಟಿಲುಗಳ ಮೇಲೆ ಕರ್ಪೂರವನ್ನು ಬೆಳಗಿದ ನಂತರ ಮುರುಗನ್ ಸ್ವಾಮಿಯ ದರ್ಶನ ಪಡೆಡಿದ್ದಾರೆ. ಈ ವೇಳೆ ಸಮಂತಾ ಸ್ನೇಹಿತರು ಮತ್ತು ನಿರ್ದೇಶಕ ಪ್ರೇಮ್ ಕುಮಾರ್  ಜೊತೆಗಿದ್ದರು. 

ಇದನ್ನೂ ಓದಿ : ಅಚ್ಚುಳಿಯಲಿದೆ ಈ ಚಿತ್ರದ ಹಾಡುಗಳು ಅಷ್ಟಕ್ಕೂ ಅದಾವ ಸಿನಿಮಾ ಇರಬಹುದು..?

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಮಂತಾ, ಮುರುಗನ್ ಸ್ವಾಮಿಯ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಅವರು ಸಾಕಷ್ಟು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿರುವುದಾಗಿ ಹೇಳಿದ್ದಾರೆ. 

ವೈದ್ಯರ ಸಲಹೆ ಪಡೆದುಕೊಡ ನಂತರವೇ ಸಮಂತಾ ದೇವಸ್ಥಾನಕ್ಕೆ ಬಂದಿದ್ದಾರೆ. ಸಮಂತಾ ತನ್ನ ಜೀವನದಲ್ಲಿ ಆರೋಗ್ಯ ಮತ್ತು ವೈಯಕ್ತಿಕ ಸಮಸ್ಯೆಗಳನ್ನು ಅನುಭವಿಸಿದ ನಂತರ ನಿಧಾನವಾಗಿ ಆಧ್ಯಾತ್ಮಿಕತೆ ಮತ್ತು ಭಕ್ತಿಯ ಕಡೆಗೆ  ವಾಲುತ್ತಿದ್ದಾರೆ ಎನ್ನುವ ಮಾತುಗಳು ಇದೀಗ ಕೇಳಿ ಬರುತ್ತಿವೆ. 

ಇದನ್ನೂ ಓದಿ :  ಮಗುವಿನ ಮನಸ್ಸಿನ ಒಡೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಇಷ್ಟೊಂದು ನೆಗೆಟಿವ್ ಯಾಕೆ..?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News