/kannada/photo-gallery/englands-legendary-test-batsman-joe-root-will-break-sachin-tendulkar-4-world-records-249475 ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌!  ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌! 249475

ಭಾರತಕ್ಕೆ ಮರಳುವುದಿಲ್ಲವಂತೆ ಇಟಲಿಯಲ್ಲಿರುವ ಈ ಭಾರತೀಯ ವಿದ್ಯಾರ್ಥಿ: ಇಲ್ಲಿದೆ ಭಾವನಾತ್ಮಕ ಸಂದೇಶ

ಈ ವಿದ್ಯಾರ್ಥಿ ತಮ್ಮ ಮನೆ ಬಿಟ್ಟು ಹೋಗದಂತೆ ಎಲ್ಲ ಭಾರತೀಯರಿಗೆ ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಇಡೀ ಭಾರತ ನಾಶವಾಗುತ್ತದೆ ಎಂದವರು ಎಚ್ಚರಿಸಿದ್ದಾರೆ.  

Last Updated : Mar 26, 2020, 10:44 AM IST
ಭಾರತಕ್ಕೆ ಮರಳುವುದಿಲ್ಲವಂತೆ ಇಟಲಿಯಲ್ಲಿರುವ ಈ ಭಾರತೀಯ ವಿದ್ಯಾರ್ಥಿ: ಇಲ್ಲಿದೆ ಭಾವನಾತ್ಮಕ ಸಂದೇಶ  title=
File Image

ಇಂದೋರ್: ಅತ್ಯುತ್ತಮ ಆರೋಗ್ಯ ಸೇವೆಗಳ ಹೊರತಾಗಿಯೂ, ಕೊರೊನಾವೈರಸ್  ಇಟಲಿ (Italy)ಯನ್ನು ಧ್ವಂಸಗೊಳಿಸಿದೆ. ಇಂದೋರ್‌ನ ವಿದ್ಯಾರ್ಥಿಯೊಬ್ಬ ಪ್ರಸ್ತುತ ಇಟಲಿಯ ರಾಜಧಾನಿಯಲ್ಲಿ ಓದುತ್ತಿದ್ದು, ಇತರರಿಗೆ ಕರೋನಾವೈರಸ್ ಸೋಂಕು ತಗುಲಬಾರದು ಎಂದು ತಾನು ಭಾರತಕ್ಕೆ ಹಿಂದಿರುಗುವುದಿಲ್ಲ ಎಂದು ತಿಳಿಸಿದ್ದಾರೆ. ಮನೆಬಿಟ್ಟು ಹೋಗದಂತೆ ಭಾರತೀಯರಿಗೆ ಮನವಿ ಮಾಡಿರುವ ವಿದ್ಯಾರ್ಥಿ ನಿರ್ಲಕ್ಷಿಸಿ ಮನೆಯಿಂದ ಹೊರಬಂದರೆ ಇಡೀ ಭಾರತವೇ ನಾಶವಾಯಿತು. 

ಕರೋನವೈರಸ್ COVID-19 ನಿರ್ಮೂಲನೆಗೆ ಲಾಕ್‌ಡೌನ್ ಸಾಕಾಗುವುದಿಲ್ಲ: WHO

ಭಾರತದ ಇಂದೋರ್ ನಗರದ ವಿದ್ಯಾರ್ಥಿ ಅನಂತ್ ಶುಕ್ಲಾ ಪ್ರಸ್ತುತ ಇಟಲಿಯ ರಾಜಧಾನಿ ರೋಮ್‌ನಲ್ಲಿದ್ದಾರೆ. ಅನಂತ್ ಅವರ ತಂದೆ ಹರಿಶಂಕರ್ ಶುಕ್ಲಾ ಅವರು ಮನೆಗೆ ಮರಳುವಂತೆ ತಮ್ಮ ಮಗನಿಗೆ ಸಾಕಷ್ಟು ಮನವಿ ಮಾಡಿದೆವು. ಆದರೆ ಅನಂತ್ ಭಾರತಕ್ಕೆ ಬರಲು ನಿರಾಕರಿಸಿದರು. ನಾನು ಭಾರತಕ್ಕೆ ಹಿಂದಿರುಗದಿದ್ದರೆ ನನ್ನಿಂದ ಇತರರಿಗೆ ಈ ಕರೋನವೈರಸ್ (Coronavirus)  ಹರಡುವುದಿಲ್ಲ. ನನ್ನಿಂದ ಇತರರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವುದಿಲ್ಲ ಎಂದಿದ್ದಾರೆ.

ತನ್ನ ಮತ್ತು ತನ್ನ ಕುಟುಂಬದ ಹಿತದೃಷ್ಟಿಯಿಂದ ಮನೆಯಿಂದ ಹೊರಹೋಗದಂತೆ ವಿದ್ಯಾರ್ಥಿ ಅನಂತ್ ಶುಕ್ಲಾ ಭಾರತದ ಜನರಿಗೆ ಕೈ ಮುಗಿದು ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಇಡೀ ಭಾರತ ನಾಶವಾಗುತ್ತದೆ. ಇದು ದೇಶದ ಸೇವೆ ಎಂದವರು ತಿಳಿಸಿದ್ದಾರೆ.

ಇಟಲಿಯ ನಂತರ, ಎರಡನೇ ಅತಿ ಹೆಚ್ಚು ಕರೋನವೈರಸ್ COVID-19 ಸಾವುಗಳಿಗೆ ಸಾಕ್ಷಿಯಾದ ಸ್ಪೇನ್

ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ಮನೆ ಬಿಟ್ಟು ಹೋಗದಂತೆ ದೇಶವಾಸಿಗಳಿಗೆ ಮನವಿ ಮಾಡಿದ್ದರು.  ಲಾಕ್‌ಡೌನ್(LOCKDOWN) ಹೊರತಾಗಿಯೂ, ಜನರು ತಮ್ಮ ಮನೆಗಳಿಂದ ಹೊರಬರುತ್ತಿದ್ದಾರೆ. ಅಂತಹ ಜನರ ವಿರುದ್ಧ ಪೊಲೀಸರು ಸಹ ಕಟ್ಟುನಿಟ್ಟಾಗಿ ವರ್ತಿಸುತ್ತಿದ್ದಾರೆ, ಆದರೆ ಸಾರ್ವಜನಿಕರಿಗೆ ಇದರ ಅರಿವು ಬರುವವರೆಗೂ ಲಾಕ್‌ಡೌನ್ ಯಶಸ್ವಿಯಾಗಲು ಸಾಧ್ಯವಿಲ್ಲ.