ತವರು ಮನೆಗೆ ಹೋಗಬೇಡ ಎಂದಿದ್ದಕ್ಕೆ ನೇಣು ಬಿಗಿದುಕೊಂಡು ನವವಿವಾಹಿತೆ ಆತ್ಮಹತ್ಯೆ!

ನಿಶಾಳ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆಕೆಯ ತಂದೆ ಧ್ರುವ ಪ್ರಸಾದ್ ವರ್ಮಾ ನೀಡಿದ ದೂರಿನ ಮೇರೆಗೆ ಪತಿ, ಮಾವ, ಅತ್ತೆ ಸೇರಿದಂತೆ 6 ಮಂದಿಯ ವಿರುದ್ಧ ವರದಕ್ಷಿಣೆ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಎಸ್‌ಎಚ್‌ಒ ರಾಜೀವ್ ಸಿಂಗ್ ತಿಳಿಸಿದ್ದಾರೆ.

Written by - Puttaraj K Alur | Last Updated : Aug 8, 2023, 09:00 PM IST
  • ತವರು ಮನೆಗೆ ಹೋಗಬೇಡ ಎಂದಿದ್ದಕ್ಕೆ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ
  • ತಂದೆ ನೀಡಿದ ದೂರಿನ ಮೇರೆಗೆ ಪತಿ ಸೇರಿ 6 ಮಂದಿ ವಿರುದ್ಧ ವರದಕ್ಷಿಣೆ ಕೊಲೆ ಪ್ರಕರಣ
  • ನಿಶಾ ಎಂಬಾಕೆ 2022ರ ಡಿಸೆಂಬರ್ 2ರಂದು ಅಮಿತ್ ಎಂಬುವರನ್ನು ಮದುವೆಯಾಗಿದ್ದಳು
ತವರು ಮನೆಗೆ ಹೋಗಬೇಡ ಎಂದಿದ್ದಕ್ಕೆ ನೇಣು ಬಿಗಿದುಕೊಂಡು ನವವಿವಾಹಿತೆ ಆತ್ಮಹತ್ಯೆ! title=
ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ!

ನವದೆಹಲಿ: ತವರು ಮನೆಗೆ ಹೋಗಬೇಡ ಎಂದಿದ್ದಕ್ಕೆ ನವವಿವಾಹಿತೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಈ ಘಟನೆ ನಡೆದಿದೆ.

ನಿಶಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಈಕೆಯ ತಂದೆ ನೀಡಿದ ದೂರಿನ ಮೇರೆಗೆ ಪತಿ ಸೇರಿ 6 ಮಂದಿಯ ವಿರುದ್ಧ ಪೊಲೀಸರು ವರದಕ್ಷಿಣೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತಿ ನೌಕಾಪಡೆಯ ಕರ್ತವ್ಯಕ್ಕೆ ಹೋದ ಬಳಿಕ ನಿಶಾ ತವರು ಮನೆಗೆ ಹೋಗಬಯಸಿದ್ದಳು. ಆದರೆ ಇದಕ್ಕೆ ಆಕೆಯ ಗಂಡನ ಮನೆಯವರು ನಿರಾಕರಿಸಿದ್ದರು. ಇದರಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅನ್ನದಾತರ ಕೈಹಿಡಿದ ಕಪ್ಪು ಬಂಗಾರ.. ಕಾಳುಮೆಣಸಿಗೆ ಡಿಮ್ಯಾಂಡಪ್ಪೋ..ಡಿಮ್ಯಾಂಡ್‌..!

ನಿಶಾಳ ಅತ್ತೆ ಆಕೆಯನ್ನು ಈಗಲೇ ತವರು ಮನೆಗೆ ಹೋಗಬೇಡ. ಸ್ವಲ್ಪ ದಿನಗಳ ಬಳಿಕ ಹೋಗುವಂತೆ ಹೇಳಿದ್ದರಂತೆ. ಗಂಡನ ಮನೆಯಿಂದ ತವರು ಮನೆಗೆ ಹೋಗಲು ಮುಹೂರ್ತ ಅಂದರೆ ಶುಭ ಸಮಯದ ಬಗ್ಗೆ ಮಾತನಾಡಿದ್ದರಂತೆ. ಆದರೆ ನಿಶಾ ತಾನು ತವರು ಮನೆಗೆ ಹೋಗುತ್ತೇನೆಂದು ಹಠ ಹಿಡಿದಿದ್ದಳಂತೆ. ಇದಕ್ಕೆ ಅತ್ತೆ ಮತ್ತು ಮನೆಯವರು ಒಪ್ಪಿಗೆ ನೀಡಿರಲಿಲ್ಲವಂತೆ.    

ನಿಶಾಳ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆಕೆಯ ತಂದೆ ಧ್ರುವ ಪ್ರಸಾದ್ ವರ್ಮಾ ನೀಡಿದ ದೂರಿನ ಮೇರೆಗೆ ಪತಿ, ಮಾವ, ಅತ್ತೆ ಸೇರಿದಂತೆ 6 ಮಂದಿಯ ವಿರುದ್ಧ ವರದಕ್ಷಿಣೆ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಎಸ್‌ಎಚ್‌ಒ ರಾಜೀವ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ಸೋಲಿನಿಂದ ಎಚ್.ಡಿ.ಕುಮಾರಸ್ವಾಮಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಂತೆ ಕಾಣುತ್ತಿದೆ: ಸಿದ್ದರಾಮಯ್ಯ

ನಿಶಾ 2022ರ ಡಿಸೆಂಬರ್ 2ರಂದು ಅಮಿತ್ ಎಂಬುರನ್ನು ಮದುವೆಯಾಗಿದ್ದಳು. ಸದ್ಯ ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News