ದಾಸನಿಗಾಗಿ ಶಕ್ತಿ ದೇವತೆಯ ಮೊರೆ ಹೋದ ವಿಜಯಲಕ್ಷ್ಮಿ..!

Vijayalakshmi Darshan: ಬ್ಯಾಡ್‌ ಟೈಮ್‌ ಎಲ್ಲರ ವಿದಿಯಲ್ಲೂ ಆಟವಾಡಿ ಬಿಡುತ್ತೆ. ಕೆಟ್ಟ ಸಮಯ ಎನ್ನುವುದು ಮನುಷ್ಯನನ್ನು ಒಂದಲ್ಲ ಒಂದು ಪೇಚಿಗೆ ಸಿಲುಕಿಸಿ ಬಿಡುತ್ತೆ. ದರ್ಶನ್‌ ವಿಷಯದಲ್ಲೂ ವಿದಿ ಎಂಬುದು ಆಟವಾಡಿ ಬಿಟ್ಟಿದೆ. ಕೆಟ್ಟ ಸಮಯಕ್ಕೆ ಬುದ್ದಿಯ ಕೈ ಕೊಟ್ಟು ದರ್ಶನ್‌ ಆಪತ್ತನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.   

Written by - Zee Kannada News Desk | Last Updated : Jul 7, 2024, 01:37 PM IST
  • ಪವಿತ್ರಾ ಗೌಡ ಅವರ ಮೋಹದಲ್ಲಿ ಸಿಲುಕಿ ದರ್ಶನ್‌ ತಪ್ಪು ಮಾಡಿಕೊಂಡಿದ್ದಾರೆ. ಆದರೂ, ಅವರ ಪತ್ನಿ ವಿಜಯಲಕ್ಷ್ಮಿಯ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ.
  • ಇರುಳೆನ್ನದೆ, ಮಳೆಯನ್ನದೆ ವಕೀಲರ ಮನೆಯ ಬಾಗಿಲ ಬಳಿ ಕೈ ಕಟ್ಟಿ ಕಾಯುತ್ತಿದ್ದಾರೆ.
  • ಇಷ್ಟೆಲ್ಲಾ ಪ್ರಯತ್ನಗಳ ನಡುವೆ ವಿಜಯಲಕ್ಷ್ಮಿ ಇದೀಗ ತಮ್ಮ ಪತಿಯನ್ನು ಹೊರ ಕರೆತರಲು ಶಕ್ತಿ ದೇವತೆಯ ಮೊರೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ದಾಸನಿಗಾಗಿ ಶಕ್ತಿ ದೇವತೆಯ ಮೊರೆ ಹೋದ ವಿಜಯಲಕ್ಷ್ಮಿ..!  title=

Vijayalakshmi Darshan: ಬ್ಯಾಡ್‌ ಟೈಮ್‌ ಎಲ್ಲರ ವಿದಿಯಲ್ಲೂ ಆಟವಾಡಿ ಬಿಡುತ್ತೆ. ಕೆಟ್ಟ ಸಮಯ ಎನ್ನುವುದು ಮನುಷ್ಯನನ್ನು ಒಂದಲ್ಲ ಒಂದು ಪೇಚಿಗೆ ಸಿಲುಕಿಸಿ ಬಿಡುತ್ತೆ. ದರ್ಶನ್‌ ವಿಷಯದಲ್ಲೂ ವಿದಿ ಎಂಬುದು ಆಟವಾಡಿ ಬಿಟ್ಟಿದೆ. ಕೆಟ್ಟ ಸಮಯಕ್ಕೆ ಬುದ್ದಿಯ ಕೈ ಕೊಟ್ಟು ದರ್ಶನ್‌ ಆಪತ್ತನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. 

ಪವಿತ್ರಾ ಗೌಡ ಅವರ ಮೋಹದಲ್ಲಿ ಸಿಲುಕಿ ದರ್ಶನ್‌ ತಪ್ಪು ಮಾಡಿಕೊಂಡಿದ್ದಾರೆ. ಆದರೂ, ದರ್ಶನ್‌ ಮೇಲೆ ಅವರ ಪತ್ನಿ ವಿಜಯಲಕ್ಷ್ಮಿಯ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ವಿಯಲಕ್ಷ್ಮಿ  ತಮ್ಮ ಗಂಡ ದರ್ಶನ್‌ರನ್ನು ಜೈಲಿನಿಂದ ಕರೆತರಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ವಿಜಯಲಕ್ಷ್ಮಿ ದರ್ಶನ್‌ರನ್ನು ಹೊರ ತರಲು ನಾನಾ ಪ್ರಯತ್ನ ಮಾಡತ್ತಲೇ ಇದ್ದಾರೆ. ಇರುಳೆನ್ನದೆ, ಮಳೆಯನ್ನದೆ ವಕೀಲರ ಮನೆಯ ಬಾಗಿಲ ಬಳಿ ಕೈ ಕಟ್ಟಿ ಕಾಯುತ್ತಿದ್ದಾರೆ. 

ಇಷ್ಟೆಲ್ಲಾ ಪ್ರಯತ್ನಗಳ ನಡುವೆ ವಿಜಯಲಕ್ಷ್ಮಿ ಇದೀಗ ತಮ್ಮ ಪತಿಯನ್ನು ಹೊರ ಕರೆತರಲು ಶಕ್ತಿ ದೇವತೆಯ ಮೊರೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಚಾಮರಾಜಪೇಟೆಯ ಗವಿಪುರಂನಲ್ಲಿರುವ ಶ್ರೀ ಬಂಡೇ ಮಹಾಕಾಳಿ ದೇವಸ್ಥಾನಕ್ಕೆ ಬೇಟಿ ಮಾಡಿದ ವಿಜಯಲಕ್ಷ್ಮಿ, ದರ್ಶನ್‌ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಆಷಾಢ ಶನಿವಾರದಂದು ಪೂಜೆ ಮಾಡಿ ಅವರು, ತಮ್ಮ ಗಂಡನಿಗಾಗಿ ಪ್ರಾರ್ಥಿಸಿದ್ದಾರೆ. 

ಇದನ್ನೂ ಓದಿ: ಹಳೆ ಮುನಿಸು ಮರೆತು ದರ್ಶನ್‌ಗೆ ಧೈರ್ಯ ಹೇಳ್ತಾರಾ ‘ಮಾಣಿಕ್ಯ’..? ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ ಭಯಂಕರ ಚರ್ಚೆ..! 

ಈ ಎಲ್ಲಾ ಘಟನೆಗಳು ನಡೆಯುವ ಮುನ್ನ ಬಂಡೆ ಮಹಾಕಾಳಿ ಅಮ್ಮನವರ ದೇವಸ್ಥಾನದ ಅರ್ಚಕರು, ದರ್ಶನ್‌ ಅವರಿಗೆ ದೃಷ್ಟಿ ತೆಗೆದು, ತಡೆ ಒಡೆಯುವಂತೆ ಸಲಹೆ ನೀಡಿದ್ದರಂತೆ. ಒಂದು ವಾರದ ಮಟ್ಟಿಗೆ ಯಾವುದೇ ಹೊಸ ಕೆಲಸ ಮಾಡಬೇಡಿ, ಸಾಧ್ಯವಾದರೆ ಬೆಂಗಳೂರು ಬಿಟ್ಟು ಎಲ್ಲಾದರೂ ಹೋಗಿ ಎಂದು ಹೇಳಿದ್ದರಂತೆ. ಆದರೆ, ದರ್ಶನ್‌ ಅವರು ಈ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎನ್ನುವ ಮಾಹಿತಿ ಕೇಳಿ ಬಂದಿದೆ.

ಇದೀಗ ಇದೇ ಕಾರಣದಿಂದ ದರ್ಶನ್‌ ಅವರನ್ನು ಜೈಲಿನಿಂದ ಹೊರ ಕರೆತರಲು ಶ್ರಮಿಸುತ್ತಿರುವ ವಿಜಯಲಕ್ಷ್ಮಿ, ಅಭಿಮಾನಿಗಳಿಗೆ ತಾಳ್ಮೆ ಮತ್ತು ಶಾಂತಿಯ ಮನವಿ ಮಾಡುವ ಮೂಲಕ. ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ, ಒಳ್ಳೆಯ ಸಮಯ ಮತ್ತೆ ಮರಳಿ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News