ಹರಿಯಾಣದ ಜಿಂದ್ನ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರಾದ ಡಾ.ಕೃಷ್ಣ ಮಿಧಾ ಅವರು ಅಧಿಕಾರಿಗಳ ಕೆಲಸದ ಶೈಲಿಯ ಬಗ್ಗೆ ವಿವಾದಾತ್ಮಕ ಟೀಕೆ ಮಾಡಿದ್ದಾರೆ, ಭಯೋತ್ಪಾದಕರು ಅಧಿಕಾರಿಗಳಿಗಿಂತ ಉತ್ತಮರು ಎಂದು ಹೇಳಿದ್ದಾರೆ.
ಹರಿಯಾಣದಲ್ಲಿ, ಸಿರ್ಸಾದ ಆರ್ಯ ಕನ್ಯಾ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಪರೀಕ್ಷಾ ಕೇಂದ್ರವನ್ನು ಮಂಡಳಿಯು ಸ್ಥಾಪಿಸಿದೆ. ಈ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ ಆಗಮಿಸಿದ್ದರು.
ರೈತರಿಗೆ ಒಳ್ಳೆಯ ಸುದ್ದಿ ಇದೆ. ರೈತರ ಅನುಕೂಲಕ್ಕಾಗಿ ಮತ್ತು ಆದಾಯವನ್ನು ಹೆಚ್ಚಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರದ (ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ) ಜೊತೆಗೆ ರಾಜ್ಯ ಸರ್ಕಾರವು ರೈತರಿಗಾಗಿ ಅನೇಕ ಯೋಜನೆಗಳನ್ನು ನಡೆಸುತ್ತಿದೆ. ಈಗ ರಾಜ್ಯ ಸರ್ಕಾರ ರೈತರಿಗೆ 7000 ರೂ.ಗಳ ಆರ್ಥಿಕ ನೆರವು ನೀಡುತ್ತಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ.
ಮಾಲ್ಟಾದ ಕಂಪನಿಯೊಂದು ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ (Sputnik V) ಯ 60 ಮಿಲಿಯನ್ ಡೋಸ್ಗಳನ್ನು ನೇರವಾಗಿ ಹರಿಯಾಣಕ್ಕೆ ಪೂರೈಸಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ರಾಜ್ಯ ಸರ್ಕಾರ ಇಂದು ತಿಳಿಸಿದೆ.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಾತನಾಡಿ, 'COVID ಲಾಕ್ಡೌನ್ ಅನ್ನು ಜೂನ್ 7 ರವರೆಗೆ ವಿಸ್ತರಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಬೆಸ-ಸಮ ಸೂತ್ರವನ್ನು ಅನುಸರಿಸಿಕೊಂಡು ಅಂಗಡಿಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ತೆರೆಯಲಿವೆ ಎಂದಿದ್ದಾರೆ.
Reservation In Private Sector - ರಾಜ್ಯದ ರಾಜ್ಯಪಾಲರಾಗಿರುವ ಸತ್ಯದೇವ್ ನಾರಾಯಣ್ ಆರ್ಯ (Governor Satyadev Narayan Arya) ಅವರು ಈ ಕುರಿತಾದ ಮಸೂದೆಗೆ ಅನುಮೋದನೆ ನೀಡಿದ ಬಗ್ಗೆ ಸ್ವತಃ ಸಿಎಂ ಮನೋಹರ್ ಲಾಲ್ ಖಟ್ಟರ್ (Manoharlal Khattar) ಮಾಹಿತಿ ನೀಡಿದ್ದಾರ. ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಿದೆ ಮತ್ತು ಈ ಕಾನೂನು ತಿಂಗಳಿಗೆ 50 ಸಾವಿರ ರೂಪಾಯಿಗಳವರೆಗೆ ಸಂಬಳ ಇರುವ ನೌಕರಿಗಳಿಗೆ (Jobs) ಅನ್ವಯಿಸಲಿದೆ.
ಹರಿಯಾಣದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರು ಶನಿವಾರ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿದರು ಮತ್ತು ಬಿಜೆಪಿ-ಜೆಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಲಿದೆ ಎಂದು ಹೇಳಿದರು.
ರೈತರ ಪ್ರತಿಭಟನೆ ಈಗ ದೆಹಲಿಯ ಹೊರಭಾಗದಲ್ಲಿ 21 ನೇ ದಿನಕ್ಕೆ ಕಾಲಿರಿಸಿದೆ,ಆದರೆ ಇದುವರೆಗೂ ರೈತರ ಬೇಡಿಕೆಗೆ ಕೇಂದ್ರ ಸರ್ಕಾರವು ಸ್ಪಂದಿಸದಿರುದಕ್ಕೆ ಬೇಸತ್ತು ಹರಿಯಾಣದ ಗುರುದ್ವಾರದ ಸಿಖ್ ಗುರು ಬಾಬಾ ರಾಮ್ ಸಿಂಗ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹರಿಯಾಣ ಸರ್ಕಾರ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣಕ್ಕೆ ಅಡ್ಡಿಯಾಗದಂತೆ ಕ್ರಮವಹಿಸುವ ನಿಟ್ಟಿನಲ್ಲಿ ಟ್ಯಾಬ್ಲೆಟ್ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಆರ್ಥಿಕವಾಗಿ ದುರ್ಬಲ ಕುಟುಂಬಗಳ ವಿದ್ಯಾರ್ಥಿಗಳು ಹರಿಯಾಣ ಸರ್ಕಾರ ಒದಗಿಸುವ ಉಚಿತ ಟ್ಯಾಬ್ಲೆಟ್ ಮೂಲಕ ತಮ್ಮ ಆನ್ಲೈನ್ ತರಗತಿಗಳನ್ನು ಮುಂದುವರಿಸಲು ಸಾಧ್ಯವಾಗುತ್ತದೆ.
ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ಪ್ರತಿಭಟಿಸುವ ರೈತರ ಮೇಲಿನ ದಬ್ಬಾಳಿಕೆಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶನಿವಾರ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು, ಅವರು ವರ್ತಿಸಿದ ರೀತಿಯಿಂದಾಗಿ ಈಗಿನ ಫೋನ್ ಕರೆಗಳಿಗೆ ಸಹ ಉತ್ತರಿಸುವುದಿಲ್ಲ ಎಂದು ಹೇಳಿದ್ದಾರೆ.
ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಮಧ್ಯೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನಡುವೆ ಟ್ವಿಟರ್ ವಾರ್ ಮುಂದುವರೆದಿದೆ.
ದೇಶದಲ್ಲಿ ಕೊರೊನಾವೈರಸ್ ವೇಗ ನಿಧಾನವಾಗಿದ್ದರೂ, ರಾಜಧಾನಿ ದೆಹಲಿಯಲ್ಲಿ ಈ ವೇಗವು ನಿಯಂತ್ರಿಸಲಾಗದಂತಾಗಿದೆ. ಶುಕ್ರವಾರ ದೆಹಲಿಯ ಅಂಕಿ ಅಂಶಗಳ ಭರಾಟೆ ಮತ್ತೆ ಕಂಡುಬಂದಿತು. ದೆಹಲಿಯಲ್ಲಿ ಶುಕ್ರವಾರ 6 ಸಾವಿರದ 608 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ದೆಹಲಿಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಈಗ 5 ಲಕ್ಷ 17 ಸಾವಿರ 238ಕ್ಕೆ ಏರಿದೆ.
ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ವಾಯುಮಾಲಿನ್ಯಕ್ಕೆ ಕಾರಣವಾದ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕೃಷಿ ಬೆಂಕಿಯ ಬಗ್ಗೆ ನಿಗಾ ಇಡಲು ಸುಪ್ರೀಂ ಕೋರ್ಟ್ ತನ್ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ನೇತೃತ್ವದ ಏಕ ಸದಸ್ಯರ ಸಮಿತಿಯನ್ನು ಶುಕ್ರವಾರ ರಚಿಸಿತು.ದಸರಾ ರಜೆಯ ನಂತರ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.