Shocking news: ಶ್ರದ್ಧಾ ಹತ್ಯೆ ಮಾದರಿಯಲ್ಲೇ ಅಪ್ಪನ ಹತ್ಯೆಗೈದು 30 ಪೀಸ್ ಮಾಡಿದ ಮಗ!

Shocking News: ಡಿಸೆಂಬರ್ 6ರಂದು ಕುಡಿದುಬಂದಿದ್ದ ವಿಠಲನಿಗೆ ಪರಶುರಾಮ ಹೊಡೆದು, ಬೈದು ಬುದ್ದಿ ಹೇಳಿದ್ದರು. ಇದರಿಂದ ಕುಪಿತನಾದ ವಿಠಲ ತಂದೆಗೆ ರಾಡ್‍ನಿಂದ ಹೊಡೆದು ಕೊಲೆ ಮಾಡಿದ್ದಾನೆ.  

Written by - Puttaraj K Alur | Last Updated : Dec 13, 2022, 03:29 PM IST
  • ಬಾಗಲಕೋಟೆಯಲ್ಲಿ ಶ್ರದ್ಧಾ ವಾಲ್ಕರ್ ಮಾದರಿಯಲ್ಲೇ ತಂದೆಯನ್ನು ಕೊಂದ ಮಗ
  • ಮುಧೋಳ್‍ನಲ್ಲಿ ತಂದೆಯನ್ನು ಕೊಂದು 30ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿದ ಪಾಪಿ ಪುತ್ರ
  • ತಂದೆಯ ದೇಹವನ್ನು 30ಕ್ಕೂ ಹೆಚ್ಚು ತುಂಡು ತುಂಡು ಮಾಡಿ ಕೊಳವೆ ಬಾವಿಗೆ ಹಾಕಿದ ಪುತ್ರ
Shocking news: ಶ್ರದ್ಧಾ ಹತ್ಯೆ ಮಾದರಿಯಲ್ಲೇ ಅಪ್ಪನ ಹತ್ಯೆಗೈದು 30 ಪೀಸ್ ಮಾಡಿದ ಮಗ! title=
ಶ್ರದ್ಧಾ ವಾಲ್ಕರ್ ಮಾದರಿಯಲ್ಲೇ ತಂದೆ ಕೊಂದ ಮಗ!

ಬಾಗಲಕೋಟೆ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಶ್ರದ್ಧಾ ವಾಲ್ಕರ್ ಹತ್ಯೆ ಮಾದರಿಯಲ್ಲಿಯೇ ಬಾಗಲಕೋಟೆಯಲ್ಲಿಯೂ ಶಾಕಿಂಗ್ ಘಟನೆಯೊಂದು ನಡೆದಿದೆ. ಪಾಪಿ ಮಗನೊಬ್ಬ ಹೆತ್ತ ತಂದೆಯನ್ನೇ ಕೊಂದು ಪೀಸ್ ಪೀಸ್ ಮಾಡಿದ್ದಾನೆ. 30ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಕೊಳವೆ ಬಾವಿಗೆ ಬಿಸಾಕಿರುವ ಭಯಾನಕ ಘಟನೆ ಮುಧೋಳದಲ್ಲಿ ನಡೆದಿದೆ.  

ಕಳೆದ ಮಂಗಳವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮುಧೋಳದ ಪರಶುರಾಮ ಕುಳಲಿ(54) ಹತ್ಯೆಯಾಗಿರುವ ವ್ಯಕ್ತಿ. ಆತನ ಪುತ್ರ ವಿಠಲ ಕುಳಲಿ(20) ರಾಡ್‍ನಿಂದ ಹೊಡೆದು ತಂದೆಯನ್ನು ಕೊಲೆ ಮಾಡಿರುವ ಆರೋಪಿ. ತಂದೆಯ ದೇಹವನ್ನು 30ಕ್ಕೂ ಹೆಚ್ಚ ತುಂಡು ತುಂಡು ಮಾಡಿ ಕೊಳವೆ ಬಾವಿಗೆ ಹಾಕಿದ್ದಾನೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಇಡೀ ಬಾಗಲಕೋಟೆ ಜಿಲ್ಲೆಯ ಜನರಿಗೆ ಆಘಾತವಾಗಿದೆ.

ಇದನ್ನೂ ಓದಿ: ಮೌಢ್ಯಕ್ಕೆ ಸಡ್ಡು ಹೊಡೆದ ಎರಡನೇ ಸಿಎಂ ಬಸವರಾಜ ಬೊಮ್ಮಾಯಿ!!

ಕುಡಿತದ ದಾಸನಾಗಿದ್ದ ಮಗನಿಗೆ ಪರಶುರಾಮ ಕುಳಲಿ ಬೈದು ಬುದ್ದಿ ಹೇಳಿದ್ದಾರೆ. ಇದೇ ವಿಚಾರಕ್ಕೆ ಆಗಾಗ ತಂದೆ-ಮಗನ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಡಿಸೆಂಬರ್ 6ರಂದು ಕುಡಿದುಬಂದಿದ್ದ ವಿಠಲನಿಗೆ ಪರಶುರಾಮ ಅವರು ಹೊಡೆದು, ಬೈದು ಬುದ್ದಿ ಹೇಳಿದ್ದರು. ಇದರಿಂದ ಕುಪಿತನಾದ ವಿಠಲ ತಂದೆಗೆ ರಾಡ್‍ನಿಂದ ಹೊಡೆದು ಕೊಲೆ ಮಾಡಿದ್ದಾನೆ.  

ರಾಡ್‍ನಿಂದ ಹೊಡೆದ ಪರಿಣಾಮ ಪರಶುರಾಮ ಪ್ರಾಣಬಿಟ್ಟಿದ್ದಾರೆ. ಕೂಡಲೇ ವಿಠಲ ತನ್ನ ತಂದೆಯ ಶವವನ್ನು ಎಸೆಯಲು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿಯಿರುವ ತಮ್ಮ ಜಮೀನಿಗೆ ಹೋಗಿದ್ದಾನೆ. ಹೊಲದಲ್ಲಿದ್ದ ಬೋರ್‍ವೇಲ್‍ನಲ್ಲಿ ತಂದೆಯ ಶವವನ್ನು ಹಾಕಲು ಪ್ರಯತ್ನಿಸಿದ್ದಾನೆ. ಆದರೆ ಅದು ಒಳಹೋಗದ ಕಾರಣ ಕೊಡಲಿಯಿಂದ ಶವವನ್ನು 30ಕ್ಕೂ ಹೆಚ್ಚು ತುಂಡಗುಳನ್ನಾಗಿ ಮಾಡಿ ಬಳಿಕ ಕೊಳವೆ ಬಾವಿಯೊಳಗೆ ಹಾಕಿದ್ದಾನೆ.

ಇದನ್ನೂ ಓದಿ: Mandous Cyclone : ಡಿಸೆಂಬರ್ 15ರವರೆಗೂ ರಾಜ್ಯದಲ್ಲಿ ವರುಣಾರ್ಭಟ

ಅಪ್ಪನನ್ನೇ ಕೊಂದ ಮಗ 30ಕ್ಕೂ ಹೆಚ್ಚು ತುಂಡು ಮಾಡಿರುವ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಕೊಳವೆ ಬಾವಿಯಲ್ಲಿರುವ ಶವದ ತುಂಡುಗಳನ್ನು ಜೆಸಿಬಿ ಮತ್ತು ಹಿಟಾಚಿಯಿಂದ ಹೊರತೆಗೆಯಲಾಗಿದೆ. ಆರೋಪಿ ವಿಠಲನನ್ನು ಬಂಧಿಸಿರುವ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News