ಟ್ರಾಫಿಕ್ ಪೊಲೀಸರಿಗೆ ಆಕ್ಸಿಡೆಂಟ್ ಕೇಸ್ ಗಳು ತುಂಬಾನೇ ತಲೆಕೆಡಿಸ್ತಾ ಇವೆ. ದಿನೇ ದಿನೇ ಅಪಘಾತಗಳು ಹೆಚ್ಚಾಗ್ತಾ ಇದ್ದು ,ಸಾವು ನೋವು ಕೂಡ ಜಾಸ್ತಿ ಆಗ್ತಾ ಇದೆ. ಇದರಿಂದ ನಾಲ್ಕು ಇಲಾಖೆಗಳು ಸೇರಿ ಸರ್ವೆ ಮಾಡಿದ್ದು, ನಗರದಲ್ಲಿ 59 ಬ್ಲಾಕ್ ಸ್ಫಾಟ್ ಗಳನ್ನು ಗುರ್ತಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ನಗರದಲ್ಲಿ ಅಪಘಾತ ಸಂಖ್ಯೆ ಹೆಚ್ಚಾಗ್ತಾ ಇದೆ. ಇದರಿಂದ ತಲೆಕೆಡಿಸಿಕೊಂಡ ಸಂಚಾರಿ ಪೊಲೀಸರು ಅಪಘಾತಗಳು ಯಾಕೆ ಆಗ್ತಾ ಇವೆ ಅನ್ನೋ ಸರ್ವೆ ಮಾಡಲು ಮುಂದಾಗಿದ್ದಾರೆ. ಅದು ಕೂಡ ಸಾರಿಗೆ ಇಲಾಖೆ, PWD ಹಾಗೂ ಬಿಬಿಎಂಪಿ ಜೊತೆ ಸೇರಿ ನಗರದ ಅಪಘಾತಗಳು ಆದ ಸ್ಥಳದಲ್ಲಿ ಸರ್ವೆ ಮಾಡಿದ್ದಾರೆ. ಈ ವೇಳೆ ಒಟ್ಟು 59 ಬ್ಲಾಕ್ ಸ್ಪಾಟ್ ಗಳು ಅಂತಾ ಗುರ್ತಿಸಿದ್ದು ಈ ಬ್ಲಾಕ್ ಸ್ಪಾಟ್ ಗಳಲ್ಲೇ ಮೂರು ತಿಂಗಳಲ್ಲಿ 369 ಅಪಘಾತಗಳು ಆಗಿದೆ. ಇದ್ರಲ್ಲಿ
ಉದ್ಯಮಿ ಗಜೇಂದ್ರ ಎಂಬುವವರು ರಾಮಚಂದ್ರಪುರ ಪಾರ್ಕ್ ಬಳಿ ಇದ್ದಾಗ ಮಾರಕಾಸ್ತ್ರ ಜೊತೆಗೆ ಬಂದಿದ್ದ ದುಷ್ಕರ್ಮಿಗಳು ಗಜೇಂದ್ರ ಕೊಲೆಗೆ ಯತ್ನಿಸಿದ್ದರಂತೆ. ಸೈಕಲ್ ರವಿ ಮತ್ತು ಬೇಕರಿ ರಘು ಮುಂದೆ ಕಾರಿನಲ್ಲಿದ್ದರು ಅವರೇ ಕೊಲೆ ಮಾಡಲು ಹೇಳಿದ್ದಾರೆಂದು ಉದ್ಯಮಿ ಗಜೇಂದ್ರ ದೂರು ನೀಡಿದ್ದಾರೆ.
ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಘಟನೆ ನಡೆದಿದ್ದು, ವಿದೇಶಿ ಪ್ರಜೆ ಅಕ್ರಂ ಅಹಮದ್ ಎಂಬಾತನನ್ನು ಬಂಧಿಸಲಾಗಿದೆ. ಈತ ಕಳೆದ ಆಗಸ್ಟ್ 18ರಂದು ಬ್ಯುಸಿನೆಸ್ ವಿಸಾದಡಿಯಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ ಈ ಕೃತ್ಯ ಎಸಗಿದ್ದಾನೆ.
Auto Theft : ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ನಮ್ಮ ಬಳಿಯಿರುವ ಮೊಬೈಲ್, ಪರ್ಸ್ ಇತ್ಯಾದಿ ವಸ್ತುಗಳು ಮಾಯವಾಗುತ್ತದೆ. ಅದರಂತೆ ಇದೀಗ ಕ್ವಾಟರ್ ಎಣ್ಣೆಗಾಗಿ ತನ್ನ ಹೊಸ ಆಟೋ ವನ್ನು ಕಳೆದುಕೊಂಡ ಘಟನೆ ದಾಸರಹಳ್ಳಿಯ 8ನೇ ಮೈಲಿ ಅಟೋಸ್ಟಾಂಡ್ನಲ್ಲಿ ನಡೆದಿದೆ.
ಕೊಚ್ಚಿಯ ಲುಲು ಮಾಲ್ನಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಇನ್ಫೋಪಾರ್ಕ್ ಮೂಲದ ಪ್ರಮುಖ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯು 'ಬುರ್ಖಾ' ಧರಿಸಿ ಮಹಿಳೆಯರ ವಾಶ್ರೂಮ್ಗೆ ಪ್ರವೇಶಿಸಿ ತನ್ನ ಮೊಬೈಲ್ ಅನ್ನು ಅಲ್ಲಿ ಇರಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
Siddapur Mahesh murder case : ಅಂದು ಜೈಲಿನಿಂದ ಹುಡುಗರ ಜೊತೆ ರಿಲೀಸ್ ಆಗಿದ್ದವನು ಜೈಲಿನ ಬಳಿಯೇ ಹತ್ಯೆ ಆಗಿದ್ದ. ಇಂದು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು ಕೋರ್ಟ್ ಮುಂದೆ ಸೆರೆಂಡರ್ ಆಗಿದ್ದಾರೆ.
ಕುಡಿದ ಮತ್ತಿನಲ್ಲಿ ಯುವತಿಯರ ಮೇಲೆ ಬೈಕ್ ಚಲಾಯಿಸಿದ ಯುವಕನನ್ನು ಹಿಡಿದು ಸಾರ್ವಜನಿಕರು ಹಿಗ್ಗಾಮುಗ್ಗ ಗೂಸಾ ನೀಡಿದ ಘಟನೆ ತುಮಕೂರು ಜಿಲ್ಲೆ ಶಿರಾ ನಗರದ ರಂಗನಾಥ ಕಾಲೇಜು ಬಳಿ ನಡೆದಿದೆ.
ಕೆಂಗೇರಿ ಸಮೀಪದ ಮಾರುತಿ ನಗರ ಮುಖ್ಯ ರಸ್ತೆಯಲ್ಲಿ ಮೃತ ಯುವತಿ ರಕ್ಷಾಳ ಜೊತೆಗೆ ಚಂದನ್ ಪಲ್ಸರ್ ಬೈಕ್ನಲ್ಲಿ KLE ಕಾಲೇಜು ಕಡೆ ವೇಗವಾಗಿ ಹೋಗುತ್ತಿದ್ದನಂತೆ. ಈ ವೇಳೆ ಅದೇ ರಸ್ತೆಯಲ್ಲಿ ಬರ್ತಿದ್ದ ನರಸಪ್ಪನವರ ಬೈಕ್ಗೆ ರಭಸವಾಗಿ ಡಿಕ್ಕಿ ಹೊಡೆಸಿದ್ದಾನೆ.
Cashback Fraud: ಆನ್ಲೈನ್ ಪೇಮೆಂಟ್ ಆ್ಯಪ್ನಲ್ಲಿ ನಿಮಗೆ ಕ್ಯಾಶ್ ಬ್ಯಾಕ್ ಬರುತ್ತದೆ ಎಂದು ಹೇಳಿ ಬೆಂಗಳೂರಿನ ಹೋಟೆಲ್ ಮಾಲೀಕ ಪ್ಯಾರುಲ್ ಷಾಗೆ ಇಬ್ಬರು ವ್ಯಕ್ತಿಗಳು ವಂಚನೆ ಎಸಗಿದ್ದಾರೆ.
ಅಪ್ರಾಪ್ತ ಬಾಲಕಿಯನ್ನ ಪ್ರೀತಿಸಿ ಮದುವೆಯಾಗಿದ್ದ ಶಶಿಧರ್ ಮೇಲೆ ಬಾಲಕಿಯ ಪೋಷಕರು ಪೋಕ್ಸೋ ಕೇಸ್ ದಾಖಲಿಸಿದ್ದರು. ಪ್ರಕರಣ ಹಿನ್ನೆಲೆ ಬಸವನಬಾಗೇವಾಡಿ ಪೊಲೀಸ್ರು ಶಶಿಧರ್ ಬಂಧನಕ್ಕೆ ಮುಂದಾಗಿದ್ರು.
Chikkaballapur Suicide Drama: ಕೆರೆಯ ದಡದಲ್ಲಿ ಇಬ್ಬರ ಚಪ್ಪಲಿ, ಬ್ಯಾಗ್, ಬಟ್ಟೆ, ಮೊಬೈಲ್ ಫೋನ್ ಇಟ್ಟು ಇಬ್ಬರು ಆತ್ಮಹತ್ಯೆಯ ಡ್ರಾಮಾ ಮಾಡಿದ್ದಾರೆ. ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ತುಂಬಿದ ಕೆರೆಯಲ್ಲಿ ದಿನವಿಡೀ ಶವ ಶೋಧ ನಡೆಸಿ ಕೊನೆಗೆ ಬರಿಗೈಲಿ ವಾಪಸಾಗಿದ್ದರು.
Honey Trap Case : ಅವರು ಖತರ್ನಾಕ್ ದಂಪತಿ..ವಯೋವೃದ್ಧರನ್ನೆ ಟಾರ್ಗೆಟ್ ಮಾಡ್ತಿದ್ರು. ಮಹಿಳೆ ಇಟ್ಕೊಂಡು ಬಲೆ ಹಣೆದು, ಸನಿಹಕೆ ಬಾ ಅಂತಾ ಮಂಚಕ್ಕೆ ಕರಿತಿದ್ಳು..ಮಾಯಾಂಗನೆ ಮಾತು ನಂಬಿ ಖುಲ್ಲಂ ಖುಲ್ಲಂ ಆಡೋಕೆ ಹೋದ್ರೆ ಕಥೆ ಮುಗೀತು..ಇಂತಹ ಕೃತ್ಯ ಮಾಡ್ತಿದ್ದ ಟೀಂ ಈಗ ಬಲೆಗೆ ಪೊಲೀಸರ ಬಲೆಗೆ ಬಿದ್ದಿದೆ.
Online Game Fraud: ಆನ್ಲೈನ್ ಆ್ಯಪ್ ಡೀಲರ್ ಮೈನುದ್ದೀನ್, ಚನ್ನಬಸವ, ರುದ್ರಗೌಡ ಮತ್ತು ಹನುಮಗೌಡ ತನಗೆ ವಂಚನೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.
ಕುಡಿದು ಪಬ್ ನಿಂದ ಹೊರಬಂದ ನಾಲ್ಕೈದು ಯುವಕರ ಗುಂಪು ರಸ್ತೆಯಲ್ಲಿ ಹೊಡೆದಾಡಿಕೊಂಡು ಬಿದ್ದು ಒದ್ದಾಡಿದ್ದಾರೆ. ಯುವಕರ ಜಗಳ ಬಿಡಿಸಲು ಪಬ್ ಬೌನ್ಸರ್ಗಳು, ಸಾರ್ವಜನಿಕರು ಹರಸಾಹಸಪಟ್ಟಿದ್ದಾರೆ.
ಅಗ್ನಿಶಾಮಕದಳದ 3 ತಂಡಗಳಿಂದ ಮತ್ತೊಂದು ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಭಾನುವಾರ ರಾತ್ರಿ 9 ಗಂಟೆವರೆಗೆ ಶೋಧಕಾರ್ಯ ನಡೆಸಲಾಗಿತ್ತು. ರಾತ್ರಿಯಾಗಿದ್ದರಿಂದ ಶೋಧಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.
‘ಕರಾಳ ಶನಿವಾರ.. ಇಂದು(ಜುಲೈ 13) ಬೆಳಗಿನ ಜಾವ ಚಿತ್ರದುರ್ಗ ಬಳಿ ಸಂಭವಿಸಿದ್ದ ಅಪಘಾತದಲ್ಲಿ ಸಾವಿಗೀಡಾದ ಐವರು ಸೇರಿದಂತೆ 37 ಮಂದಿ ಸಾವಿಗೀಡಾಗಿದ್ದಾರೆ. ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತ್ತು’ ಎಂದು ಅವರು ಮಾಹಿತಿ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.