Horoscope Today: ಯಾವ ರಾಶಿಯವರಿಗೆ ಇಂದು ಲಕ್ಷ್ಮಿದೇವಿಯ ಆಶೀರ್ವಾದ ಸಿಗುತ್ತದೆ?

Astrology Today: ಮಿಥುನ ರಾಶಿಯ ಜನರು ಹೊಸ ಯೋಜನೆಗೆ ಸಿದ್ಧರಾಗಿರಬೇಕು. ತುಲಾ ರಾಶಿಯ ಜನರು ಶೀಘ್ರವೇ ಶುಭಸುದ್ದಿ ಪಡೆಯಲಿದ್ದಾರೆ. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

Written by - Zee Kannada News Desk | Last Updated : Sep 11, 2022, 07:11 AM IST
  • ಮೇಷ ರಾಶಿಯವರು ನಿರ್ಧಾರ ತೆಗೆದುಕೊಳ್ಳುವಾಗ ಅಹಂಕಾರ ತೋರಬಾರದು
  • ಮಿಥುನ ರಾಶಿಯ ಜನರು ಹೊಸ ಯೋಜನೆಗೆ ಸದಾ ಸಿದ್ಧರಾಗಿರಬೇಕು
  • ಧನು ರಾಶಿಯ ವ್ಯವಹಾರಸ್ಥರು ದೊಡ್ಡ ಲಾಭವನ್ನು ಗಳಿಸುತ್ತಾರೆ
Horoscope Today: ಯಾವ ರಾಶಿಯವರಿಗೆ ಇಂದು ಲಕ್ಷ್ಮಿದೇವಿಯ ಆಶೀರ್ವಾದ ಸಿಗುತ್ತದೆ?   title=
Horoscope Today (11-09-2022)

Horoscope Today(11-09-2022): ಭಾನುವಾರದಂದು ಮೇಷ ರಾಶಿಯ ಜನರು ನಿರ್ಧಾರ ತೆಗೆದುಕೊಳ್ಳುವಾಗ ಅಹಂಕಾರ ತೋರಬಾರದು. ಅದೇ ರೀತಿ ತುಲಾ ರಾಶಿಯ ಜನರು ಕುಟುಂಬ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.  

ಮೇಷ ರಾಶಿ: ಮೇಷ ರಾಶಿಯವರು ಅಧಿಕೃತ ನಿರ್ಧಾರ ತೆಗೆದುಕೊಳ್ಳುವಾಗ ಅಹಂಕಾರ ತೋರಬಾರದು. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಯುವಕರು ಒತ್ತಡದ ಪರಿಸ್ಥಿತಿಯಿಂದ ಹೊರಬರಬೇಕು. ಸೊಸೆಯಂದಿರಿಗೆ ಅತ್ತೆಯ ಕಡೆಯಿಂದ ನಕಾರಾತ್ಮಕ ಮಾಹಿತಿ ಬರುವ ಸಾಧ್ಯತೆ ಇದೆ. ಆರೋಗ್ಯಕ್ಕೆ ಮುಹೂರ್ತದ ಅಗತ್ಯವಿಲ್ಲ, ಹೀಗಾಗಿ ಇಂದಿನಿಂದಲೇ ಧ್ಯಾನ ಮತ್ತು ವ್ಯಾಯಾಮ ಮಾಡಲು ಪ್ರಾರಂಭಿಸಿ. ಹೊರಗಿನವರ ನಂಬಿಕೆಯ ಮೇಲೆ ಯಾವುದೇ ಕೆಲಸ ಮಾಡಬೇಡಿ ಮತ್ತು ನಿಮ್ಮ ಸಾಮರ್ಥ್ಯದ ಆಧಾರದ ಮೇಲೆ ಕೆಲಸ ನಿರ್ವಹಿಸಿ.

ವೃಷಭ ರಾಶಿ: ಈ ರಾಶಿಯ ಸಂಶೋಧನೆ ಮಾಡುವವರಿಗೆ ಇಂದು ಶುಭ ದಿನವಾಗಿದೆ. ಇವರು ತಮ್ಮ ಸಂಶೋಧನೆಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಚಿಲ್ಲರೆ ಮತ್ತು ಡೈರಿ ವ್ಯಾಪಾರಿಗಳು ಹಣಕಾಸಿನ ಪ್ರಯೋಜನ ಪಡೆಯಬಹುದು. ನಿಮ್ಮ ಮನಸ್ಸಿನ ನಕಾರಾತ್ಮಕ ಆಲೋಚನೆಗಳಿಗೆ ಫುಲ್‍ಸ್ಟಾಪ್ ನೀಡಿ. ತಂದೆಯಿಂದ ಆರ್ಥಿಕ ಸಹಾಯ  ನಿರೀಕ್ಷಿಸಲಾಗಿದೆ. ಫೈಬರ್ ಭರಿತ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ. ಸುತ್ತಮುತ್ತಲಿನ ಸಮಸ್ಯೆಗೆ ಹೆದರಬೇಡಿ, ಧೈರ್ಯದಿಂದ ಎದುರಿಸಿ.  

ಮಿಥುನ ರಾಶಿ: ಮಿಥುನ ರಾಶಿಯ ಜನರು ಹೊಸ ಯೋಜನೆಗೆ ಸಿದ್ಧರಾಗಿರಬೇಕು. ಲಾಭದ ಆಲೋಚನೆ ಬರದಿದ್ದರೆ ಖಿನ್ನರಾಗಬೇಡಿ, ವ್ಯಾಪಾರದಲ್ಲಿ ಉತ್ಸಾಹದಿಂದ ಕೆಲಸ ಮಾಡಿದರೆ ಲಾಭ ಸಿಗುತ್ತದೆ. ಗ್ರಹಗಳ ಶುಭ ಸ್ಥಾನವು ಯುವಕರಿಗೆ ಉದ್ಯೋಗದ ಅವಕಾಶ ನೀಡಬಹುದು. ನಿಮ್ಮ ಅಗತ್ಯದ ಮೇಲೆ ತೆಗೆದುಕೊಂಡ ಸಾಲವನ್ನು ಇದೀಗ ಮರುಪಾವತಿಸುವುದು ಸೂಕ್ತ.

ಕರ್ಕ ರಾಶಿ: ಈ ರಾಶಿಯ ಜನರು ಕೆಲಸದಲ್ಲಿ ತೊಂದರೆಗಳನ್ನು ಹೊಂದಿರುತ್ತಾರೆ. ಹಣ ಲಾಭದ ಸಾಧ್ಯತೆಯಿದೆ. ಯುವಕರು ಅನಾವಶ್ಯಕ ವಿಷಯಗಳಿಗೆ ಗಮನ ನೀಡದೆ ಗುರಿ ಸಾಧಿಸಬೇಕು. ಮಗುವಿನ ಶಿಕ್ಷಣದ ಬಗ್ಗೆ ಚಿಂತಿಸುವ ಬದಲು, ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ಕಂಡುಕೊಳ್ಳಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಆಹಾರ ಸೇವನೆ ಮುಖ್ಯ. ನಿಮ್ಮ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಒಳ್ಳೆಯ ಜನರನ್ನು ನೀವು ಭೇಟಿ ಮಾಡಬೇಕು.

ಇದನ್ನೂ ಓದಿ: Tulsi Puja Tips: ಯಾವ ಎರಡು ದಿನ ತುಳಸಿ ಸಸ್ಯವನ್ನು ಸ್ಪರ್ಶಿಸುವುದು ಅಶುಭ? ಸ್ಪರ್ಶಿಸಿದರೆ ಲಕ್ಷ್ಮಿ ಮುನಿಸಿಗೆ ಕಾರಣ

ಸಿಂಹ ರಾಶಿ: ಸಿಂಹ ರಾಶಿಯ ಜನರು ಹುರುಪಿನಿಂದ ಕೆಲಸ ಮಾಡಬೇಕಾಗುತ್ತದೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಬರದಿದ್ದರೆ ತಾಳ್ಮೆಯಿಂದಿರಿ, ಭವಿಷ್ಯದಲ್ಲಿ ವ್ಯಾಪಾರ ಹೆಚ್ಚಾಗುತ್ತದೆ. ಪೋಷಕರ ಸೇವೆ ಮಾಡಿ ಆಶೀರ್ವಾದ ತೆಗೆದುಕೊಂಡರೆ ತುಂಬಾ ಪ್ರಯೋಜನಕಾರಿ. ಕುಟುಂಬದ ಬಗ್ಗೆ ನಿಮ್ಮ ಕಠಿಣ ನಿರ್ಧಾರಗಳು ಇತರರ ಭಾವನೆಗಳಿಗೆ ಧಕ್ಕೆ ತರಬಹುದು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಭಾವನಾತ್ಮಕ ವಿಷಯಗಳನ್ನು ಕೇಳಿದ ನಂತರ ಅಪರಿಚಿತ ವ್ಯಕ್ತಿಯನ್ನು ನಂಬಬೇಡಿ.

ಕನ್ಯಾ ರಾಶಿ: ಈ ರಾಶಿಯ ಜನರು ಪ್ರಮುಖ ಕೆಲಸವನ್ನು ಆದಷ್ಟು ಬೇಗ ಮಾಡಿ ಮುಗಿಸಬೇಕು. ಇಂದು ಬಟ್ಟೆ ವ್ಯಾಪಾರಿಗಳಿಗೆ ಲಾಭ ಸಿಗುವುದು ಅನುಮಾನ. ನಿಮ್ಮ ಇತರ ವ್ಯವಹಾರಗಳು ಉತ್ತಮವಾಗಿ ನಡೆಯುತ್ತವೆ. ಯುವಕರು ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು. ನಿಮ್ಮ ತಾಯಿಯ ಸೇವೆ ಮಾಡಲು ಅವಕಾಶ ಸಿಕ್ಕರೆ ಅದು ನಿಮ್ಮ ಅದೃಷ್ಟ. ಪ್ರಾಣಿಗಳಿಗೆ ವಿಶೇಷವಾಗಿ ಹಸುವಿಗೆ ಆಹಾರ ನೀಡಿ, ನೀವು ಧನಾತ್ಮಕ ಶಕ್ತಿಯ ಲಾಭ ಪಡೆಯುವಿರಿ.

ತುಲಾ ರಾಶಿ: ತುಲಾ ರಾಶಿಯ ಜನರು ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸುತ್ತಾರೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಇಂದು ಒತ್ತಡದ ದಿನವಾಗಬಹುದು, ಆದ್ದರಿಂದ ತಾಳ್ಮೆಯಿಂದ ದಿನ ಕಳೆಯುವುದು ಸೂಕ್ತ. ಹಠಾತ್ ಕೌಟುಂಬಿಕ ಸಮಸ್ಯೆ ಎದುರಿಸಬೇಕಾಗಬಹುದು, ಮಾನಸಿಕವಾಗಿ ನೀವು ಅದಕ್ಕೆ ಸಿದ್ಧರಾಗಿರಬೇಕು. ದೀರ್ಘಕಾಲದ ಕಾಯಿಲೆಯಿಂದ ನೀವು ಅಸಮಾಧಾನಗೊಳ್ಳಬಹುದು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಯಶಸ್ಸನ್ನು ಪಡೆಯುತ್ತೀರಿ.  

ವೃಶ್ಚಿಕ ರಾಶಿ: ಈ ರಾಶಿಯವರು ಒಂದೇ ಬಾರಿಗೆ ಅನೇಕ ಕೆಲಸಗಳನ್ನು ಮಾಡಬಾರದು. ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆಯುತ್ತಾರೆ. ಇತರ ವ್ಯವಹಾರಗಳು ಪ್ರಗತಿ ಹೊಂದುತ್ತವೆ. ಹದಗೆಟ್ಟ ಆರೋಗ್ಯದಲ್ಲಿ ಪರಿಹಾರ ಪಡೆಯುವ ಎಲ್ಲಾ ಸಾಧ್ಯತೆಗಳಿವೆ, ಆದರೆ ನಿರ್ಲಕ್ಷ್ಯ ಅಗತ್ಯವಿಲ್ಲ. ಸ್ನೇಹಿತರು ಸಹ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತಾರೆ.

ಇದನ್ನೂ ಓದಿ: Kanya Sankranti 2022: ಕನ್ಯಾ ಸಂಕ್ರಮಣದ ದಿನ ಘನತೆ-ಗೌರವ ವೃದ್ಧಿಗಾಗಿ ಈ ರೀತಿ ಸೂರ್ಯನ ಉಪಾಸನೆ ಕೈಗೊಳ್ಳಿ

ಧನು ರಾಶಿ: ಧನು ರಾಶಿಯ ಉದ್ಯೋಗಿಗಳು ತಾಳ್ಮೆ ತೋರಿಸಬೇಕು ಮತ್ತು. ವ್ಯವಹಾರ ಮಾಡುವವರು ದೊಡ್ಡ ಲಾಭ ಗಳಿಸುತ್ತಾರೆ. ಮನಸ್ಸನ್ನು ಶಾಂತವಾಗಿಟ್ಟುಕೊಂಡು ಭಗವಂತನ ಧ್ಯಾನ ಮಾಡಿ, ಕ್ರಮೇಣ ಎಲ್ಲವೂ ಸರಿಹೋಗುತ್ತದೆ. ಕೌಟುಂಬಿಕ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತವೆ, ಆದ್ದರಿಂದ ಅನಗತ್ಯ ಚಿಂತಿಸಬೇಕಾಗಿಲ್ಲ. ಶೀಘ್ರವೇ ನಿಮಗೆ ಶುಭಸುದ್ದಿ ಸಿಗಲಿದೆ.  

ಮಕರ ರಾಶಿ: ಈ ರಾಶಿಯವರಿಗೆ ಉದ್ಯೋಗ ಬದಲಾಯಿಸುವ ದಿನ ಒಳ್ಳೆಯದಲ್ಲ. ಆನ್‌ಲೈನ್ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭ ಸಿಗಲಿದೆ. ಯುವಕರು ತಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು ಮತ್ತು ಯಾವುದೇ ರೀತಿಯ ಗೊಂದಲವಿದ್ದರೆ ಧ್ಯಾನದ ಸಹಾಯ ತೆಗೆದುಕೊಳ್ಳಬೇಕು. ಸಹೋದರರೊಂದಿಗೆ ಸಮಯ ಕಳೆಯಿರಿ, ಪ್ರಮುಖ ವಿಷಯಗಳನ್ನು ಅವರೊಂದಿಗೆ ಚರ್ಚಿಸಬಹುದು. ಅನವಶ್ಯಕವಾಗಿ ಖಾಲಿ ಹೊಟ್ಟೆಯಲ್ಲಿ ಇರಬೇಡಿ, ಲಘು ಉಪಹಾರ ಸೇವಿಸಿರಿ. ಧರ್ಮ ಕಾರ್ಯಗಳತ್ತ ಗಮನ ಹರಿಸಿದರೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ.

ಕುಂಭ ರಾಶಿ: ಕುಂಭ ರಾಶಿಯವರು ಧನಾತ್ಮಕ ಶಕ್ತಿಯನ್ನು ಅನುಭವಿಸುತ್ತಾರೆ. ದಿನದ ಆರಂಭದಲ್ಲಿ ನೀವು ಬಯಸಿದ ಕೆಲಸವನ್ನು ಪಡೆಯಬಹುದು. ಉದ್ಯಮಿಗಳಿಗೆ ಇಂದು ಉತ್ತಮ ದಿನವಾಗಿರುತ್ತದೆ. ಯುವಕರು ಆಸಕ್ತಿಯಿಲ್ಲದ ಕೆಲಸವನ್ನು ಬಿಟ್ಟು ಆಸಕ್ತಿಯಿರುವ ಕೆಲಸ ಮಾಡಬೇಕು. ಸಕ್ಕರೆಯ ರೋಗಿಗಳು ಆಹಾರದ ಬಗ್ಗೆ ಕಾಳಜಿ ವಹಿಸಿರಿ.   

ಮೀನ ರಾಶಿ: ಈ ರಾಶಿಯವರು ತಮ್ಮ ಅಧೀನ ಅಧಿಕಾರಿಗಳ ಮೇಲೆ ಅನಗತ್ಯವಾಗಿ ಕೋಪ ಮಾಡಿಕೊಳ್ಳಬಾರದು. ಕಬ್ಬಿಣದ ವ್ಯಾಪಾರದಲ್ಲಿ ಉತ್ತಮ ಲಾಭ ನಿರೀಕ್ಷಿಸಲಾಗಿದೆ, ಗ್ರಾಹಕರ ಬೇಡಿಕೆಯ ಗುಣಮಟ್ಟ ಇಟ್ಟುಕೊಳ್ಳಬೇಕು. ಯುವಕರು ತಮ್ಮ ಮೊಂಡುತನದ ಸ್ವಭಾವದಲ್ಲಿ ಸಂಯಮ ಹೊಂದಿರಬೇಕು ಮತ್ತು ಎಲ್ಲರೊಂದಿಗೆ ಹೊಂದಿಕೊಳ್ಳಬೇಕು. ನಿಮ್ಮ ಸಂಗಾತಿಯೊಂದಿಗೆ ಸಾಮರಸ್ಯದಿಂದ ಬದುಕಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News