‘ಕೋದಂಡರಾಮ’ನಿಗಾಗಿ ಒಟ್ಟಾಗುತ್ತಿದೆ ಸಿನಿರಂಗ: ಶಿವಣ್ಣ-ರವಿಮಾಮ ಬರ್ತ್ ಡೇಗೆ ನಡೀತಿದೆ ಸಿದ್ಧತೆ

ಕೊರೊನಾ ಹಾಗೂ ಅಪ್ಪು ಅಗಲಿಕೆಯಿಂದ ಕನ್ನಡ ಚಿತ್ರರಂಗದ ಬಣ್ಣ ಮಾಸಿತ್ತು. ಆದರೆ ಈಗ ಮತ್ತೆ ಕನ್ನಡ ಚಿತ್ರರಂಗ ಸಿಂಗಾರಗೊಂಡು ಒಂದೇ ಸೂರಿನಡಿ ಇಂಡಸ್ಟ್ರಿಯ ಎಲ್ಲರೂ ಕಾಣಿಸಿಕೊಳ್ಳುವ ಶುಭ ಸೂಚನೆ ಸಿಕ್ಕಿದೆ.

Written by - YASHODHA POOJARI | Edited by - Bhavishya Shetty | Last Updated : Aug 16, 2022, 05:30 PM IST
    • ಶಿವರಾಜ್ ಕುಮಾರ್- ರವಿಚಂದ್ರನ್ ಒಂದಾಗಿ ಮಾಡಿದ್ದ ಸಿನಿಮಾ ಕೋದಂಡರಾಮ
    • ಇದೀಗ ಇಬ್ಬರೂ ನಟರು 60ನೇ ವರ್ಷದ ಹುಟ್ಟುಹಬ್ಬದ ಆಚರಣೆಯಲ್ಲಿದ್ದಾರೆ
    • ಬರ್ತ್ ಡೇ ಆಚರಿಸಲು ಪ್ಲ್ಯಾನ್ ಮಾಡಿಕೊಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
‘ಕೋದಂಡರಾಮ’ನಿಗಾಗಿ ಒಟ್ಟಾಗುತ್ತಿದೆ ಸಿನಿರಂಗ: ಶಿವಣ್ಣ-ರವಿಮಾಮ ಬರ್ತ್ ಡೇಗೆ ನಡೀತಿದೆ ಸಿದ್ಧತೆ title=
Kannada Cinema Industry

ಸ್ಯಾಂಡಲ್ ವುಡ್ ಸದ್ದಿಲ್ಲದೆ ಒಂದು ದೊಡ್ಡ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ. ಇನ್ನು ಈ ಕಾರ್ಯಕ್ರಮ ಚಿತ್ರರಂಗದ ಮಾತೃ ಸಂಸ್ಥೆ ಫಿಲ್ಮ್ ಚೇಂಬರ್ ಉಸ್ತುವಾರಿಯಲ್ಲಿ ನಡೆಯಲಿದೆ. ಅಷ್ಟಕ್ಕೂ ಯಾವ ಕಾರ್ಯಕ್ರಮಕ್ಕೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ ಎಂದು ತಿಳಿದುಕೊಳ್ಳಬೇಕೇ? ಹಾಗಾದ್ರೆ ಈ ಸ್ಟೋರಿ ನೋಡಿ. 

ಇದನ್ನೂ ಓದಿ: ಪ್ರೇಮ್ ಜೊತೆ ಸೇರಿ ‘ಕೇಡಿ’ಯಾದ ಧ್ರುವ ಸರ್ಜಾ! ಆಕ್ಷನ್ ಪ್ರಿನ್ಸ್ ಕಥೆ ಏನು?

ಕೊರೊನಾ ಹಾಗೂ ಅಪ್ಪು ಅಗಲಿಕೆಯಿಂದ ಕನ್ನಡ ಚಿತ್ರರಂಗದ ಬಣ್ಣ ಮಾಸಿತ್ತು. ಆದರೆ ಈಗ ಮತ್ತೆ ಕನ್ನಡ ಚಿತ್ರರಂಗ ಸಿಂಗಾರಗೊಂಡು ಒಂದೇ ಸೂರಿನಡಿ ಇಂಡಸ್ಟ್ರಿಯ ಎಲ್ಲರೂ ಕಾಣಿಸಿಕೊಳ್ಳುವ ಶುಭ ಸೂಚನೆ ಸಿಕ್ಕಿದೆ. ಅದು ಯಾವ ಕಾರಣಕ್ಕೆ ಚಿತ್ರರಂಗದ ದಿಗ್ಗಜರೆಲ್ಲ ಒಂದೇ ಕಡೆ ಕಾಣಿಸ್ತಾರೆ ಅಂತ ಯಾರಾದ್ರು ಪ್ರಶ್ನೆ ಕೇಳಿದ್ರೆ ಅದಕ್ಕೆ ಉತ್ತರ ಸ್ಯಾಂಡಲ್ ವುಡ್ ನ " ಕೋದಂಡರಾಮ "

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗಾಗಿ ಚಂದನವನದ ಎಲ್ಲಾ ತಾರೆಯರು ಒಂದುಗೂಡುವ ಸಮಯ ಬಂದಿದೆ. ಇತ್ತೀಚೆಗಷ್ಟೆ ಸೆಂಚುರಿ ಸ್ಟಾರ್ ಶಿವಣ್ಣ 60ನೇ ವಂಸಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ ಕನಸುಗಾರ ರವಿಮಾಮ‌ ಕೂಡ 60 ವಸಂತಗಳನ್ನು ಪೂರೈಸಿದ್ದು, ಈ ಸಂಭ್ರಮವನ್ನು ದೊಡ್ಡ ಮಟ್ಟದಲ್ಲಿ ಸೆಲೆಬ್ರೇಶನ್ ಮಾಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ಲಾನ್ ಮಾಡಿಕೊಂಡಿದೆ.

ಇನ್ನು ಈ ಕಾರ್ಯಕ್ರಮಕ್ಕೆ ಈಗಾಗಲೇ ತಯಾರಿ ಶುರುವಾಗಿದ್ದು, ಸ್ಯಾಂಡಲ್ ವುಡ್ನ ಕೋದಂಡರಾಮನಿಗಾಗಿ ಕನ್ನಡದ ನಟ-ನಟಿಯರಷ್ಟೇ ಅಲ್ಲ, ಸೌತ್ ಇಂಡಿಯಾದ ಸಿನಿ ಸೆಲೆಬ್ರಿಟಿಗಳು ‌ಒಂದಾದೋ ಶುಭ ಸಮಯ‌ ಬಂದಿದೆ. 

ಇದನ್ನೂ ಓದಿ: Box Office: 5 ದಿನವೂ ಅಮಿರ್ ಖಾನ್‌ಗೆ ಸೋಲು, ‘ಲಾಲ್ ಸಿಂಗ್ ಛಡ್ಡಾ’ ಗಳಿಸಿದ್ದೆಷ್ಟು..?

ಫಿಲ್ಮ್ ಚೇಂಬರ್ ಶಿವಣ್ಣನ ಹಾಗೂ ರವಿಮಾಮನ 60 ನೇ ಹುಟ್ಟುಹಬ್ಬವನ್ನು ಮೈಲುಗಲ್ಲಾಗಿಸಲು ರೆಡಿಯಾಗ್ತಿದೆ. ಆದರೆ ಶಿವಣ್ಣ 60 ನೇ ಹುಟ್ಟುಹಬ್ಬವನ್ನು ದೊಡ್ಡ ಮಟ್ಟದಲ್ಲಿ ಮಾಡಲು ಅಪ್ಪು ಕನಸು ಕಂಡಿದ್ದರು. ಆದರೆ ಅಪ್ಪು ಅಕಾಲಿಕ ಮರಣಕ್ಕೆ ತುತ್ತಾದ ಕಾರಣ ಅಪ್ಪು ಕಂಡ ಕನಸು ಕನಸಾಗಿಯೇ ಉಳಿದಿತ್ತು. ಆದರೆ ಈಗ ಅಪ್ಪು ಕಂಡ ಕನಸನ್ನು ಫಿಲ್ಮ್ ಚೇಂಬರ್ ನನಸು ಮಾಡಲು ಹೊರಟಿದ್ದು ದೊಡ್ಮನೆ ಅಭಿಮಾನಿಗಳ ಮುಖದಲ್ಲಿ ಸಂಭ್ರಮ ಮೂಡುವಂತೆ ಮಾಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News