ತನ್ನ ಜೀವನ ಚರಿತ್ರೆ ಕುರಿತ ಸಿನಿಮಾ ನಿರ್ದೇಶಿಸಲು ಹೊರಟ ಕಂಗನಾ ರಾವತ್

ಇತ್ತೀಚಿಗೆ ಬಾಲಿವುಡ್ ನಟಿ ಕಂಗನಾ ರಾವತ್ ಜಾನ್ಸಿರಾಣಿ ಲಕ್ಷ್ಮಿಬಾಯಿ ಕುರಿತ ಜೀವನ ಚರಿತ್ರೆ ಆಧಾರಿತ ಸಿನಿಮಾ ಮನಿಕರ್ಣಿಕಾದಲ್ಲಿನ ಪಾತ್ರಕ್ಕಾಗಿ ರಾಮ್ ಗೋಪಾಲ್ ವರ್ಮಾ ರಿಂದ  ಹಿಡಿದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿಯೂ ಕೂಡ ಸಾಕಷ್ಟು ಸದ್ದು ಮಾಡಿತ್ತು.

Last Updated : Feb 14, 2019, 04:32 PM IST
 ತನ್ನ ಜೀವನ ಚರಿತ್ರೆ ಕುರಿತ ಸಿನಿಮಾ ನಿರ್ದೇಶಿಸಲು ಹೊರಟ ಕಂಗನಾ ರಾವತ್ title=
file photo

ನವದೆಹಲಿ: ಇತ್ತೀಚಿಗೆ ಬಾಲಿವುಡ್ ನಟಿ ಕಂಗನಾ ರಾವತ್ ಜಾನ್ಸಿರಾಣಿ ಲಕ್ಷ್ಮಿಬಾಯಿ ಕುರಿತ ಜೀವನ ಚರಿತ್ರೆ ಆಧಾರಿತ ಸಿನಿಮಾ ಮನಿಕರ್ಣಿಕಾದಲ್ಲಿನ ಪಾತ್ರಕ್ಕಾಗಿ ರಾಮ್ ಗೋಪಾಲ್ ವರ್ಮಾ ರಿಂದ  ಹಿಡಿದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿಯೂ ಕೂಡ ಸಾಕಷ್ಟು ಸದ್ದು ಮಾಡಿತ್ತು.

ಈಗ ನಾವು ಹೇಳ ಹೊರಟಿರುವುದು ಈ ಸಿನಿಮಾ ಕುರಿತಾಗಿ ಅಲ್ಲ, ಬದಲಾಗಿ ಅವರು ತಮ್ಮ ಸ್ವಂತ ಜೀವನ ಚರಿತ್ರೆ ಕುರಿತಾಗಿ ಸಿನಿಮಾವೊಂದನ್ನು ತಾವೇ ನಿರ್ದೇಶಿಸಲು ಮುಂದಾಗಿದ್ದಾರೆ.ಸದ್ಯ ಮೂಲಗಳ ಪ್ರಕಾರ ಕಂಗನಾ ಈಗಾಗಲೇ ಸಿನಿಮಾ ತಂಡವನ್ನು ಸಿದ್ದಗೊಳಿಸಿದ್ದಾರೆ ಎನ್ನಲಾಗಿದೆ.ಮಾಧ್ಯಮಗಳು ವರದಿ ಮಾಡಿರುವಂತೆ ಕಂಗನಾ ಸಿನಿಮಾದ ಚಿತ್ರಕಥೆಯನ್ನು ಬಾಹುಬಲಿಯಂತಹ ಸಿನಿಮಾಗಳಿಗೆ ಚಿತ್ರಕಥೆ ಬರೆದ  ಕೆ.ವಿ.ವಿಜಯೇಂದ್ರ ಪ್ರಸಾದ ರಚಿಸಲಿದ್ದಾರೆ ಎನ್ನಲಾಗಿದೆ.

ಕಂಗನಾ ತಂಡವು ಹೇಳುವಂತೆ ಈ ಸಿನಿಮಾ ಯಾವುದೇ ರೀತಿಯ ಅನ್ಯ ಉದ್ದೇಶವನ್ನು ಹೊಂದಿಲ್ಲ, ಈ ಸಿನಿಮಾ ನಟಿ ಜೀವನದ ಹಲವಾರು ಘಟನೆಗಳನ್ನು ತೋರಿಸಲಿದೆ.ಅಲ್ಲದೆ ನಟಿಗೆ ಸ್ಪೂರ್ತಿದಾಯಕವಾದ ವ್ಯಕ್ತಿಗಳ ಮೇಲೆಯೂ ಕೂಡ ಈ ಚಿತ್ರ ಬೆಳಕು ಚೆಲ್ಲಲಿದೆ ಎನ್ನಲಾಗಿದೆ. ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

 

Trending News