Horoscope Today: ಈ ರಾಶಿಯ ಜನರಿಗೆ ಧನಲಾಭದ ಜೊತೆಗೆ ಉದ್ಯೋಗ ಭಾಗ್ಯ

Horoscope Today(03-07-2022): ಮೀನ ರಾಶಿಯ ವ್ಯಾಪಾರಿಗಳು ಲಾಭದ ಬಗ್ಗೆ ಜಾಗರೂಕರಾಗಿರಬೇಕು. ವೃಶ್ಚಿಕ ರಾಶಿಯ ಜನರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇಂದಿನ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.

Written by - Zee Kannada News Desk | Last Updated : Jul 3, 2022, 06:01 AM IST
  • ಮೇಷ ರಾಶಿಯ ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಪರಿಹಾರ ಸಿಗುತ್ತದೆ
  • ಮಿಥುನ ರಾಶಿಯ ಜನರಿಗೆ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ
  • ಮೀನ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಸಮಯವು ಉತ್ತಮವಾಗಿರುತ್ತದೆ
Horoscope Today: ಈ ರಾಶಿಯ ಜನರಿಗೆ ಧನಲಾಭದ ಜೊತೆಗೆ ಉದ್ಯೋಗ ಭಾಗ್ಯ  title=
Horoscope Today (03-07-2022)

Horoscope Today(03-07-2022): ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಭಾನುವಾರ ಉತ್ತಮ ದಿನವಾಗಲಿದೆ. ಸಿಂಹ ರಾಶಿಯವರಿಗೆ ಭಾನುವಾರ ಉತ್ತಮ ಅವಕಾಶಗಳನ್ನು ತಂದುಕೊಡುತ್ತದೆ.  ಅದೇ ರೀತಿ ತುಲಾ ರಾಶಿಯ ಜನರ ಪ್ರಾಬಲ್ಯವು ಸಮಾಜದಲ್ಲಿ ಹೆಚ್ಚಾಗಬಹುದು.

ಮೇಷ ರಾಶಿ: ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಪರಿಹಾರ ಸಿಗುತ್ತದೆ. ಇದರೊಂದಿಗೆ ಉದ್ಯೋಗ ಮಾಡುವವರಿಗೆ ಬಡ್ತಿಯ ಸಂಪೂರ್ಣ ಸಾಧ್ಯತೆಯಿದೆ. ವೈದ್ಯಕೀಯ ಸಂಬಂಧಿತ ವ್ಯವಹಾರದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳಿಗೆ ಇದು ಸರಿಯಾದ ಸಮಯ. ಇಂದು ಆರೋಗ್ಯಕ್ಕೆ ಸಾಮಾನ್ಯ ದಿನವಾಗಿರುತ್ತದೆ, ಆದರೆ ಯಾವುದೇ ರೀತಿಯ ನಿರ್ಲಕ್ಷ್ಯ ಇರಬಾರದು. ಒಂದಿಷ್ಟು ದಾನ ಮಾಡಿ ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಕಚೇರಿಯಲ್ಲಿ ಮೇಲಧಿಕಾರಿಯೊಂದಿಗೆ ವೈಮನಸ್ಸು ಉಂಟಾಗಬಹುದು. ಮಹಿಳಾ ಸಹೋದ್ಯೋಗಿಗಳಿಗೆ ಗೌರವ ನೀಡಿ. ಇಂದು ಧಾನ್ಯ ವ್ಯವಹಾರದಲ್ಲಿ ನಷ್ಟವಾಗುವ ಸಂಭವವಿದ್ದು, ಎಚ್ಚರಿಕೆಯಿಂದ ಯೋಚಿಸಿದ ನಂತರವೇ ಒಪ್ಪಂದ ಮಾಡಿಕೊಳ್ಳಿ. ನಿಮ್ಮ ಸ್ನೇಹವು ಶ್ರೀರಾಮ ಮತ್ತು ಸುಗ್ರೀವನಂತಿರಬೇಕು. ಇಂದು ನೀವು ನಿಮ್ಮ ಸಮಯವನ್ನು ಭಗವಂತನ ಆರಾಧನೆಯಲ್ಲಿ ಕಳೆಯಬೇಕು, ದೇವರಿಗೆ ಸಿಹಿಯನ್ನು ಮಾಡಿ ಅರ್ಪಿಸಬೇಕು.

ಮಿಥುನ ರಾಶಿ: ಈ ರಾಶಿಯವರ ಕಚೇರಿಯಲ್ಲಿ ಬಾಕಿ ಕೆಲಸವಿದ್ದರೆ ನಿಮ್ಮ ಬಾಕಿ ಆದಷ್ಟು ಬೇಗ ಪೂರ್ಣಗೊಳಿಸಲು ಯೋಜನೆ ರೂಪಿಸಿ. ಸರಕುಗಳ ಚಿಲ್ಲರೆ ವ್ಯಾಪಾರ ಮಾಡುವ ವ್ಯಾಪಾರಿಗಳು ಇಂದು ಉತ್ತಮ ಲಾಭ ಗಳಿಸುವ ಸಾಧ್ಯತೆಯಿದೆ. ಆದ್ದರಿಂದ ಚಿಲ್ಲರೆ ವ್ಯಾಪಾರಿಗಳು ತಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಬೇಕು, ಇದರಿಂದ ಗರಿಷ್ಠ ಲಾಭವನ್ನು ಪಡೆಯಬಹುದು. ಪ್ರತಿಯೊಬ್ಬ ಯುವಕರು ತಾಂತ್ರಿಕ ಜ್ಞಾನವನ್ನು ಹೊಂದಿರುವುದು ಅವಶ್ಯಕ. ಅನಾರೋಗ್ಯದಿಂದ ಬಳಲುತ್ತಿರುವವರು ಜಾಗರೂಕರಾಗಿರಬೇಕು. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿ.

ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರ ಅಧಿಕೃತ ಕೆಲಸ ಇಂದು ನಡೆಯಲಿದೆ, ಆದ್ದರಿಂದ ಮುಂಚಿತವಾಗಿ ಸಿದ್ಧರಾಗಿರಿ. ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದಿಂತೆ ನಿಮಗೆ ಉತ್ತಮ ಲಾಭ ಸಿಗಲಿದೆ. ನಿಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಿ. ಪ್ರಾಣಿ-ಪಕ್ಷಿಗಳಿಗೆ ಸೇವೆ ಮಾಡಿರಿ.

ಇದನ್ನೂ ಓದಿ: Planet Retrograde: 11 ದಿನಗಳ ನಂತರ 6 ತಿಂಗಳ ಅವಧಿಗೆ 5 ರಾಶಿಗಳಿಗೆ ಈ ಗ್ರಹದ ಪ್ರಕೋಪದಿಂದ ಮುಕ್ತಿ ಸಿಗಲಿದೆ

ಸಿಂಹ ರಾಶಿ: ಈ ರಾಶಿಯ ಜನರು ತಮ್ಮ ಕೆಲಸದ ಮೇಲೆ ಗಮನ ಹರಿಸಬೇಕು. ನೀವು ವ್ಯಾಪಾರದಲ್ಲಿ ಅಪೇಕ್ಷಿತ ಪ್ರಮಾಣದ ಲಾಭವನ್ನು ಪಡೆಯುತ್ತೀರಿ. ನೀವು ಸಣ್ಣ ಬದಲಾವಣೆ ಮಾಡಿದರೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸಬಹುದು. ಯುವಕರು ಇತರರ ವಿವಾದಗಳಲ್ಲಿ ಮಾತನಾಡುವುದನ್ನು ತಪ್ಪಿಸಬೇಕು,   ನಿಮ್ಮ ದುಷ್ಟರ ಮೇಲೆ ಕೋಪಗೊಳ್ಳಬೇಡಿ. 

ಕನ್ಯಾ ರಾಶಿ: ಕನ್ಯಾ ರಾಶಿಯವರು ತಮ್ಮ ಕೆಲಸಗಳು ಹೆಚ್ಚಾದಾಗ  ತಾಳ್ಮೆವಹಿಸಿ ಮುಗಿಸಬೇಕು. ಯುವಕರು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಜೀವನ ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆ ಇರುತ್ತದೆ, ಇದು ನಿಮಗೆ ಮತ್ತು ನಿಮ್ಮ ಸಂಗಾತಿಗೂ ಸಂತೋಷವನ್ನು ನೀಡುತ್ತದೆ.

ತುಲಾ ರಾಶಿ: ಈ ರಾಶಿಯ ಜನರ ವಿದೇಶದಲ್ಲಿ ಉದ್ಯೋಗ ಮಾಡುವ ಆಸೆ ಈಡೇರುವ ಸಾಧ್ಯತೆಯಿದೆ. ಪಾತ್ರೆಗಳ ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆಯಬಹುದು. ಯುವಕರು ಜೀವನದಲ್ಲಿ ಮುನ್ನಡೆಯಲು ಬಯಸಿದರೆ, ಮೊದಲು ತಮ್ಮ ನ್ಯೂನತೆಗಳನ್ನು ಗುರುತಿಸಿ ನಂತರ ಅವುಗಳನ್ನು ನಿವಾರಿಸಲು ಪ್ರಯತ್ನಿಸಿ. ಮಕ್ಕಳ ವರ್ತನೆಯ ಮೇಲೆ ನಿಗಾ ಇಡಬೇಕು. ನೀವು ಸೂರ್ಯ ದೇವರನ್ನು ಪೂಜಿಸಬೇಕು. ಬೆಳಿಗ್ಗೆ ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ ಮತ್ತು ಸಾಧ್ಯವಾದರೆ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜನರು ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ಉದ್ಯಮಿಗಳು ಹಣಕಾಸಿನ ಪರಿಸ್ಥಿತಿಯ ಬಗ್ಗೆ ಚಿಂತಿತರಾಗಿದ್ದಾರೆ, ಈಗ ಅವರ ಸಂತೋಷದ ದಿನಗಳು ಬಂದಿವೆ. ಅವರ ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತವೆ. ಕೋಪಗೊಳ್ಳುವುದು ಯಾವಾಗಲೂ ಹಾನಿಯನ್ನುಂಟುಮಾಡುತ್ತದೆ.

ಇದನ್ನೂ ಓದಿ: Rules for Tulsi Plants: ತುಳಸಿ ಗಿಡದ ಈ ನಿಯಮ ಪಾಲಿಸಿದ್ರೆ ಲಕ್ಷ್ಮಿದೇವಿ ಕೃಪೆ ದೊರೆಯಲಿದೆ

ಧನು ರಾಶಿ: ಉದ್ಯಮಿಗಳ ಪ್ರತಿಷ್ಠೆ ಹೆಚ್ಚಾಗುತ್ತದೆ. ಬೇರೆಯವರಿಗೆ ನೀಡಿದ ಹಣ ವಾಪಸ್ ನಿಮಗೆ ಸಿಗುತ್ತದೆ. ವ್ಯಾಪಾರದ ಸಮಸ್ಯೆಗಳು ಸಹ ದೂರವಾಗುತ್ತವೆ, ಒಟ್ಟಾರೆ ಇಂದು ವ್ಯಾಪಾರಸ್ಥರಿಗೆ ಉತ್ತಮ ದಿನವಾಗಿದೆ. ಯುವಕರ ಕೆಲಸ ಆಗದಿದ್ದರೆ ಎದೆಗುಂದದೆ ಹಿರಿಯರನ್ನು ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಖಂಡಿತ ಸಿಗುತ್ತದೆ. ಸಣ್ಣಪುಟ್ಟ ಕಾಯಿಲೆ ಬಂದರೂ ಅದನ್ನು ನಿರ್ಲಕ್ಷಿಸಿ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಬೇಕು. 

ಮಕರ ರಾಶಿ: ಮಕರ ರಾಶಿಯವರು ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಬುದ್ಧಿವಂತ ನಿರ್ಧಾರ ತೆಗೆದುಕೊಳ್ಳಬೇಕು. ಬಟ್ಟೆ ವ್ಯಾಪಾರಿಗಳು ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ನಿಮ್ಮ ಸುತ್ತಮುತ್ತಲು ವಾಸಿಸುವ ಬಡವರಿಗೆ ಸಹಾಯ ಕೈಲಾದ ಸಹಾಯ ಮಾಡಿರಿ.

ಕುಂಭ ರಾಶಿ: ಈ ರಾಶಿಯ ಜನರು ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿದ್ದರೆ ತಮ್ಮ ಪ್ರಯತ್ನ ಮುಂದುವರೆಸಬೇಕು, ಯಶಸ್ಸು ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಯೋಗ ವ್ಯಾಯಾಮ ಮತ್ತು ಬೆಳಗಿನ ನಡಿಗೆಯಿಂದ ನಿಮ್ಮ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಬಹುದು. ಮುಂಬರುವ ದಿನಗಳಲ್ಲಿ ನಿಮಗೆ ಉತ್ತಮ ಅವಕಾಶಗಳು ಸಿಗಲಿದೆ.

ಮೀನ ರಾಶಿ: ಈ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಸಮಯವು ಉತ್ತಮವಾಗಿರುತ್ತದೆ. ಕಲಿಯುವ ಬಯಕೆಯನ್ನು ಮನಸ್ಸಿನಲ್ಲಟ್ಟುಕೊಂಡು ಹೊಸದನ್ನು ಕಲಿಯಲು ಪ್ರಯತ್ನಿಸಿ. ಈ ರಾಶಿಯ ವ್ಯಾಪಾರಿಗಳು ಲಾಭ ಗಳಿಸುತ್ತಾರೆ. ನಿಮಗೆ ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ಮಿತ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಮಾತ್ರ ಸೇವಿಸಿ. ನೀವು ಮಾಡಬಹುದಾದ ಕೆಲಸಗಳನ್ನು ಮಾತ್ರ ಒಪ್ಪಿಕೊಳ್ಳಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News