ರಾಜಧಾನಿ ಬೆಂಗಳೂರಿನಲ್ಲಿ ಪಟಾಕಿ ಸಿಡಿದು ಬಾಲಕರ ಕಣ್ಣಿಗೆ ಗಾಯ

ಸಿಲಿಕಾನ್ ಸಿಟಿಯಲ್ಲಿ ಪಟಾಕಿಯಿಂದಾಗಿ ಇಬ್ಬರು ಬಾಲಕರ ಕಣ್ಣಿಗೆ ಪೆಟ್ಟಾಗಿರುವ ಘಟನೆ ನಡೆದಿದೆ.

Last Updated : Oct 19, 2017, 10:23 AM IST
ರಾಜಧಾನಿ ಬೆಂಗಳೂರಿನಲ್ಲಿ ಪಟಾಕಿ ಸಿಡಿದು ಬಾಲಕರ ಕಣ್ಣಿಗೆ ಗಾಯ title=

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 10 ವರ್ಷದ ಬಾಲಕ ಭಾವೇಶ್ ಮತ್ತು 25 ವರ್ಷದ ಯುವಕ ಶಾರುಕ್ ಕಣ್ಣಿಗೆ ಪೆಟ್ಟಾಗಿರುವ ಘಟನೆ ನಡೆದಿದೆ.

ರಾಜಸ್ಥಾನ ಮೂಲದ ಕಬ್ಬನ್  ಪೇಟೆ ನಿವಾಸಿ ಗೋಪಾಲ್ ಮಗ ಭಾವೇಶ್ (10) ಬುಧವಾರ ಮಧ್ಯಾಹ್ನ ನಗರದ ಮಿಂಟೋ ಅಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಅಲ್ಲದೆ, ಬೆಂಗಳೂರಿನ ಆಡುಗೋಡಿಯ ಎಲ್ ಆರ್ ನಗರದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಶಾರುಕ್ (25) ಯುವಕನ ಕಣ್ಣಿಗೆ ಗಾಯವಾಗಿದೆ. ರಾಕೆಟ್ ಸಿಡಿಸುವಾಗ ರಾಕೆಟ್ ಬಲಗಣ್ಣಿಗೆ ಬಂದು ಹೊಡೆದಿದೆ, ಇದರಿಂದಾಗಿ ಬಲಗಣ್ಣಿಗೆ ಬಲವಾದ ಪೆಟ್ಟು ಬಿದ್ದಿದೆ. 

ಬೇರೆಯವರು ಹಚ್ಚಿದ್ದ ರಾಕೆಟ್ ಶಾರುಕ್ ಕಣ್ಣಿಗೆ ಬಂದು ತಾಕೀದೆ. ಇದೀಗ ಗಂಬೀರ ಸ್ಥಿತಿಯಲ್ಲಿರುವ ಶಾರುಕ್ ಮಿಂಟೋ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Trending News