Video: ಕೆಕೆಆರ್ ಫೈನಲ್ ಪ್ರವೇಶಿಸಿದ ಬಳಿಕ ಕೈಮುಗಿದು ಕ್ಷಮೆ ಕೇಳಿದ ಶಾರುಖ್ ಖಾನ್! ಯಾಕೆ?

IPL 2024: ಗೆಲುವಿನ ಸಂಭ್ರಮದಲ್ಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆ ಶಾರುಖ್ ಖಾನ್ ಕೂಡ ಸೇರಿಕೊಂಡಿದ್ದರು. ಈ ವೇಳೆ ಶಾರುಖ್ ಖಾನ್ ಜೊತೆ ಮಗಳು ಸುಹಾನಾ ಮತ್ತು ಕಿರಿಯ ಮಗ ಅಬ್ರಾಮ್ ಕೂಡ ಇದ್ದರು. ಶಾರುಖ್ ಖಾನ್ ತಮ್ಮ ಮಕ್ಕಳೊಂದಿಗೆ ಮೈದಾನವನ್ನು ಸುತ್ತುತ್ತಿದ್ದರು.

Written by - Bhavishya Shetty | Last Updated : May 22, 2024, 03:54 PM IST
    • ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆ ಶಾರುಖ್ ಖಾನ್ ಕೂಡ ಸೇರಿಕೊಂಡಿದ್ದರು
    • ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಾಲೀಕ ಶಾರುಖ್ ಖಾನ್
    • ಗೆಲುವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ನೇರವಾಗಿ ಫೈನಲ್ ಪ್ರವೇಶಿಸಿದೆ
Video: ಕೆಕೆಆರ್ ಫೈನಲ್ ಪ್ರವೇಶಿಸಿದ ಬಳಿಕ ಕೈಮುಗಿದು ಕ್ಷಮೆ ಕೇಳಿದ ಶಾರುಖ್ ಖಾನ್! ಯಾಕೆ?  title=
Shah Rukh Khan

IPL 2024: ಅಹಮದಾಬಾದ್‌’ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಕ್ವಾಲಿಫೈಯರ್-1 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ 8 ವಿಕೆಟ್‌’ಗಳಿಂದ ಜಯಗಳಿಸಿತು. ಈ ಗೆಲುವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ನೇರವಾಗಿ ಫೈನಲ್ ಪ್ರವೇಶಿಸಿದೆ.

ಇದನ್ನೂ ಓದಿ: ಈ ಹಣ್ಣಷ್ಟೇ ಸಾಕು: ಕೇವಲ 5 ದಿನದಲ್ಲಿ ಜೋತುಬಿದ್ದ ಬೊಜ್ಜು ತುಂಬಿದ ಹೊಟ್ಟೆ ಚಪ್ಪಟೆಯಾಗುತ್ತೆ! ಹೀರೋಯಿನ್ ಲುಕ್ ನಿಮ್ಮದಾಗುತ್ತೆ

ಗೆಲುವಿನ ಸಂಭ್ರಮದಲ್ಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆ ಶಾರುಖ್ ಖಾನ್ ಕೂಡ ಸೇರಿಕೊಂಡಿದ್ದರು. ಈ ವೇಳೆ ಶಾರುಖ್ ಖಾನ್ ಜೊತೆ ಮಗಳು ಸುಹಾನಾ ಮತ್ತು ಕಿರಿಯ ಮಗ ಅಬ್ರಾಮ್ ಕೂಡ ಇದ್ದರು. ಶಾರುಖ್ ಖಾನ್ ತಮ್ಮ ಮಕ್ಕಳೊಂದಿಗೆ ಮೈದಾನವನ್ನು ಸುತ್ತುತ್ತಿದ್ದರು.

ಮೈದಾನದಲ್ಲಿ ತಿರುಗಾಡುತ್ತಿದ್ದಾಗ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಾಲೀಕ ಶಾರುಖ್ ಖಾನ್ ತಪ್ಪಾಗಿ ಮಧ್ಯಪ್ರವೇಶ ಮಾಡಿದ್ದರು, ಅಂದರೆ. ಮಾಜಿ ಕ್ರಿಕೆಟಿಗರಾದ ಆಕಾಶ್ ಚೋಪ್ರಾ, ಸುರೇಶ್ ರೈನಾ ಮತ್ತು ಪಾರ್ಥಿವ್ ಪಟೇಲ್ ಮೈದಾನದಲ್ಲಿ ಪಂದ್ಯದ ನಂತರ ವಿಶ್ಲೇಷಣೆ ನಡೆಸುತ್ತಿದ್ದರು. ಆಗ ತಪ್ಪಾಗಿ ಶಾರುಖ್ ಖಾನ್ ತಮ್ಮ ಲೈವ್ ಕಾರ್ಯಕ್ರಮವನ್ನು ನೋಡದೆ ಮಧ್ಯದಲ್ಲಿ ಬರುತ್ತಾರೆ. ಈ ಸಂದರ್ಭದಲ್ಲಿ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡು ಕೈಮುಗಿದು ಕ್ಷಮೆಯಾಚಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಇದನ್ನೂ ಓದಿ: ಜಾಯಿಕಾಯಿಯನ್ನು ಇದರ ಜೊತೆ ಸೇವಿಸಿದರೆ ಜೋತು ಬಿದ್ದ ಹೊಟ್ಟೆ ಸಣ್ಣಗಾಗುವುದು ಗ್ಯಾರಂಟಿ !

ಶಾರುಖ್ ಖಾನ್ ಅವರನ್ನು ಭೇಟಿಯಾದ ಸುರೇಶ್ ರೈನಾ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಸುರೇಶ್ ರೈನಾ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಎಕ್ಸ್‌’ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, “ಯಾವಾಗಲೂ ಸಭ್ಯರಾಗಿರುವ ಶಾರುಖ್ ಖಾನ್ ಅವರನ್ನು ಇಂದು ಭೇಟಿಯಾಗಿದ್ದು ಸಂತೋಷವಾಗಿದೆ. ಸೂಪರ್‌ಸ್ಟಾರ್ ಆಗಿದ್ದರೂ, ಅವರು ತಮ್ಮ ವಿನಮ್ರ ಇಮೇಜ್ ಅನ್ನು ಕಾಪಾಡಿಕೊಳ್ಳುತ್ತಾರೆ ಮತ್ತು ಪ್ರತಿ ಸಂಭಾಷಣೆಯಲ್ಲಿ ವಿನಮ್ರತೆಯನ್ನು ತೋರಿಸುತ್ತಾರೆ. ಫೈನಲ್ ತಲುಪಿದ್ದಕ್ಕಾಗಿ ಕೆಕೆಆರ್‌’ಗೆ ಅಭಿನಂದನೆಗಳು!” ಎಂದು ಸುರೇಶ್ ರೈನಾ ಹೇಳಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News