Viral Video: ವಿದ್ಯೆ ಕಲಿಯಿರಿ ಅಂತಾ ಶಾಲೆಗೆ ಕಳುಹಿಸಿದ್ರೆ... ಈ ವಿದ್ಯಾರ್ಥಿಗಳು ಮಾರ್ಗಮಧ್ಯೆ ಮಾಡಿದ್ದು...! ವಿಡಿಯೋ ನೋಡಿ

Students Marriage Viral Video: ಶಿಕ್ಷಣ ಪಡೆಯಲಿ ಎಂದು ಮಕ್ಕಳನ್ನು ಶಾಲೆಗೆ ಕಳುಹಿಸಿದರೆ, ಆ ಮಕ್ಕಳು ದಾರಿ ತಪ್ಪುವ ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ನಿರ್ದಶನ ಎಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  

Written by - Bhavishya Shetty | Last Updated : Aug 25, 2024, 02:16 PM IST
    • ಬಸ್ ನಿಲ್ದಾಣದಲ್ಲಿ ಇಂಟರ್ ವಿದ್ಯಾರ್ಥಿಗಳು ಮದುವೆಯಾದ ಘಟನೆ
    • ಮಕ್ಕಳಿಗೆ ಒಳ್ಳೆಯ ವಿದ್ಯೆ ನೀಡಬೇಕೆಂಬುದು ಅವರ ಉದ್ದೇಶವಾಗಿರುತ್ತದೆ.
    • ವಿದ್ಯಾರ್ಥಿಗಳ ಮದುವೆಯ ವಿಡಿಯೋ ಭಾರೀ ವೈರಲ್‌ ಆಗಿದ್ದಲ್ಲದೆ, ಸಂಚಲನ ಸೃಷ್ಟಿಸಿದೆ
Viral Video: ವಿದ್ಯೆ ಕಲಿಯಿರಿ ಅಂತಾ ಶಾಲೆಗೆ ಕಳುಹಿಸಿದ್ರೆ... ಈ ವಿದ್ಯಾರ್ಥಿಗಳು ಮಾರ್ಗಮಧ್ಯೆ ಮಾಡಿದ್ದು...! ವಿಡಿಯೋ ನೋಡಿ title=
Viral Video

Inter students got married at Bus Stop: ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು ದೊಡ್ಡವರಾಗಿ ಒಳ್ಳೆಯ ಜೀವನ ನಡೆಸಲಿ ಎಂದು ಪೋಷಕರು ಭರವಸೆಯಿಟ್ಟು ಅವರನ್ನು ಶಾಲೆಗೆ ಕಳುಹಿಸುತ್ತಾರೆ. ಕಷ್ಟವಾದರೂ ಸರಿ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯೆ ನೀಡಬೇಕೆಂಬುದು ಅವರ ಉದ್ದೇಶವಾಗಿರುತ್ತದೆ. ಆದರೆ ಕೆಲ ಮಕ್ಕಳಿಗೆ ಪಾಲಕರ ಕಷ್ಟಗಳು ಅರಿವಿಗೇ ಬರುವುದಿಲ್ಲ ಅನಿಸುತ್ತದೆ.

ಇದನ್ನೂ ಓದಿ: ರಾತ್ರಿ ವೇಳೆ ತಪ್ಪಿಯೂ ಸಹ ಈ ದಿಕ್ಕಿಗೆ ಕಾಲು ಹಾಕಿ ಮಲಗಬೇಡಿ: ಮನೆ ಹಿರಿಯನ ಆಯಸ್ಸಿಗೆ ಬರುತ್ತೆ ಆಪತ್ತು; ಬಡತನ ಹೆಚ್ಚುತ್ತೆ!

ಶಿಕ್ಷಣ ಪಡೆಯಲಿ ಎಂದು ಮಕ್ಕಳನ್ನು ಶಾಲೆಗೆ ಕಳುಹಿಸಿದರೆ, ಆ ಮಕ್ಕಳು ದಾರಿ ತಪ್ಪುವ ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ನಿರ್ದಶನ ಎಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಸ್ ನಿಲ್ದಾಣದಲ್ಲಿ ಇಂಟರ್ ವಿದ್ಯಾರ್ಥಿಗಳು ಮದುವೆಯಾದ ಘಟನೆ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಚಿದಂಬರಂ ಸಮೀಪದ ಪೆರಂಬಾಟು ಪಂಚಾಯತ್‌ʼನ ವೆಂಗಾಯತಲಮೇಡು ಗ್ರಾಮದ ಇಂಟರ್ ದ್ವಿತೀಯ ವರ್ಷದ ವಿದ್ಯಾರ್ಥಿ ಮತ್ತು ಚಿದಂಬರಂ ಸಮೀಪದ ವಡಕರಿರಾಜಪುರಂ ಗ್ರಾಮದ ಪಾಲಿಟೆಕ್ನಿಕ್ ವಿದ್ಯಾರ್ಥಿ ಕಳೆದ ಕೆಲವು ದಿನಗಳಿಂದ ಪ್ರೀತಿಸುತ್ತಿದ್ದರಂತೆ. ಹೀಗಾಗಿ ಈ ಜೋಡಿ ಮದುವೆಯಾಗಲು ಬಯಸಿದೆ. ಇದಕ್ಕೆ ಗೆಳೆಯರೂ ಸಹಕರಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಆ ವಿದ್ಯಾರ್ಥಿ ತನ್ನ ಗೆಳತಿಯ ಕುತ್ತಿಗೆಗೆ ಅರಶಿನ ದಾರ ಕಟ್ಟಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಮುಗುಳ್ನಗುತ್ತಾ ನಾಚಿಕೆಯಿಂದ ಮುಖ ಮುಚ್ಚಿಕೊಂಡಿದ್ದಾರೆ.

 

ಇದನ್ನೂ ಓದಿ: ಸೊಳ್ಳೆ ಕಾಟದಿಂದ ನಿದ್ದೆನೇ ಬರ್ತಿಲ್ವಾ? ಚಿಂತೆ ಬೇಡ... ಈ ಎಲೆಯನ್ನು ಮಲಗುವಾಗ ದಿಂಬಿನಡಿ ಇಡಿ: ಒಂದೇ ಒಂದು ಸೊಳ್ಳೆ ಕೂಡ ನಿಮ್ಮ ಹತ್ತಿರ ಸುಳಿಯಲ್ಲ

ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಮದುವೆಯ ವಿಡಿಯೋ ಭಾರೀ ವೈರಲ್‌ ಆಗಿದ್ದಲ್ಲದೆ, ಸಂಚಲನ ಸೃಷ್ಟಿಸಿದೆ.  ಈ ವಿಡಿಯೋ ಕುರಿತು ಚಿದಂಬರಂ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಅದಲ್ಲದೆ, ಈ ಘಟನೆಗೆ ಸಾಮಾಜಿಕ ಕಾರ್ಯಕರ್ತರು ಸಹ ಅಸಮಾಧಾನ ಹೊರಹಾಕಿದ್ದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News