ಬಿಜೆಪಿ ಗೆಲುವು ಸಾಧಿಸಬೇಕಾದರೆ ಬಡ, ಅಪೌಷ್ಟಿಕ ಮಕ್ಕಳನ್ನು ದತ್ತು ಪಡೆಯಿರಿ- ಆನಂದಿ ಬೆನ್ ಪಟೇಲ್

    

Last Updated : Apr 28, 2018, 04:39 PM IST
ಬಿಜೆಪಿ ಗೆಲುವು ಸಾಧಿಸಬೇಕಾದರೆ ಬಡ, ಅಪೌಷ್ಟಿಕ ಮಕ್ಕಳನ್ನು ದತ್ತು ಪಡೆಯಿರಿ- ಆನಂದಿ ಬೆನ್ ಪಟೇಲ್ title=

ಭೂಪಾಲ್: ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮಧ್ಯಪ್ರದೇಶದ ರಾಜ್ಯಪಾಲೆ ಅನಂದಿಬೇನ್ ಪಟೇಲ್ ಅವರು ಸತ್ನಾ ಜಿಲ್ಲೆಯಲ್ಲಿ ಮತ ಗಿಟ್ಟಿಸಿಕೊಳ್ಳಲು ಬಡ, ಅಪೌಷ್ಟಿಕ ಮಕ್ಕಳನ್ನು ದತ್ತು ಪಡೆಯಿರಿ ಎಂದು ಹೇಳಿ ಭಾರಿ ವಿವಾದಕ್ಕೆ ಗ್ರಾಸವಾಗಿದ್ದಾರೆ.
 
ಅವರ ಇತ್ತೀಚೆಗಿನ  ಚಿತ್ರಕೂಟ ಪ್ರವಾಸದ ವೇಳೆ  ಬಿಜೆಪಿ ಬಿಜೆಪಿ ನಾಯಕರಿಗೆ  ನೀವು ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಬೇಕಾದರೆ ಬಡ, ಅಪೌಷ್ಟಿಕ ಮಕ್ಕಳನ್ನು ದತ್ತು ಪಡೆಯಬೇಕು ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ರಿಕಾರ್ಡ್ ಆಗಿದೆ.

ಇದಕ್ಕೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು  ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕಿಡಿಕಾರಿವೆ.ಅಲ್ಲದೆ ಕಾಂಗ್ರೆಸ್ ಪಕ್ಷದ ನಾಯಕರು ಈ ಕುರಿತಾಗಿ ರಾಷ್ಟ್ರಪತಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಮತಗಳು ಸುಮ್ಮನೆ ಬರುವುದಿಲ್ಲ ನೀವು ಹಳ್ಳಿಯಲ್ಲಿನ ಮನೆಗಳಿಗೆ ಹೋಗಿ ಅವರೊಂದಿಗೆ ಬೆರೆಯಬೇಕು ಆಗ  ಮಾತ್ರ ನಿಮಗೆ ಮತಗಳು ದೊರಕುತ್ತವೆ ಅಲ್ಲದೆ ನರೇಂದ್ರ ಮೋದಿಯವರ ಕನಸು ನನಸಾಗುತ್ತದೆ ಎಂದು ಅವರು ತಿಳಿಸಿದ್ದಾರೆ 

Trending News