"ನನ್ನ ಬಹುಮಾನದ ಹಣವನ್ನು ಅವರಿಗೆ ಕೊಡಿ" ಬಿಸಿಸಿಐಗೆ ರಾಹುಲ್‌ ದ್ರಾವಿಡ್‌ ಮನವಿ

ಟಿ20 ವಿಶ್ವಕಪ್-2024ರಲ್ಲಿ ಚಾಂಪಿಯನ್ ಆಗಿ ಭಾರತ ತಂಡ ಹೊರಹೊಮ್ಮಿದೆ. ರೋಹಿತ್ ಸೇನೆ ಅದ್ಭುತ ಹೋರಾಟ ನಡೆಸಿ 13 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿತು. ಆದರೆ, ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಭಾರೀ ಬೆಂಬಲ ನೀಡಿದ್ದು ಗೊತ್ತೇ ಇದೆ. ವಿಜಯೋತ್ಸವದ ನಂತರ ವಾಂಖೆಡೆ ಸ್ಟೇಡಿಯಂನಲ್ಲಿ 125 ಕೋಟಿ ರೂ.ಗಳ ಚೆಕ್ ಅನ್ನು ಆಟಗಾರರಿಗೆ ಹಸ್ತಾಂತರಿಸಲಾಯಿತು.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಟಿ20 ವಿಶ್ವಕಪ್-2024ರಲ್ಲಿ ಚಾಂಪಿಯನ್ ಆಗಿ ಭಾರತ ತಂಡ ಹೊರಹೊಮ್ಮಿದೆ. ರೋಹಿತ್ ಸೇನೆ ಅದ್ಭುತ ಹೋರಾಟ ನಡೆಸಿ 13 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿತು. ಆದರೆ, ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಭಾರೀ ಬೆಂಬಲ ನೀಡಿದ್ದು ಗೊತ್ತೇ ಇದೆ. ವಿಜಯೋತ್ಸವದ ನಂತರ ವಾಂಖೆಡೆ ಸ್ಟೇಡಿಯಂನಲ್ಲಿ 125 ಕೋಟಿ ರೂ.ಗಳ ಚೆಕ್ ಅನ್ನು ಆಟಗಾರರಿಗೆ ಹಸ್ತಾಂತರಿಸಲಾಯಿತು.  

2 /5

ಆದರೆ, ಬಿಸಿಸಿಐ ಈ ಬೃಹತ್ ಮೊತ್ತವನ್ನು ಆಟಗಾರರು, ಕೋಚಿಂಗ್ ಸಿಬ್ಬಂದಿ, ಇತರೆ ಸಿಬ್ಬಂದಿ ಹಾಗೂ ಆಯ್ಕೆದಾರರಿಗೆ ನಿರ್ದಿಷ್ಟ ಮಾನದಂಡಗಳ ಪ್ರಕಾರ ವಿತರಿಸಿದೆ. ಈ ಕ್ರಮದಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಿಗೆ ತಲಾ ರೂ.5 ಕೋಟಿ ನೀಡಲು ನಿರ್ಧರಿಸಲಾಗಿದೆ. ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಆಟಗಾರರಿಗೆ ಸರಿಸಮವಾಗಿ 5 ಕೋಟಿ ರೂಪಾಯಿ ನೀಡಲು ಬಿಸಿಸಿಐ ನಿರ್ಧರಿಸಿದೆ.  

3 /5

ಆದರೆ, ರಾಹುಲ್ ದ್ರಾವಿಡ್ ಅವರ ಸಹಾಯಕ ಸಿಬ್ಬಂದಿಯಾಗಿರುವ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪರಜ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರಿಗೆ ತಲಾ 2.5 ಕೋಟಿ ರೂ.ಗಳನ್ನು ಮಾತ್ರ ನೀಡಲು ಬಿಸಿಸಿಐ ನಿರ್ಧರಿಸಿದೆ.   

4 /5

ಇದೇ ಕಾರಣದಿಂದ ಬೇಸರಗೊಂಡಿರುವ ರಾಹುಲ್‌ ದ್ರಾವಿಡ್‌, ತಮಗೆ ನೀಡಿರುವ ಬಹುಮಾನದ ಮೊತ್ತವನ್ನು ತನ್ನ ಸಹಾಯಕ ಸಿಬ್ಬಂದಿಗೆ ನೀಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ. ದ್ರಾವಿಡ್ 5 ಕೋಟಿ ರೂ.ಗಳನ್ನು ನಯವಾಗಿ ನಿರಾಕರಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.  

5 /5

ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಭಾರತ ತಂಡದ 15 ಸದಸ್ಯರಿಗೆ ಬಿಸಿಸಿಐ ನೀಡಿದ ಬಹುಮಾನದ ಮೊತ್ತವನ್ನು ನೀಡಲಾಗಿದೆ. ಕುಲದೀಪ್ ಯಾದವ್, ಯುಜುವೇಂದ್ರ ಚಹಾಲ್, ಸಂಜು ಮತ್ತು ಯಶಸ್ವಿ ಜೈಸ್ವಾಲ್ ತಲಾ ರೂ. ಐದು ಕೋಟಿ ನೀಡಲಾಗುವುದು.