BBK10: "ಅಪ್ಪನನ್ನು ನೋಡ್ಬೇಕು, ತಾಯಿ ಹೇಗಿದ್ದಾರೆ ತಿಳಿಯಬೇಕು": ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್​!

Bigg Boss Kannada Season 10: ಬಿಗ್‌ಬಾಸ್‌ ಮನೆಯೊಳಗೆ ಸ್ಪರ್ಧಿಗಳಿಗೆ  ಮನೆಯಿಂದ ಲೆಟರ್  ಪಡೆಯಲು ಒಂದು ಅವಕಾಶ ನೀಡಿದ್ದು, ಈ ವೇಳೆ ಡ್ರೋನ್ ಪ್ರತಾಪ್​ ನಾನು ಅಪ್ಪ-ಅಮ್ಮನನ್ನು ನೋಡ್ಬೇಕು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Written by - Zee Kannada News Desk | Last Updated : Nov 15, 2023, 05:15 PM IST
  • ಮನೆ ಬಿಟ್ಟು 30 ದಿನವಾದ ಬಳಿಕ ಬಿಗ್‌ಬಾಸ್ ಗೂಡು ಸೇರಿದ ಸ್ಪರ್ಧಿಗಳಿಗೆಲ್ಲಾ ಮನೆಯ ನೆನಪು ಕಾಡುತ್ತಿದೆ.
  • ಬಿಗ್‌ಬಾಸ್ ಸ್ಪರ್ಧಿಗಳಿಗೆ ಮನೆಯಿಂದ ಲೆಟರ್ ಪಡೆಯಲು ಒಂದು ಅವಕಾಶ ನೀಡಿದ್ದಾರೆ.
  • ಡ್ರೋನ್ ಪ್ರತಾಪ್​ ನಾನು ಅಪ್ಪ-ಅಮ್ಮನನ್ನು ನೋಡ್ಬೇಕು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
BBK10: "ಅಪ್ಪನನ್ನು ನೋಡ್ಬೇಕು, ತಾಯಿ ಹೇಗಿದ್ದಾರೆ ತಿಳಿಯಬೇಕು":  ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್​! title=

Bigg Boss Drone Prathap: ಬಿಗ್‌ಬಾಸ್ ಕನ್ನಡ ಸೀಸನ್​ 10 ಆರಂಭವಾಗಿ ತಿಂಗಳು ಕಳೆದಿದ್ದು, ನೂರು ದಿನದ ಆಟ ಇದೀಗ ರಂಗೇರಿದೆ. ಮನೆ ಬಿಟ್ಟು 30 ದಿನವಾದ ಬಳಿಕ ಬಿಗ್‌ಬಾಸ್ ಗೂಡು ಸೇರಿದ ಸ್ಪರ್ಧಿಗಳಿಗೆಲ್ಲಾ ಮನೆಯ ನೆನಪು ಕಾಡುತ್ತಿದ್ದು, ದೀಪಾವಳಿ ಹಬ್ಬದಂದು ತಂದೆ-ತಾಯಿ ಕಳುಹಿಸಿಕೊಟ್ಟ ಮನೆಯೂಟ ಕಂಡು ತಿಂದ ಬಳಿಕ ಪ್ರತಿಯೊಬ್ಬ ಸ್ಪರ್ಧಿಗಳು ಅಪ್ಪ-ಅಮ್ಮ, ಅಕ್ಕ-ತಂಗಿಯರ ನೆನಪು ಕಾಡುತ್ತಿದೆ. ಹಬ್ಬದ ಮುಗಿದ ಬಳಿಕ ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ನಿಂತು ಕಣ್ಣೀರು ಹಾಕುತ್ತಾ ಮನೆಯವರಿಗೆ ಧನ್ಯವಾದ ತಿಳಿಸಿದ್ದಾರೆ.

ಬಿಗ್‌ಬಾಸ್‌ ಮನೆಯೊಳಗೆ ದೀಪಾವಳಿಯ ವಿಶೇಷ ಸಂಚಿಕೆಯಲ್ಲಿ ಸ್ಪರ್ಧಿಗಳು ತಮ್ಮ ತಮ್ಮ ಮನೆಯಿಂದ ಕಳುಹಿಸಲಾದ ತಿಂಡಿ ತಿನಿಸುಗಳನ್ನು ಸವಿದ ಬಳಿಕ, ಇದೀಗ ಬಿಗ್‌ಬಾಸ್, ಸ್ಪರ್ಧಿಗಳಿಗೆ  ಮನೆಯಿಂದ ಲೆಟರ್  ಪಡೆಯಲು ಒಂದು ಅವಕಾಶ ನೀಡಿದ್ದು, ಮೂವರು ಸದಸ್ಯರಿಗೆ ಮಾತ್ರ ಈ ಅವಕಾಶ ನೀಡಲಾಗಿದ್ದು, ಸದ್ಯ ಮನೆಯವರ ಮನಸ್ಸಿನ ಮಾತನ್ನು ಪತ್ರದ ಮೂಲಕ ತಿಳಿಯಲು ಸ್ಪರ್ಧಿಗಳು ಪೈಪೋಟಿಗೆ ಇಳಿದಿದ್ದಾರೆ.

ಇದನ್ನು ಓದಿ: ಪೊಲೀಸರಿಂದ ತನಿಷಾ, ಪ್ರತಾಪ್ ವಿಚಾರಣೆ ! ಬಿಗ್ ಬಾಸ್ ಸೆಟ್ ನಲ್ಲಿ ಅಸಲಿಗೆ ನಡೆದದ್ದೇನು ?

ಕಳೆದ ಮೂರು ವರ್ಷಗಳಿಂದ ಕುಟುಂಬದಿಂದ ದೂರ ಉಳಿದ ಡ್ರೋನ್ ಪ್ರತಾಪ್ ನನ್ನ  ಅಪ್ಪ-ಅಮ್ಮನ ಜೊತೆ ಮಾತಾಡ್ಬೇಕು ಎಂದಿದ್ದಾರೆ. ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ತಿಳಿಯುವ ಆಸೆ ನನಗಿದೆ ಎಂದು ಹೇಳಿದರು. ಮೂರು ವರ್ಷಗಳಿಂದ ಪ್ರತಾಪ್‌ಗೆ ಮನೆಯವರನ್ನು ಬಿಟ್ಟು ಅಭ್ಯಾಸವಿದೆ. ನನಗೆ ಪತ್ರ ಪಡೆಯುವ ಅವಕಾಶ ಬೇಕು ಎಂದು ಕಾರ್ತಿಕ್ ಖಡಕ್ ಆಗಿ ಹೇಳಿದ್ದಾರೆ. ಕಾರ್ತಿಕ್ ಮಾತು ಕೇಳಿ ಮನೆಯವರು ಶಾಕ್ ಆದರು. ಅದಕ್ಕೆ ನಮ್ರತಾ ಗೌಡ ಪ್ರತಾಪ್ 3 ವರ್ಷದಿಂದ ಫ್ಯಾಮಿಲಿಯಿಂದ ದೂರವಿದ್ದಾರೆ ಅವಕಾಶ ನೀಡಬೇಕು ಎಂದು  ಹೇಳಿದ್ದಾರೆ. 

ಆದರೆ ಮತ್ತೆ ಇದು ಅಭ್ಯಾಸವಾಗಿದೆ ನನಗೆ ಲೆಟರ್​ ಬೇಕು ಎಂದು ಕಾರ್ತಿಕ್ ಹೇಳುತ್ತಿದ್ದಾರೆ. ಈ ನಡುವೆ ಡ್ರೋನ್ ಪ್ರತಾಪ್​ ನಾನು ಅಪ್ಪ-ಅಮ್ಮನನ್ನು ನೋಡ್ಬೇಕು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.ಎಲ್ಲರಿಗೂ ಮನೆಯಿಂದ ಊಟ ಬಂದಿತ್ತು. ಆದ್ರೆ ನನ್ನ ಮನೆಯಿಂದ ರೆಡಿಮೆಡ್​ ಫುಡ್ ಕಳುಹಿಸಿದ್ರು. ಯಾಕೆ ಹಾಗೇ ಮಾಡಿದ್ರು. ನನ್ನ ಅಮ್ಮ ಹೇಗಿದ್ದಾರೆ. ಚೆನ್ನಾಗಿದ್ದಾರಾ ಎಂದು ತಿಳಿಯುವ ಸಲುವಾಗಿ ನನಗೆ ಪತ್ರದ ಅವಶ್ಯಕತೆ ಇದೆ ಎಂದು ತನಿಷಾ ಕೂಡ ಕಣ್ಣೀರು ಹಾಕಿದ್ರು. ಮನೆಯವರಿಗಾಗಿ ಬಿಗ್ ಬಾಸ್ ಮನೆಯಲ್ಲಿ ತ್ಯಾಗ ಮಾಡೋರು ಯಾರು ಎನ್ನುವುದನ್ನು ಕಾದು ನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News