Viral News: ತಂಗಿ ಜೊತೆ ಹಾರ ಬದಲಾಯಿಸಿಕೊಂಡು ಅಕ್ಕನಿಗೆ ತಾಳಿ ಕಟ್ಟಿದ ಭೂಪ!

Viral Marriage News: ಮದುವೆ ಮಂಟಪದಲ್ಲಿ ವರನೊಬ್ಬ ಮದುಮಗಳ ಜೊತೆಗೆ ಹಾರ ಬದಲಾಯಿಸಿಕೊಂಡು ಬಳಿಕ ಆಕೆಯ ಸಹೋದರಿಗೆ ತಾಳಿ ಕಟ್ಟಿರುವ ವಿಚಿತ್ರ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ.

Written by - Puttaraj K Alur | Last Updated : May 9, 2023, 04:31 PM IST
  • ತಂಗಿ ಜೊತೆ ಹಾರ ಬದಲಾಯಿಸಿಕೊಂಡು ಆಕೆಯ ಅಕ್ಕನಿಗೆ ತಾಳಿ ಕಟ್ಟಿದ ವರ
  • ಬಿಹಾರದ ಸರನ್ ಜಿಲ್ಲೆಯಲ್ಲಿ ವಿಚಿತ್ರ ಮದುವೆ ಪ್ರಸಂಗ ನಡೆದಿದೆ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ಮದುವೆ ಸುದ್ದಿ
Viral News: ತಂಗಿ ಜೊತೆ ಹಾರ ಬದಲಾಯಿಸಿಕೊಂಡು ಅಕ್ಕನಿಗೆ ತಾಳಿ ಕಟ್ಟಿದ ಭೂಪ! title=
ತಂಗಿ ಬದಲು ಅಕ್ಕನಿಗೆ ತಾಳಿ ಕಟ್ಟಿದ ವರ!

ಪಾಟ್ನಾ: ಬಿಹಾರದ ಸರನ್ ಜಿಲ್ಲೆಯಲ್ಲಿ ವಿಚಿತ್ರ ಮದುವೆ ಪ್ರಸಂಗ ನಡೆದಿದೆ. ತಂಗಿಯ ಜೊತೆಗೆ ಹಾರ ಬದಲಾಯಿಸಿಕೊಂಡಿದ್ದ ವರನೊಬ್ಬ ಆಕೆಯ ಅಕ್ಕನಿಗೆ ತಾಳಿ ಕಟ್ಟಿದ್ದಾನೆ. ಛಪ್ರಾ ನಿವಾಸಿ ರಾಜೇಶ್ ಕುಮಾರ್‍ಗೆ ಆತನ ಗೆಳತಿ ಪುತುಲ್ ಸಹೋದರಿ ರಿಂಕು ಕುಮಾರಿ ಎಂಬಾಕೆಯ ಜೊತೆ ಮದುವೆ ನಿಶ್ಚಯವಾಗಿತ್ತು. ಸಂಪ್ರದಾಯದಂತೆ ಮದುವೆಗೆ ಎಲ್ಲಾ ರೀತಿಯ ಸಕಲ-ಸಿದ್ಧತೆಗಳು ನಡೆಯುತ್ತಿದ್ದವು. ಇನ್ನೇನು ಹಾರ ಬದಲಾಯಿಸಿಕೊಂಡು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಗೆಳತಿ ಪುತುಲ್‍ನಿಂದ ಕರೆ ಬಂದಿದೆ.

ಒಂದು ವೇಳೆ ನೀನು ರಿಂಕುಳನ್ನು ಮದುವೆಯಾದರೆ ನಾನು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪುತುಲ್ ಬೆದರಿಕೆ ಹಾಕಿದ್ದಾಳೆ. ಇದರಿಂದ ಆಘಾತಗೊಂಡ ವರ ಕೂಡಲೇ ಮದುವೆ ನಿಲ್ಲಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ವರನ ಈ ನಡೆ ಕಂಡು ಮದುವೆಗೆ ಆಗಮಿಸಿದವರಿಗೆ ಶಾಕ್ ಆಗಿದೆ. ಬಳಿಕ ವರ ರಾಜೇಶ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾನೆ.

ಇದನ್ನೂ ಓದಿ: ಮೋಚಾ ಚಂಡಮಾರುತ ಹಿನ್ನೆಲೆ : ಹಲವು ರಾಜ್ಯಗಳಿಗೆ ಮಳೆಮುನ್ಸೂಚನೆ ; ಕೆಲವೆಡೆ ಯಲ್ಲೋ ಅಲರ್ಟ್

ಛಾಪ್ರಾದಲ್ಲಿ ನಾನು ಪುತುಲ್ ಆಗಾಗ ಭೇಟಿಯಾಗುತ್ತಿದ್ದೇವು. ನಾನು ಆಕೆಯನ್ನು ಮನಸಾರೆ ಪ್ರೀತಿಸುತ್ತಿದ್ದೆ ಎಂದು ಹೇಳಿದ್ದಾನೆ. ರಿಂಕು ಜೊತೆಗೆ ಮದುವೆ ಫಿಕ್ಸ್ ಆಗುತ್ತಿದ್ದಂತೆಯೇ ಪುತುಲ್‍ಗೆ ಬೇಸರವಾಗಿದೆ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನನಗೆ ಬೆದರಿಕೆ ಹಾಕಿದ್ದಾಳೆ ಅಂತಾ ರಾಜೇಶ್ ತಿಳಿಸಿದ್ದಾನೆ. ರಾಜೇಶ್ ಈ ರೀತಿ ಹೇಳುತ್ತಿದ್ದಂತೆಯೇ ಎರಡೂ ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದಿದೆ. ಜಗಳ ಜೋರಾಗುತ್ತಿದ್ದಂತೆಯೇ ಮದುವೆಗೆ ಆಗಮಿಸಿದ್ದ ಸಂಬಂಧಿಕರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.  

ಎರಡೂ ಕುಟುಂಬಸ್ಥರು ಕುಳಿತುಕೊಂಡು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ. ರಿಂಕು ಜೊತೆ ಮದುವೆ ಫಿಕ್ಸ್ ಆಗುವ ಮುನ್ನವೇ ಆಕೆಯ ಸಹೋದರಿ ಪುತುಲ್ ಜೊತೆಗೆ ನನಗೆ ಪರಿಚಯವಿತ್ತು ಎಂದು ರಾಜೇಶ್ ಹೇಳಿದ್ದಾನೆ. ಮಾತುಕತೆ ಬಳಿಕ ರಿಂಕು ಬದಲು ಪುತುಲ್‍ಗೆ ರಾಜೇಶ್ ತಾಳಿ ಕಟ್ಟಿದ್ದಾನೆ.

ಇದನ್ನೂ ಓದಿ:  ದೀದಿ ವಿರುದ್ಧ ಕೇಸ್ ದಾಖಲಿಸಲು ಮುಂದಾದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News