ಸೀತಾ ಮಾತೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಕ್ಷಮೆಯಾಚಿಸಿದ 'Saif Ali Khan'

ತಮ್ಮ ಪಾತ್ರದ ಕುರಿತು ಮಾತನಾಡುತ್ತಾ, ಸೈಫ್ ಅಲಿ ಖಾನ್ ಅವರು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಯೊಂದನ್ನು  ನೀಡಿದ್ದಾರೆ.

Last Updated : Dec 6, 2020, 05:42 PM IST
  • ಬಾಲಿವುಡ್ ನಟ ಸೈಫ್ ಅಲಿ ಖಾನ್ ಇದೀಗ ಮತ್ತೊಂದು ನಕಾರಾತ್ಮಕ ಪಾತ್ರಕ್ಕೆ ಸಿದ್ಧರಾಗಿದ್ದಾರೆ.
  • ಶೀಘ್ರದಲ್ಲೇ ನಿರ್ದೇಶಕ ಓಂ ರಾವುತ ಅವರ 'ಆದಿಪುರುಷ್' ಚಿತ್ರದಲ್ಲಿ ಲಂಕೇಶ್ ಅಂದರೆ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
  • ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡುವಾಗ ಸೈಫ್ ಅಲಿ ಖಾನ್ ವಿವಾದಾತ್ಮಕ ಹೇಳಿಕೆ ನೀಡಿ ಜನರ ಕೋಪಕ್ಕೆ ಗುರಿಯಾಗಿದ್ದಾರೆ.
ಸೀತಾ ಮಾತೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಕ್ಷಮೆಯಾಚಿಸಿದ 'Saif Ali Khan' title=

ನವದೆಹಲಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಇದೀಗ ಮತ್ತೊಂದು  ನಕಾರಾತ್ಮಕ ಪಾತ್ರಕ್ಕೆ ಸಿದ್ಧರಾಗಿದ್ದಾರೆ. ಅವರು ಶೀಘ್ರದಲ್ಲೇ ನಿರ್ದೇಶಕ ಓಂ ರಾವುತ ಅವರ 'ಆದಿಪುರುಷ್' ಚಿತ್ರದಲ್ಲಿ ಲಂಕೇಶ್ ಅಂದರೆ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಚಿತ್ರದಲ್ಲಿ ಅವರ ಪಾತ್ರದ ಬಗ್ಗೆ ಮಾತನಾಡುವಾಗ ಸೈಫ್ ಅಲಿ ಖಾನ್ ಅವರು ಜನರ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ ನೀಡಿ ಜನರ ಕೋಪಕ್ಕೆ ಗುರಿಯಾಗಿದ್ದಾರೆ. ಈಗ ಸೈಫ್ ಅಲಿ ಖಾನ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.

ಇದನ್ನು ಓದಿ- ಅಂತರ್ಜಾಲದಲ್ಲಿ ಅಪಹಾಸ್ಯಕ್ಕೆ ಗುರಿಯಾದ ಸೈಫ್ ಅಲಿ ಖಾನ್ ಆತ್ಮಚರಿತ್ರೆ

ಈ ಕುರಿತು ಹೊಸ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಸೈಫ್ ಅಲಿ ಖಾನ್, 'ಸಂದರ್ಶನವೊಂದರಲ್ಲಿ ನನ್ನ ಒಂದು ಹೇಳಿಕೆ ಜನರ ವಿವಾದ ಸೃಷ್ಟಿಸಿದೆ ಮತ್ತು ಜನರ ಭಾವನೆಗಳನ್ನು ನೋಯಿಸಿದೆ ಎಂದು ನನಗೆ ತಿಳಿಸಲಾಗಿದೆ. ಆದರೆ, ಅದು ನನ್ನ ಉದ್ದೇಶವಾಗಿರಲಿಲ್ಲ. ಎಲ್ಲರಿಗೂ ಕ್ಷಮೆಯಾಚಿಸಲು ಮತ್ತು ನನ್ನ ಹೇಳಿಕೆಯನ್ನು ಹಿಂಪಡೆಯಲು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ. ಭಗವಾನ್ ರಾಮನು ಯಾವಾಗಲೂ ನನಗೆ ಸದಾಚಾರ ಮತ್ತು ಶೌರ್ಯದ ಸಂಕೇತವಾಗಿದ್ದಾರೆ. 'ಆದಿಪುರುಷ್' ದುಷ್ಟರ ವಿರುದ್ಧದ ಒಳ್ಳೆಯವರ ವಿಜಯವನ್ನು ಆಚರಿಸುವುದರ ಬಗ್ಗೆ ಇದ್ದು ಮತ್ತು ಇಡೀ ತಂಡವು ಒಟ್ಟಾಗಿ ಮಹಾಕಾವ್ಯವನ್ನು ಯಾವುದೇ ಗೊಂದಲವಿಲ್ಲದೆ ಪ್ರಸ್ತುತಪಡಿಸಲು ಕೆಲಸ ಮಾಡುತ್ತಿದೆ. ' ಎಂದಿದ್ದಾರೆ.

ಇದನ್ನು ಓದಿ- ಸೈಫ್ ಅಲಿ ಖಾನ್ ಜೊತೆ 'ಪಂಗಾ'ಗಿಳಿದ ಕಂಗನಾ ರಣಾವತ್

ಈ ಹಿಂದೆ ಸಂದರ್ಶನವೊಂದರಲ್ಲಿ ರಾವಣನ ಪಾತ್ರದ ಬಗ್ಗೆ ಮಾತನಾಡಿದ್ದ ಸೈಫ್ ಅಲಿ ಖಾನ್, 'ಓರ್ವ ರಾಕ್ಷಸ ರಾಜನ ಪಾತ್ರ ನಿರ್ವಹಿಸುವುದು ಒಂದು ಕುತೂಹಲಕಾರಿ ಸಂಗತಿಯಾಗಿದೆ, ಆದರೆ ಇದು ಅಷ್ಟೊಂದು ಕ್ರೂರವಾಗಿಲ್ಲ ಎಂದಿದ್ದರು. ಬಳಿಕ ಮಾತನಾಡಿದ್ದ ಅವರು ನಾವು ಅದನ್ನು ತುಂಬಾ ಮನರಂಜನಾಕಾರಿಯಾಗಿಸುತ್ತಿದ್ದೇವೆ. ಸೀತಾಯ ಅಪಹರಣ ಹಾಗೂ ಶ್ರೀರಾಮನ ಜೊತೆಗೆ ನಡೆದ ಯುದ್ಧದ ಕಾರಣವನ್ನು ನಾವು ಸ್ಪಷ್ಟಪಡಿಸುತ್ತಾ, ತಮ್ಮ ಸಹೋದರಿಯ ಸೇಡಿನ ಭಾವನೆಯ ರೂಪದಲ್ಲಿ ಜೋಡಿಸಿ ಪ್ರಸ್ತುತಪಡಿಸಲಿದ್ದೇವೆ. ರಾವಣನ ತಂಗಿ ಶೂರ್ಪನಖಿಯ ಮೂಗನ್ನು ಲಕ್ಷ್ಮಣ ಕತ್ತರಿಸಿದ್ದ' ಎಂದಿದ್ದರು.

ಇದನ್ನು ಓದಿ- 'ತಾನಾಜಿ' ಮೇಲೆ ಆರೋಪ ಮಾಡಿ ಟ್ರೊಲ್ ಗೆ ಗುರಿಯಾದ ಸೈಫ್

ಸೈಫ್ ಅಲಿ ಖಾನ್ ಈ ಚಿತ್ರದಲ್ಲಿ 'ಲಂಕೇಶ್' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಎದುರು'ಬಾಹುಬಲಿ' ಪ್ರಭಾಸ್ (Prabhas) ಶ್ರೀ ರಾಮ್ ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಆದರೆ ಸೀತಾ ಮತ್ತು ಲಕ್ಷ್ಮಣ್ ಪಾತ್ರಗಳ ಬಗ್ಗೆ ಈ ಚಿತ್ರದಲ್ಲಿ ಇದುವರೆಗೆ ಯಾವುದೇ ಹೆಸರು ಬಹಿರಂಗಗೊಂಡಿಲ್ಲ. ಈ ಚಿತ್ರದ ಶೂಟಿಂಗ್ ಇನ್ನೂ ಪ್ರಾರಂಭವಾಗಿಲ್ಲ. ನಿರ್ಮಾಪಕ-ನಿರ್ದೇಶಕರು ಈ ಚಿತ್ರವನ್ನು 11 ಆಗಸ್ಟ್ 2022 ರೊಳಗೆ ಬಿಡುಗಡೆ ಮಾಡಲು ಯೋಜನೆ ರೂಪಿಸಿದ್ದಾರೆ.

ಇದನ್ನು ಓದಿ- 'Adipurush'ನಿಂದ 'Radhe Shyam' ಚಿತ್ರದವರೆಗೆ Prabhas ಮೇಲಾಗಿರುವ ಹೂಡಿಕೆ ಎಷ್ಟು ಗೊತ್ತಾ?

ಇತ್ತೀಚೆಗಷ್ಟೇ ಸೈಫ್ ಅಲಿ ಖಾನ್ (Saif Ali Khan) ಪ್ರಬಲ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು . ಅಜಯ್ ದೇವಗನ್-ಕಾಜೋಲ್ ಅಭಿನಯದ ಚಿತ್ರ 'ತಾನಾಜಿ'ಯಲ್ಲಿ ಸೈಫ್ ನಿರ್ವಹಿಸಿದ್ದ ಪಾತ್ರಕ್ಕೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸದ್ಯ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Trending News