ಕುಮಾರಸ್ವಾಮಿಗೆ ಅಭಿನಂದಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್

ಹೈದರಾಬಾದ್ ನಲ್ಲಿಂದು ಕಲೆಕ್ಟರ್ಸ್ ಕಾನ್ಫರೆನ್ಸ್ ಇರುವ ಕಾರಣ ಮಂಗಳವಾರವೇ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಶುಭ ಕೋರಿದ ಕೆಸಿಆರ್.

Last Updated : May 23, 2018, 12:12 PM IST
ಕುಮಾರಸ್ವಾಮಿಗೆ ಅಭಿನಂದಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ title=
Pic: ANI

ಬೆಂಗಳೂರು: ಹೈದರಾಬಾದ್ ನಲ್ಲಿಂದು ಕಲೆಕ್ಟರ್ಸ್ ಕಾನ್ಫರೆನ್ಸ್ ಇರುವ ಕಾರಣ ಮಂಗಳವಾರವೇ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಶುಭಕೋರಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಸಿಆರ್, ನಾನು ತುಂಬಾ ಸಂತೋಷವಾಗಿದ್ದೇನೆ. ಕರ್ನಾಟಕದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರ ರಚಿಸುತ್ತಿರುವುದು ಒಳ್ಳೆಯ ಸಂಗತಿ. ಅವರಿಗೆ ಒಳ್ಳೆಯದಾಗಲಿ! ದೇವರು ಶ್ರೀ ಕುಮಾರಸ್ವಾಮಿ ಅವರಿಗೆ ಆಶೀರ್ವದಿಸಲಿ, ನಮ್ಮ ಮಾಜಿ ಪ್ರಧಾನಿ (ಎಚ್.ಡಿ. ದೇವೇಗೌಡ) ಅವರ ಆಶೀರ್ವಾದದಿಂದ ಅವರು ಯಶಸ್ವಿಯಾಗುತ್ತಾರೆ. ಇದು ಒಂದು ಆರಂಭ. ಪ್ರಾದೇಶಿಕ ಪಕ್ಷಗಳ ಭವಿಷ್ಯ ಕಾಣುತ್ತಿದೆ ಎಂದು ಚಂದ್ರಶೇಖರ್ ರಾವ್ ತಿಳಿಸಿದರು.

Trending News