ಮಹಿಳೆಯ ಕತ್ತು, ದೇಹದ ಅಂಗಾಂಗ ಸೀಳಿ ಭೀಕರ ಕೊಲೆ..!

32 ವರ್ಷದ ಪುಷ್ಪ ಬರ್ಬರವಾಗಿ ಕೊಲೆಯಾದ ಮಹಿಳೆಯಾಗಿದ್ದು ಹುಲಿಯೂರುದುರ್ಗದಲ್ಲಿ ವಾಸವಾಗಿದ್ದ ಸುಗ್ಗನಹಳ್ಳಿ ಮೂಲದ  ಶಿವರಾಮ್ ಕೊಲೆ ಮಾಡಿದ ಪಾಪಿ ಪತಿ.

Written by - Yashaswini V | Last Updated : May 28, 2024, 06:06 PM IST
  • ಹುಲಿಯೂರುದುರ್ಗ ಗ್ರಾಮದಲ್ಲಿ ಪತ್ನಿ ಹಾಗೂ 8 ವರ್ಷದ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಶಿವರಾಮ್, ಸಾಮಿಲ್ ವೊಂದರಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದನು.
  • ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಕ್ಷುಲ್ಲಕ ಕಾರಣಕ್ಕೆ ಪದೇ ಪದೇ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು.
  • ಅಕ್ಕಪಕ್ಕದವರು, ಸಂಬಂಧಿಕರು ಜಗಳ ಬಿಡಿಸುತ್ತಿದ್ದರು.
ಮಹಿಳೆಯ ಕತ್ತು, ದೇಹದ ಅಂಗಾಂಗ ಸೀಳಿ ಭೀಕರ ಕೊಲೆ..! title=

Crime News: ಕಿರಾತಕ ಪತಿಯೋರ್ವ ಭಯಾನಕವಾಗಿ ರಾಕ್ಷಸನಂತೆ  ಹೆಂಡತಿಯ ಅಂಗಾಂಗಗಳನ್ನ ಕತ್ತರಿಸಿ ಭೀಕರವಾಗಿ ಕೊಲೆಗೈದಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಹೊಸಪೇಟೆಯಲ್ಲಿ ನಡೆದಿದೆ.

32 ವರ್ಷದ ಪುಷ್ಪ ಬರ್ಬರವಾಗಿ ಕೊಲೆಯಾದ (Murder) ಮಹಿಳೆಯಾಗಿದ್ದು ಹುಲಿಯೂರುದುರ್ಗದಲ್ಲಿ ವಾಸವಾಗಿದ್ದ ಸುಗ್ಗನಹಳ್ಳಿ ಮೂಲದ  ಶಿವರಾಮ್ ಕೊಲೆ ಮಾಡಿದ ಪಾಪಿ ಪತಿ.

ಹುಲಿಯೂರುದುರ್ಗ ಗ್ರಾಮದಲ್ಲಿ ಪತ್ನಿ ಹಾಗೂ 8 ವರ್ಷದ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಶಿವರಾಮ್, ಸಾಮಿಲ್ ವೊಂದರಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದನು. ಗಂಡ-ಹೆಂಡತಿ (Husband- Wife)ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಕ್ಷುಲ್ಲಕ ಕಾರಣಕ್ಕೆ ಪದೇ ಪದೇ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅಕ್ಕಪಕ್ಕದವರು, ಸಂಬಂಧಿಕರು ಜಗಳ ಬಿಡಿಸುತ್ತಿದ್ದರು. ಆದರೆ ನಿನ್ನೆ ರಾತ್ರಿ ಇಬ್ಬರ ನಡುವೆ ಶುರುವಾದ ಜಗಳ ಪುಷ್ಪಳನ್ನ ಹತ್ಯೆ ಮಾಡುವ ಮಟ್ಟಕ್ಕೆ ಹೋಗಿದೆ ಎನ್ನಲಾಗಿದೆ. 

ಇದನ್ನೂ ಓದಿ- ಕಾರು-ಟ್ರಕ್ ನಡುವೆ ಭೀಕರ ಅಪಘಾತ: 6 ಮಂದಿ ದುರ್ಮರಣ..!

ನಿನ್ನೆ ತಡರಾತ್ರಿ ಅದೇನಾಯ್ತೋ ಏನೋ ಮನೆಯಲ್ಲಿ ತನ್ನ ಮಗುವನ್ನ ರೂಮಿನಲ್ಲಿ ಕೂಡಿ ಹಾಕಿ, ಮಲಗಿದ್ದ ತನ್ನ ಪತ್ನಿಯನ್ನ ಅಡುಗೆ ಮನೆಗೆ ಎಳೆದೊಯ್ದು ಕತ್ತು ಕತ್ತರಿಸಿ, ದೇಹದ ಅಂಗಾಂಗವನ್ನ ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ. 

ಇದನ್ನೂ ಓದಿ- ಸಿಟಿ ಪೊಲೀಸರ ಹೆಸರಿನಲ್ಲಿ ಟ್ರಾಫಿಕ್ ಫೈನ್ ವಸೂಲಿ ಮಾಡುತ್ತಿದ್ದ ಆರೋಪಿಗಳ ಬಂಧನ

ಸದ್ಯ ಪುಷ್ಪ ಕೊಲೆಗೆ ಹಲವು ಅನುಮಾನ ಹುಟ್ಟುಹಾಕಿದ್ದು, ಆರೋಪಿ ಶಿವರಾಮ್ ಸಂಬಂಧಿಕರೇ ಆತನ ಆಸ್ತಿ ಹೊಡೆಯಲು ಈ ರೀತಿಯಾಗಿ ಕೊಲೆ ಮಾಡಿದ್ದಾರೆ ಎಂದು ಪುಷ್ಪ ಸಂಬಂಧಿಕರು ಆರೋಪ ಮಾಡ್ತಿದ್ರೆ, ಇತ್ತ ಶಿವರಾಮ್ ಸಂಬಂಧಿಕರು ಕೊಲೆಯಾದ ಪುಷ್ಪಗೆ ಪರ ಪುರುಷನೊಬ್ಬನ ಜೊತೆ ಅಕ್ರಮ ಸಂಬಂಧ ಇತ್ತು ಎಂದು ಇದೇ ವಿಚಾರಕ್ಕೆ ಮನೆಯಲ್ಲಿ ಪದೇ ಪದೇ ಗಂಡ ಹೆಂಡತಿ ನಡುವೆ ಗಲಾಟೆ ನಡೆತಿತ್ತು ಎಂದು ಆರೋಪ ಮಾಡ್ತಿದ್ದಾರೆ.

ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿ ಶಿವರಾಜ್ ನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News