ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸೋದು ಗ್ಯಾರೆಂಟಿಯಾಗಿದೆ. ಜೀ ನ್ಯೂಸ್ ಮತ್ತು ಮ್ಯಾಟ್ರಿಕ್ಸ್ ಸಮೀಕ್ಷೆಯಲ್ಲಿ ಸರಳ ಬಹುಮತದ ಸೂಚನೆ ಸಿಕ್ಕಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಮೋದಿ ಕುರಿತು ಹೇಳಿದ ವಿಷಸರ್ಪ ಮಾತು ಕಾಂಗ್ರೆಸ್ಗೆ ದುಬಾರಿಯಾಗಿದೆ ಅಂತ ಸರ್ವೆ ಹೇಳಿದೆ. ಅಲ್ದೆ ಮುಂದಿನ ಸಿಎಂ ಕೂಡ ಬಸವರಾಜ ಬೊಮ್ಮಾಯಿ ಅನ್ನೋದಿಕೆ ಹೆಚ್ಚಿನ ಅಭಿಮತ ಸಿಕ್ಕಿದೆ.
Congress Manifesto 2023 : ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ನಾಯಕರಾದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ರಂದೀಪ್ ಸಿಂಗ್ ಸುರ್ಜೆವಾಲಾ ಉಪಸ್ಥಿತಿಯಲ್ಲಿ ಪ್ರಣಾಳಿಕೆ ಬಿಡುಗಡೆಯಾಗಿದೆ.
Karnataka Election 2023: ಬಿಜೆಪಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ, ಸಚಿವ ಡಾ.ಕೆ ಸುಧಾಕರ್, ಇದು ಜನರನ್ನು ಸಬಲೀಕರಣಗೊಳಿಸುವ ಪ್ರಣಾಳಿಕೆ. ಎಲ್ಲವೂ ಉಚಿತವೆಂದು ಖಜಾನೆ ಖಾಲಿ ಮಾಡಲು ಬಿಜೆಪಿ ತಯಾರಿಲ್ಲ ಎಂದರು.
Karnataka Election 2023: ಇಂದು ಮಂಡ್ಯ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ ಜಯರಾಮ ಅವರ ಪರ ಪ್ರಚಾರ ನಡೆಸಿ ಅವರು ಮಾತನಾಡಿದ ಸಿಎಂ ಬೊಮ್ಮಾಯಿ, ಮಂಡ್ಯದಲ್ಲಿ ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದೆ. ಹೊಸ ನಾಯಕತ್ವಕ್ಕೆ ಅವಕಾಶ ಕೊಡಿ ಎಂದು ಹೇಳಿದರು.
ಚುನಾವಣೆ ಯಾವಾಗಲೂ ಕೇವಲ ಒಂದೇ ವಿಷಯದ ಮೇಲೆ ಕೇಂದ್ರಿತವಾಗಿರುವುದಿಲ್ಲ, ಇದರಲ್ಲಿ ಹಲವು ಅಂಶಗಳು ಮೇಳೈಸಿರುತ್ತವೆ.ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳು ಕೂಡ ಇವುಗಳ ಲೆಕ್ಕಾಚಾರದ ಮೇಲೆಯೇ ಜನರನ್ನು ತಲುಪುವ ಬಗೆಯನ್ನು ಮತ್ತು ತನ್ನ ಚುನಾವಣಾ ಪ್ರಚಾರದ ವೈಖರಿಯನ್ನು ನಿರ್ಧರಿಸುತ್ತವೆ.
ಬಿಜೆಪಿ ಪಕ್ಷವು ಆರಂಭದಿಂದಲೂ ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಅನುಕೂಲಕರವಾಗಲಿದೆ ಎನ್ನುವ ಅಭಿಪ್ರಾಯವನ್ನು ಹೇಳುತ್ತಲೇ ಬಂದಿದೆ. ಇದೆ ಮಾತಿನಂತೆ ಅದು ಈ ಬಾರಿಯ ಚುನಾವಣಾ ಪ್ರಚಾರದಲ್ಲಿಯೂ ಡಬಲ್ ಇಂಜಿನ್ ಸರ್ಕಾರದಿಂದ ಪ್ರಗತಿ ತ್ವರಿತಗತಿಯಲ್ಲಿ ಸಾಗಲಿದೆ ಎನ್ನುವುದು ಸ್ಪಷ್ಟವಾದಂತಹ ವಾದವಾಗಿದೆ.
ವಿಜಯಪುರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅಬ್ಬರದ ಪ್ರಚಾರ ನಡೆಸಿದ್ರು.. ಮೊಹರೆ ಹಣಮಂತರಾಯ ವೃತ್ತದಿಂದ ರೋಡ್ ಶೋ ಮಾಡಿದ್ರು. ದೇವರಹಿಪ್ಪರಗಿ ಜೆಡಿಎಸ್ ಅಭ್ಯರ್ಥಿ ರಾಜುಗೌಡಾ ಪಾಟೀಲ ಪರ ಮತಬೇಟೆ ನಡೆಸಿದ್ರು.
ಗದಗ ಬೆಳ್ಳಟ್ಟಿಯಲ್ಲಿ ಕಾಂಗ್ರೆಸ್ ಸಮಾವೇಶ ಹಿನ್ನೆಲೆ ಹೆಲಿಕಾಪ್ಟರ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ.. ಈ ವೇಳೆ ಸಿದ್ದರಾಮಯ್ಯ ನೋಡೋದಕ್ಕೆ ಅಭಿಮಾನಿಗಳು ಓಡೋಡಿ ಹೆಲಿಪ್ಯಾಡ್ ಬಳಿ ಬಂದಿದ್ದಾರೆ.
ರಾಯಚೂರಿನ ಹಟ್ಟಿ ಪಟ್ಟಣದಲ್ಲಿ ಪ್ರಚಾರದ ವೇಳೆ ಅಭ್ಯರ್ಥಿಗಳ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಐದು ನೂರು ರೂಪಾಯಿ ಕೊಟ್ಟು ವೋಟ್ ಹಾಕಿಸಿಕೊಳ್ತೀರಾ.. ಆಮೇಲೆ ನಮ್ಮನ್ನು ಯಾರೂ ಕೇಳೋದಿಲ್ಲ.. ನಾವು ವೋಟ್ ಹಾಕಿದಕ್ಕೂ ಬೆಲೆ ಇಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ..
ಅಮಿತ್ ಶಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಕೋಲ್ಡ್ರಿಂಕ್ಸ್ ಕುಡಿದು ನಷ್ಟ ಅನುಭವಿಸಿದ್ದ ಯುವಕನಿಗೆ ಸಹಾಯ ಸಿಕ್ಕಿದೆ.. ಕೋಲ್ಡ್ರಿಂಕ್ಸ್ ವ್ಯಾಪಾರಿ ಸಮೀರ್ಗೆ ಕಾಂಗ್ರೆಸ್ನವರು 20 ಸಾವಿರ ರೂ. ಹಾಕಿದ್ದಾರೆ.. ಇನ್ನು ಸಂಸದ ಪ್ರತಾಪ್ ಸಿಂಹ 35 ಸಾವಿರ ರೂ. ನೀಡಿದ್ದಾರೆ..
ಸವದಿ ಬೋಗಸ್ ಸ್ವಾಭಿಮಾನಿ. ಅವರಿಗೆ ಬುದ್ಧಿ ಕಲಿಸಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಗಂಡಸಾಗಿದ್ರೆ ಶ್ರೀಮಂತ ಪಾಟೀಲ್, ಮಹೇಶ ಕುಮಟಳ್ಳಿ, ರಮೇಶ್ ತಂದ ಸರ್ಕಾರದಲ್ಲಿ ಮಂತ್ರಿ ಆಗೋಲ್ಲ ಅಂತ ಹೇಳ್ಬೇಕಿತ್ತು ಅಂತಾ ಕಿಡಿಕಾರಿದ್ದಾರೆ.
ಭಾರತೀಯ ಜನತಾ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಗೆ ‘’ಜನತಾ ಪ್ರಣಾಳಿಕೆ’’ ಎಂದು ಕರೆದಿರುವುದು ಅರ್ಥಪೂರ್ಣವಾಗಿದೆ.ಈ ಪ್ರಣಾಳಿಕೆಯನ್ನು ಜನತೆಯೇ ಅನುಷ್ಠಾನಕ್ಕೆ ತರಬೇಕೇ ಹೊರತು ಸರ್ಕಾರ ಅಲ್ಲ ಎನ್ನುವದೇ ಇದರ ಅರ್ಥವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.