PM Kisan ಯೋಜನೆಗೆ ಸರ್ಕಾರ ಫಲಾನುಭವಿಗಳನ್ನು ಹೇಗೆ ಗುರುತಿಸುತ್ತದೆ : ಇಲ್ಲಿದೆ? ನೋಡಿ

2 ಹೆಕ್ಟೇರ್‌ಗಳವರೆಗೆ ಸ್ವಂತ ಭೂಹಿಡುವಳಿ/ಮಾಲೀಕತ್ವ ಹೊಂದಿರುವ ಸಣ್ಣ ಮತ್ತು ಕನಿಷ್ಠ ರೈತ ಕುಟುಂಬಗಳಿಗೆ ಈ ಯೋಜನೆಯ ಲಾಭ ನೀಡಲಾಗುತ್ತದೆ.

Written by - Channabasava A Kashinakunti | Last Updated : Feb 3, 2022, 01:55 PM IST
  • PM Kisan ದೇಶದ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ವಾರ್ಷಿಕವಾಗಿ 6,000 ರೂ. ಆರ್ಥಿಕ ನೆರವು
  • ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಯಾರು ಅರ್ಹರು?
  • ಅರ್ಹ ರೈತರಿಗೆ ವರ್ಷಕ್ಕೆ 6,000 ರೂಪಾಯಿಗಳ ಆರ್ಥಿಕ ಲಾಭ
PM Kisan ಯೋಜನೆಗೆ ಸರ್ಕಾರ ಫಲಾನುಭವಿಗಳನ್ನು ಹೇಗೆ ಗುರುತಿಸುತ್ತದೆ : ಇಲ್ಲಿದೆ? ನೋಡಿ title=

ನವದೆಹಲಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ದೇಶದ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ವಾರ್ಷಿಕವಾಗಿ 6,000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತದೆ. ಡಿಜಿಟಲ್ ಇಂಡಿಯಾ ಉಪಕ್ರಮದೊಂದಿಗೆ ಸರ್ಕಾರವು 2,000 ರೂ. ಹಣವನ್ನ ಅರ್ಹ ರೈತರ ಖಾತೆಗೆ ವರ್ಗಾಯಿಸುತ್ತದೆ. ಅರ್ಹ ರೈತರಿಗೆ ವರ್ಷಕ್ಕೆ 6,000 ರೂಪಾಯಿಗಳ ಆರ್ಥಿಕ ಲಾಭವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ತಲಾ 2,000 ರೂಪಾಯಿಯನ್ನು 3 ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ, ಅಂದರೆ. ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಬಿಡುಗಡೆ ಮಾಡಲಾಗುತ್ತಿದೆ. ಈ ಯೋಜನೆಯನ್ನು ರೈತರ ಆಧಾರ್ ವಿವರಗಳೊಂದಿಗೆ ಲಿಂಕ್ ಮಾಡಲಾಗಿದೆ. ರೈತರು ಮತ್ತು ಕುಟುಂಬದ ಎಲ್ಲಾ ಸದಸ್ಯರ ವಿವರಗಳನ್ನು ಒಳಗೊಂಡಿದೆ, ಅವರ ಹೆಸರುಗಳು ಭೂ ದಾಖಲೆಗಳಲ್ಲಿ ಕಂಡುಬರುತ್ತವೆ.

2 ಹೆಕ್ಟೇರ್‌ಗಳವರೆಗೆ ಸ್ವಂತ ಭೂಹಿಡುವಳಿ/ಮಾಲೀಕತ್ವ ಹೊಂದಿರುವ ಸಣ್ಣ ಮತ್ತು ಕನಿಷ್ಠ ರೈತ ಕುಟುಂಬಗಳಿಗೆ(Farmer Families) ಈ ಯೋಜನೆಯ ಲಾಭ ನೀಡಲಾಗುತ್ತದೆ. ಇಲ್ಲಿ ಯೋಜನೆಯ ಕುಟುಂಬದ ಪತಿ, ಪತ್ನಿ ಮತ್ತು ಮಕ್ಕಳು ಪಡೆಯಲಿದ್ದಾರೆ.

ಇದನ್ನೂ ಓದಿ : ಆಯುರ್ವೇದ ಉತ್ಪನ್ನಗಳ ನಂತರ ಇದೀಗ Credit Card ಬಿಡುಗಡೆ ಮಾಡಿದ ಬಾಬಾ ರಾಮ್ ದೇವ್

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಯಾರು ಅರ್ಹರು?

ಪತಿ ಮತ್ತು ಪತ್ನಿ ಇಬ್ಬರೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ(PM Kisan Kisan Yojana)ಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಈ ಯೋಜನೆಯಿಂದ ಪ್ರಯೋಜನ ಪಡೆಯುವ ಪತಿ ಮತ್ತು ಪತ್ನಿ ಇದ್ದರೆ, ಸರ್ಕಾರವು ಅವರನ್ನು 'ನಕಲಿ' ಎಂದು ಪರಿಗಣಿಸುತ್ತದೆ. ಇದರ ಹೊರತಾಗಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ಪಡೆದ ರೈತರು ಅನರ್ಹರೆಂದು ಪರಿಗಣಿಸಿ, ಇತರ ಅವರಿಗೆ ದಂಡ ವಿದಾಸಲಾಗುತ್ತದೆ.

ರೈತರ ಕುಟುಂಬದಲ್ಲಿ ಯಾರಾದರೂ ತೆರಿಗೆ ಪಾವತಿಸುತ್ತಿದ್ದರೆ, ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಅದೇ ರೀತಿ, ಒಬ್ಬ ರೈತನು ತನ್ನ ಕೃಷಿ ಭೂಮಿಯನ್ನು ಬೇಸಾಯಕ್ಕೆ ಬಳಸದೆ ಬೇರೆ ಕೆಲಸಕ್ಕೆ ಬಳಸುತ್ತಿದ್ದರೆ ಅಥವಾ ಇತರರ ಹೊಲಗಳಲ್ಲಿ ಕೃಷಿ ಕೆಲಸ ಮಾಡುತ್ತಿದ್ದರೆ ಮತ್ತು ಅವರು ಯೋಜನೆಯ ಲಾಭವನ್ನು ಅನುಭವಿಸಲು ಅರ್ಹರಾಗಿರುವುದಿಲ್ಲ.

ಮತ್ತೊಂದೆಡೆ, ಒಬ್ಬ ರೈತ ಕೃಷಿ ಮಾಡುತ್ತಿದ್ದರೂ, ಹೊಲವು ಅವನ ಹೆಸರಿನಲ್ಲಿಲ್ಲ ಆದರೆ ಅವನ ತಂದೆ ಅಥವಾ ತಾತನ ಹೆಸರಿನಲ್ಲಿದ್ದರೆ, ಅವರಿಗೆ ಮತ್ತೆ ಈ ಯೋಜನೆಯ ಲಾಭ ಸಿಗುವುದಿಲ್ಲ.

ಇನ್ನೊಂದು ಪ್ರಕರಣದಲ್ಲಿ, ಯಾರಾದರೂ ಕೃಷಿ ಭೂಮಿ(Agricultural Land)ಯ ಮಾಲೀಕರಾಗಿದ್ದರೆ, ಅವರು ಸರ್ಕಾರಿ ನೌಕರರಾಗಿದ್ದರೆ ಅಥವಾ ನಿವೃತ್ತ, ಹಾಲಿ ಅಥವಾ ಮಾಜಿ ಸಂಸದ, ಶಾಸಕ, ಸಚಿವರಾಗಿದ್ದರೆ ಅಂತಹವರೂ ರೈತ ಯೋಜನೆಯ ಪ್ರಯೋಜನಕ್ಕೆ ಅನರ್ಹರಾಗಿರುತ್ತಾರೆ.

ವೃತ್ತಿಪರ ನೋಂದಾಯಿತ ವೈದ್ಯರು, ಇಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಅಥವಾ ಅವರ ಕುಟುಂಬದ ಸದಸ್ಯರು ಕೂಡ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನಗಳನ್ನು ಆನಂದಿಸಲು ಅನರ್ಹರಾಗಿದ್ದಾರೆ.

ಭಾರತದಲ್ಲಿ ಕುಟುಂಬದ ಪರಿಕಲ್ಪನೆ ಎಂದರೆ ಗಂಡ ಮತ್ತು ಹೆಂಡತಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳು. ಮತ್ತು ಪಿಎಂ ಕಿಸಾನ್(PM Kisan) ನಿಯಮದ ಪ್ರಕಾರ, ಕುಟುಂಬದ ಒಬ್ಬ ಸದಸ್ಯ ಮಾತ್ರ ಆದರ್ಶಪ್ರಾಯವಾಗಿ ಅದರ ಪ್ರಯೋಜನವನ್ನು ಪಡೆಯಬೇಕು ಮತ್ತು ಗಂಡ ಮತ್ತು ಹೆಂಡತಿ ಇಬ್ಬರೂ ಅಲ್ಲ.

ಇದನ್ನೂ ಓದಿ : ಆಸ್ತಿಯ ಮಾರಾಟ ಮತ್ತು ಖರೀದಿಯ TDS ನಿಯಮದಲ್ಲಿನ ಬದಲಾವಣೆಗಳು ಇವು

ಫಲಾನುಭವಿಗಳನ್ನು ಹೇಗೆ ಆಯ್ಕೆ, ಹೇಗೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ :

ರಾಜ್ಯ ಸರ್ಕಾರಗಳು ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಬೆಂಬಲಕ್ಕೆ ಅರ್ಹರಾಗಿರುವ ರೈತ ಕುಟುಂಬಗಳನ್ನು ಗುರುತಿಸುತ್ತದೆ. ಹಣ(Money)ವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಯೋಜನೆಗೆ ವಿವಿಧ ಹೊರಗಿಡುವ ವರ್ಗಗಳಿವೆ.

ಯೋಜನೆಯ ಅಡಿಯಲ್ಲಿ ಪ್ರಯೋಜನಕ್ಕಾಗಿ ಅರ್ಹ ರೈತರ ಕುಟುಂಬಗಳನ್ನು ಗುರುತಿಸುವ ಜವಾಬ್ದಾರಿಯು ಸಂಪೂರ್ಣವಾಗಿ ರಾಜ್ಯ/UT ಸರ್ಕಾರಗಳದ್ದಾಗಿದೆ. ಯೋಜನೆಯ ಪ್ರಯೋಜನಗಳ ವರ್ಗಾವಣೆಗಾಗಿ ಉದ್ದೇಶಿತ ಫಲಾನುಭವಿಗಳನ್ನು ಗುರುತಿಸಲು ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಭೂ-ಮಾಲೀಕತ್ವ ವ್ಯವಸ್ಥೆ/ಭೂಮಿಯ ದಾಖಲೆಯನ್ನು ಬಳಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News