AR Ameen : ಶೂಟಿಂಗ್‌ ಸೆಟ್‌ ಕುಸಿತ.. ಎಆರ್‌ ರೆಹಮಾನ್‌ ಪುತ್ರ ಪ್ರಾಣಾಪಾಯದಿಂದ ಪಾರು..!

ಖ್ಯಾತ ಸಂಗೀತ ಸಂಯೋಜಕ ಎಆರ್‌ ರೆಹಮಾನ್‌ ಪುತ್ರ ಎಆರ್‌ ಅಮೀನ್‌ ಕೆಲವು ದಿನಗಳ ಹಿಂದೆ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಸಂಭವಿಸಿದ ಅಪಘಾತದಿಂದ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಅಮೀನ್‌ ಹಾಡುತ್ತಿದ್ದ ವೇಳೆ ಸೆಟ್‌ ಮೇಲೆ ಕ್ರೇನ್‌ ಮೂಲಕ ಇಳಿ ಬಿಟ್ಟಿದ್ದ ಲೈಟ್ಸ್‌ಗಳು ಸೇರಿದಂತೆ ಹಲವಾರು ವಸ್ತುಗಳು ಬಿದ್ದವು ಎಂದು ಅಮೀನ್‌ ಅವಘಡದ ಕುರಿತು ಮಾಹಿತಿ ನೀಡಿದ್ದಾರೆ.

Written by - Krishna N K | Last Updated : Mar 5, 2023, 06:51 PM IST
  • ಎಆರ್‌ ಅಮೀನ್‌ ಭಾಗವಹಿಸಿದ್ದ ಶೂಟಿಂಗ್‌ ಸೆಟ್‌ ಕುಸಿತ
  • ಘಟನೆಯಲ್ಲಿ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಎಆರ್‌ ರೆಹಮಾನ್‌ ಪುತ್ರ ಪಾರು.
  • ಈ ಕುರಿತು ಫೋಟೋ ಸಮೇತ ಮಾಹಿತಿ ಹಂಚಿಕೊಂಡ ಗಾಯಕ ಅಮೀನ್‌.
AR Ameen : ಶೂಟಿಂಗ್‌ ಸೆಟ್‌ ಕುಸಿತ.. ಎಆರ್‌ ರೆಹಮಾನ್‌ ಪುತ್ರ ಪ್ರಾಣಾಪಾಯದಿಂದ ಪಾರು..! title=

AR Ameen Accident : ಖ್ಯಾತ ಸಂಗೀತ ಸಂಯೋಜಕ ಎಆರ್‌ ರೆಹಮಾನ್‌ ಪುತ್ರ ಎಆರ್‌ ಅಮೀನ್‌ ಕೆಲವು ದಿನಗಳ ಹಿಂದೆ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಸಂಭವಿಸಿದ ಅಪಘಾತದಿಂದ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಅಮೀನ್‌ ಹಾಡುತ್ತಿದ್ದ ವೇಳೆ ಸೆಟ್‌ ಮೇಲೆ ಕ್ರೇನ್‌ ಮೂಲಕ ಇಳಿ ಬಿಟ್ಟಿದ್ದ ಲೈಟ್ಸ್‌ಗಳು ಸೇರಿದಂತೆ ಹಲವಾರು ವಸ್ತುಗಳು ಬಿದ್ದವು ಎಂದು ಅಮೀನ್‌ ಅವಘಡದ ಕುರಿತು ಮಾಹಿತಿ ನೀಡಿದ್ದಾರೆ.

ಈ ಕುರಿತ ಗಾಯಕ ಎಆರ್‌ ಅಮೀನ್‌ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಕೆಲವು ಚಿತ್ರಗಳೊಂದಿಗೆ ಕಿರು ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ. ಘಟನೆ ಸಂಭವಿಸಿದ ಸೆಟ್‌ಗಳ ಮೊದಲು ಮತ್ತು ನಂತರದ ಚಿತ್ರಗಳನ್ನು ಎಆರ್ ಪುತ್ರ ಹಂಚಿಕೊಂಡಿದ್ದಾರೆ. ಅಲ್ಲದೆ, ಅಂದಿನ ಪರಿಸ್ಥಿತಿಯನ್ನು ಮೆಲುಕು ಹಾಕಿದರು. ತಮ್ಮನ್ನು ರಕ್ಷಿಸಿದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು.

 
 
 
 

 
 
 
 
 
 
 
 
 
 
 

A post shared by “A.R.Ameen” (@arrameen)

ಇದನ್ನೂ ಓದಿ: Pathaan : ʼಬಾಹುಬಲಿ 2ʼ ದಾಖಲೆ ಬ್ರೇಕ್‌ ಮಾಡಿದ ಕಿಂಗ್‌ ಖಾನ್‌ ʼಪಠಾಣ್‌ʼ..! 

“ನಾನು ಇಂದು ಸುರಕ್ಷಿತವಾಗಿ ಮತ್ತು ಜೀವಂತವಾಗಿವುದಕ್ಕೆ, ನನ್ನ ಪೋಷಕರು, ಕುಟುಂಬ, ಹಿತೈಷಿಗಳು ಮತ್ತು ನನ್ನ ಆಧ್ಯಾತ್ಮಿಕ ಗುರುಗಳಿಗೆ ನಾನು ಕೃತಜ್ಞನಾಗಿದ್ದೇನೆ. ಕೇವಲ ಮೂರು ರಾತ್ರಿಗಳ ಹಿಂದೆ, ನಾನು ಒಂದು ಹಾಡಿನ ಚಿತ್ರೀಕರಣದಲ್ಲಿದ್ದೆ. ನಾನು ಕ್ಯಾಮರಾ ಮುಂದೆ ಪ್ರದರ್ಶನ ನೀಡುತ್ತಿರುವಾಗ, ಸುರಕ್ಷತೆಯ ಬಗ್ಗೆ ಚಿತ್ರತಂಡ ಕಾಳಜಿ ವಹಿಸಿದೆ ಎಂದು ನಂಬಿದ್ದೆ. ಆದ್ರೆ, ನಾನು ಸ್ಟೇಜ್‌ ಮಧ್ಯದಲ್ಲಿದ್ದಾಗ ಕ್ರೇನ್‌ಗೆ ಅಳವಡಿಸಿದ್ದ ವಿದ್ಯುತ್‌ ದ್ವೀಪಗಳು ಸೇರಿದಂತೆ ಅದರ ಸ್ಟ್ಯಾಂಡ್‌ ಸಹ ವೇದಿಕೆ ಮೇಲೆ ಬಿತ್ತು. ಅದೃಷ್ಟವಶಾತ್‌ ನಾನು ಅಲ್ಲಿಂದ ಹೋದ ಸೆಕೆಂಡ್‌ನಲ್ಲಿ ಈ ಘಟನೆ ನಡಿತು. ಇನ್ನೂ ಆ ಅಪಘಾತದಿಂದ ಚೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.

ಇನ್ನು 2015 ರಲ್ಲಿ ಬಿಡುಗಡೆಯಾದ ತಮಿಳು ಸಿನಿಮಾ ʼಓ ಕಾದಲ್ ಕಣ್ಮಣಿʼಯಲ್ಲಿ ಹಾಡಿದ್ದರು. ಈ ಹಾಡು ಸಕತ್‌ ಹಿಟ್‌ ಆಗಿತ್ತು. ಅಂದಿನಿಂದ, ಅವರು ಸುಶಾಂತ್ ಸಿಂಗ್ ರಜಪೂತ್ ಅವರ 'ದಿಲ್ ಬೇಚಾರ' 'ನೆವರ್ ಸೇ ಗುಡ್ ಬೈ' ಸೇರಿದಂತೆ ಹಲವಾರು ಹಾಡುಗಳನ್ನು ಹಾಡಿದ್ದಾರೆ. ರಹೀಮಾ ರೆಹಮಾನ್, ಖತೀಜಾ ರೆಹಮಾನ್ ಮತ್ತು ಎಆರ್ ಅಮೀನ್ ಇವರು ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ಮೂವರು ಮಕ್ಕಳು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News