Gandhada Gudi : ಅಮೆರಿಕಾದಂತಹ ದೇಶದಲ್ಲಿ ನಿನ್ನೆ (ಅ 27) ರಂದು ಗಂಧದ ಗುಡಿ ತೆರೆ ಕಂಡಿದೆ. ಸಿಂಗಪೂರ್ ನಲ್ಲಿ ಇಂದು (ಅ 28) ರಂದು ಗಂಧದ ಗುಡಿ ಬೆಳ್ಳಿತೆರೆ ಮೇಲೆ ಬಿಡುಗಡೆಯಾಗಿದೆ. ಯುಎಇ ಯಲ್ಲಿ ಈ ಚಿತ್ರ ಅನೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದ್ದು, ದೊಡ್ಡ ಲಿಸ್ಟೇ ಇದೆ.
Gandhada Gudi Twitter Review: ಇದೀಗ ಪುನೀತ್ ಅವರ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಡಾಕ್ಯುಮೆಂಟರಿ ಬಿಡುಗಡೆಯಾಗಿದೆ. ಚಿತ್ರವನ್ನು ಅಮೋಘವರ್ಷ ನಿರ್ದೇಶಿಸಿದ್ದಾರೆ. ಚಿತ್ರವನ್ನು ವೀಕ್ಷಿಸಿದ ಜನರು ತಮ್ಮ ಟ್ವಿಟ್ಟರ್ನಲ್ಲಿ ಈ ಸಿನಿಮಾ ಬಗ್ಗೆ ಬರೆದುಕೊಂಡಿದ್ದಾರೆ. ಗಂಧದ ಗುಡಿಯ ಬಗ್ಗೆ ಟ್ವಿಟ್ಟರ್ ವಿಮರ್ಶೆ ಏನು ಹೇಳುತ್ತೆ ನೋಡೋಣ.
'ಗಂಧದಗುಡಿ'ಯ ಸುಗಂಧದ ಪರಿಮಳ ಭೂಲೋಕವನ್ನೇ ಆವರಿಸಿದೆ. 'ಗಂಧದಗುಡಿ'ಯ ರಾಜಕುಮಾರ ಅಂದ್ರೆ ಅದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಒಂದು ವರ್ಷಗಳ ಕಾಲ ಕಾಡುಮೇಡು ಅಲೆದು ನಮ್ಮ ನಾಡಿನ ಶ್ರೀಮಂತಿಕೆಯನ್ನ 'ಗಂಧದಗುಡಿ' ಸಿನಿಮಾ ಮೂಲಕ ಪ್ರಪಂಚಕ್ಕೆ ಸಾರಿ ಸಾರಿ ಹೇಳಿದ್ದಾರೆ.
ನಾಡಿನ ಪ್ರೀತಿಯ ದೊರೆ ಅಪ್ಪು
ಪುನೀತ್ ರಾಜ್ಕುಮಾರ್ ʻಗಂಧದಗುಡಿʼಯಲ್ಲಿ ಅವರಾಗೇ ಇದ್ರು ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ. ಶೂಟಿಂಗ್ ನಡೀತಿದ್ದ ಕೆಲ ಸ್ಥಳಕ್ಕೆ ನಾನು ಕೂಡಾ ಭೇಟಿಯಾಗಿದ್ದೆ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ
ʻಪುನೀತ ಪರ್ವʼ ಮಾಡಿದ್ದೇ ಅಭಿಮಾನಿಗಳಿಗಾಗಿ. ʻಪುನೀತ ಪರ್ವʼ ಕಾರ್ಯಕ್ರಮದಿಂದ ನನಗೆ ಸಂತೋಷವಾಗಿದೆ. ಕಾರ್ಯಕ್ರಮ ನನಗೆ ತೃಪ್ತಿ ನೀಡಿದೆ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಹೇಳಿದ್ದಾರೆ.
Puneeth Rajkumar Tweet : ಇಂದು ಹಲವು ಕಡೆಗಳಲ್ಲಿ ಗಂಧದ ಗುಡಿ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿದ್ದು, ಟಿಕೆಟ್ಗಳು ಸಹ ಸೋಲ್ಡ್ಔಟ್ ಆಗಿವೆ. ಈ ಎಲ್ಲದರ ಮಧ್ಯೆ ಪುನೀತ್ ರಾಜ್ ಕುಮಾರ್ ಮಾಡಿದ್ದ ಹಳೆಯ ಟ್ವೀಟ್ ಒಂದು ವೈರಲ್ ಆಗಿದೆ.
ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಕನಸಿನ ಕೂಸು ಗಂಧದಗುಡಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ʼಪುನೀತ್ ಪರ್ವʼಕ್ಕೆ ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಚಾಲೆಜಿಂಗ್ ಸ್ಟಾರ್ ದರ್ಶನ್ ಅವರು ಕಾರಣಾಂತರದಿಂದ ಗೈರಾಗಿದ್ದರು. ಆದ್ರೆ ಅವರಿಬ್ಬರಿಗೂ ಅಪ್ಪು ಅವರ ಮೇಲಿರುವ ಅಭಿಮಾನ, ಪ್ರೀತಿ ಮಾತ್ರ ಅಪಾರ. ಆದರೂ ಇಬ್ಬರೂ ನಟರು ಪುನೀತ್ ಪರ್ವಕ್ಕೆ ಯಾಕೆ ಬಂದಿಲ್ಲ ಎಂದು ನೆಟ್ಟಿಗರು ಮತ್ತು ಇಬ್ಬರು ಸ್ಟಾರ್ಗಳ ಫ್ಯಾನ್ಸ್ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಟಾಕ್ ವಾರ್ ಶುರುವಾಗಿದೆ.
ಕನ್ನಡ ಕಂದ, ಕರುನಾಡಿನ ಮಗ ಪುನೀತ್ ರಾಜಕುಮಾರ್ ಶಾರೀರಿಕವಾಗಿ ನಮ್ಮ ಮಧ್ಯ ಇಲ್ಲ ಅಂದರೂ, ಕರ್ನಾಟಕದಲ್ಲಿ ಬಿಸುವ ಕನ್ನಡದ ಗಾಳಿಯಲ್ಲಿ ಸದಾ ಅಮರ. ಕನ್ನಡಾಭಿಮಾನಿಗಳ ನೆಚ್ಚಿನ ದೊರೆಯ ಬಗ್ಗೆ ದಿನವೂ ಮಾತನಾಡಲಿಲ್ಲ ಅಂದ್ರೆ ಆ ದಿನ ಸಂಪೂರ್ಣವಾಗುವುದಿಲ್ಲ. ಇವತ್ತು ನಿಮಗೊಂದು ಇಂಟ್ರಸ್ಟಿಂಗ್ ವಿಚಾರ ಹೇಳಲೇ ಬೇಕು.
ನಗುಮೊಗದ ದೊರೆಯ ಕೊನೆಯ ಸಿನಿಮಾ ಗಂಧದಗುಡಿಯ ʼಪುನೀತ್ ಪರ್ವʼ ಪ್ರೀ ರಿಲೀಸ್ ಇವೆಂಟ್ ಒಂದು ಹಬ್ಬದ ರೀತಿಯಲ್ಲಿ ಅದ್ಭುತವಾಗಿ ಜರುಗಿದೆ. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ನಟರು ಅಪ್ಪು ಅವರನ್ನು ಕೊಂಡಾಡಿದರು. ಪುನೀತ್ ಅವರ ಸ್ನೇಹಿತ ಖ್ಯಾತ ನಟ ರಾಣ ದಗ್ಗುಬಾಟಿ ಹಾಗೂ ಅಖಿಲ್ ಅಕ್ಕಿನೇನಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ನೆನಪುಗಳನ್ನು ಸ್ಮರಿಸಿದರು.
Puneetha Parva: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ 'ಪುನೀತ ಪರ್ವ' ಕಾರ್ಯಕ್ರಮದಲ್ಲಿ ಮಾತನಾಡಿರುವ ಅಪ್ಪು ನೆನೆದು ಕುಟುಂಬಸ್ಥರು ಸೇರಿ ನೆರೆದಿದ್ದ ಅಭಿಮಾನಿಗಳು ಭಾವುಕರಾಗಿದ್ದರು. ಈ ಕಾರ್ಯಕ್ರಮದಲ್ಲಿ ನಟ ದುನಿಯಾ ವಿಜಯ್ ಸಹ ಭಾಗಿಯಾಗಿದ್ದರು. ನಟ ದುನಿಯಾ ವಿಜಯ್, ಧೃವ ಸರ್ಜಾ,ರಾಜ್ ಬಿ ಶೆಟ್ಟಿ ಜೊತೆ ವೇದಿಕೆ ಏರಿದ್ರೂ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.