ಶ್ರೀಲೀಲಾಗಿರುವ ಗುಣಗಳು ಎಲ್ಲಾ ನಟಿಯರಲ್ಲಿ ಇರಬೇಕು : ಕನ್ನಡತಿ ಮೆಚ್ಚಿ ಹೊಗಳಿದ ಕಾಜಲ್

Bhagavanth Kesari : ನಟ ಸಿಂಹ ನಂದಮೂರಿ ಬಾಲಕೃಷ್ಣ ನಟನೆಯ ಬಹುನಿರೀಕ್ಷಿತ ‘ಭಗವಂತ್ ಕೇಸರಿ’ ಸಿನಿಮಾ ಪ್ರಚಾರದ ಅಂಗವಾಗಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಕಾಜಲ್, ತಮ್ಮ ಸಹ ನಾಯಕಿ ಶ್ರೀಲೀಲಾ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಎಲ್ಲೆಡೆ ವೈರಲ್‌ ಆಗುತ್ತಿವೆ.

Written by - Krishna N K | Last Updated : Oct 11, 2023, 07:53 PM IST
  • ನಟ ಸಿಂಹ ನಂದಮೂರಿ ಬಾಲಕೃಷ್ಣ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಭಗವಂತ್ ಕೇಸರಿ’.
  • ಈ ಸಿನಿಮಾದಲ್ಲಿ ಬಾಲಕೃಷ್ಣ ಜೊತೆ ಕಾಜಲ್‌ ಅಗರ್ವಾಲ್‌ ಮತ್ತು ಶ್ರೀಲೀಲಾ ನಟಿಸಿದ್ದಾರೆ.
  • ಕಾಜಲ್ ಶ್ರೀಲೀಲಾ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಎಲ್ಲೆಡೆ ವೈರಲ್‌ ಆಗುತ್ತಿವೆ.
ಶ್ರೀಲೀಲಾಗಿರುವ ಗುಣಗಳು ಎಲ್ಲಾ ನಟಿಯರಲ್ಲಿ ಇರಬೇಕು : ಕನ್ನಡತಿ ಮೆಚ್ಚಿ ಹೊಗಳಿದ ಕಾಜಲ್ title=

Kajal Aggarwal on Sreeleela : ನಂದಮೂರಿ ಬಾಲಕೃಷ್ಣ, ಕಾಜಲ್ ಅಗರ್ವಾಲ್ ಮತ್ತು ಶ್ರೀ ಲೀಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಭಗವಂತ ಕೇಸರಿ' ಚಿತ್ರ ದಸರಾ ಹಬ್ಬದಂದು ಬಿಡುಗಡೆಯಾಗುತ್ತಿದೆ. ಸಧ್ಯ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಟ್ರೇಲರ್‌ಗೆ ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ನಡುವೆ ನಟಿ ಕಾಜಲ್ ಅಗರ್ವಾಲ್ ಸಿನಿಮಾ ಪ್ರಚಾರದ ಭಾಗವಾಗಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನಟಿ ಶ್ರೀಲೀಬಾ ಬಗ್ಗೆ ಕೆಲವೊಂದಿಷ್ಟು ಇಂಟ್ರೆಸ್ಟಿಂಗ್‌ ವಿಚಾರ ಹೇಳಿಕೊಂಡಿದ್ದಾರೆ.

ʼಭಗವಂತ್‌ ಕೇಸರಿʼ ಸಿನಿಮಾದ ಸಂದರ್ಶನದಲ್ಲಿ ಭಾಗವಹಿಸಿದ್ದ ಕಾಜಲ್ ಸಿನಿಮಾಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ವಿಶೇಷವಾಗಿ ಅವರು ತನ್ನ ಸಹ ನಟಿ ಶ್ರೀಲೀಲಾ ಬಗ್ಗೆ ಆಸಕ್ತಿದಾಯಕ ಮಾತುಗಳನ್ನಾಡಿದ್ದಾರೆ. ವ್ಯವಹಾರ ಮತ್ತು ಸಂಸಾರವನ್ನು ಸಿನಿಮಾ ಮಾಡುವಾಗ ಬ್ಯಾಲೆನ್ಸ್ ಮಾಡುವುದು ತುಂಬಾ ಕಷ್ಟ. ಆದರೆ ಇವು ಎರಡನ್ನೂ ಸರಿದೂಗಿಸಿಕೊಂಡು ಹೋಗುವುದು ಸವಾಲಿನ ಕೆಲಸ.

ಇದನ್ನೂ ಓದಿ: ಖ್ಯಾತ ನಟಿಗೆ ವಿಮಾನದಲ್ಲಿ ಮದ್ಯದ ಮತ್ತಿನಲ್ಲಿದ್ದ ಸಹ ಪ್ರಯಾಣಿಕನಿಂದ ಕಿರುಕುಳ : ದೂರು ದಾಖಲು

ಇಂತಹ ಗುಣಗಳನ್ನು ನಾನು ಶ್ರೀಲೀಲಾನಲ್ಲಿ ಕಂಡಿದ್ದೇನೆ.ಅವರಲ್ಲಿ ಸಾಕಷ್ಟು ಸಾಮರ್ಥ್ಯವಿದೆ. ಅವನು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ, ವಿಧೇಯರಾಗಿರುತ್ತಾರೆ, ಬಹಳ ಕೇಂದ್ರೀಕೃತರಾಗಿರುತ್ತಾರೆ. ಅವರಿಗೆ ಏನು ಬೇಕು ಎಂದು ಅವರಿಗೆ ತಿಳಿದಿದೆ. ಈ ಗುಣಗಳು ಈ ಪೀಳಿಗೆಯ ಎಲ್ಲಾ ನಾಯಕಿಯರಲ್ಲಿಯೂ ಇರಬೇಕು ಎಂದು ನಾನು ಭಾವಿಸುತ್ತೇನೆ ಎಂದು ಕಾಜಲ್‌ ಅಗರ್ವಾಲ್‌ ಹೇಳಿದರು.

ಭಗವಂತ್ ಕೇಸರಿ’ ಚಿತ್ರಕ್ಕೆ ನಿರ್ದೇಶಕ ಅನಿಲ್ ರವಿಪುಡಿ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಸಿನಿಮಾವನ್ನು ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪತಿ ಮತ್ತು ಹರೀಶ್ ಪೆದ್ದಿ ನಿರ್ಮಿಸಿದ್ದಾರೆ. ಎಸ್‌ಎಸ್‌ ಥಮನ್ ಸಂಗೀತ ಸಂಯೋಜಿಸಿದ್ದಾರೆ. ತೆಲಂಗಾಣ ಬ್ಯಾಕ್ ಡ್ರಾಪ್‌ನಲ್ಲಿನ ತಂದೆ ಮತ್ತು ಮಗಳ ನಡುವಿನ ಭಾವನಾತ್ಮಕ ಬಾಂಧವ್ಯದ ಕುರಿತ ಚಿತ್ರವೇ ಭಗವಂತ್‌ ಕೇಸರಿ. ಚಿತ್ರವು ಅಕ್ಟೋಬರ್ 19 ರಂದು ತೆರೆಗೆ ಬರಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News