ಬಿಗ್‌ ಬಾಸ್‌ 10: ಡ್ರೋನ್ ಪ್ರತಾಪ್ ಬೆಂಬಲಕ್ಕೆ ನಿಂತ ಕಿಚ್ಚ ಸುದೀಪ್.!

Sudeep support Drone Prathap : ನಿನ್ನೆ ಬಿಗ್‌ ಬಾಸ್‌ನ ವೀಕೆಂಡ್‌ ವಿತ್‌ ಸುದೀಪ ನಡೆಯಿತು. ವಾರ ಪೂರ್ತಿ ಮನೆಯವರು ಮಾಡಿದ ತಪ್ಪು ಒಪ್ಪುಗಳ ಬಗ್ಗೆ ಕಿಚ್ಚ ಮಾತನಾಡಿದ್ದಾರೆ.

Written by - Chetana Devarmani | Last Updated : Oct 15, 2023, 08:31 AM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10
  • ನಿನ್ನೆ ನಡೆದ ವೀಕೆಂಡ್‌ ವಿತ್‌ ಸುದೀಪ
  • ಪ್ರತಾಪ್ ಬೆಂಬಲಕ್ಕೆ ನಿಂತ ಕಿಚ್ಚ
ಬಿಗ್‌ ಬಾಸ್‌ 10: ಡ್ರೋನ್ ಪ್ರತಾಪ್ ಬೆಂಬಲಕ್ಕೆ ನಿಂತ ಕಿಚ್ಚ ಸುದೀಪ್.! title=
sudeep

Bigg Boss Kannada season 10 weekend episode : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಮೊದಲ ವಾರ ಮುಗಿದಿದೆ. ಕಿರುತೆರೆಯ ಬಹುನಿರೀಕ್ಷಿತ ಶೋ ಬಿಗ್‌ ಬಾಸ್‌ ಕನ್ನಡ ಒಂದೇ ವಾರದಲ್ಲಿ ಸಿಕ್ಕಾಪಟ್ಟೆ ಮನರಂಜನೆ ನೀಡಿದೆ. ನಿನ್ನೆ ಬಿಗ್‌ ಬಾಸ್‌ನ ವೀಕೆಂಡ್‌ ವಿತ್‌ ಸುದೀಪ ನಡೆಯಿತು. ವಾರ ಪೂರ್ತಿ ಮನೆಯವರು ಮಾಡಿದ ತಪ್ಪು ಒಪ್ಪುಗಳ ಬಗ್ಗೆ ಕಿಚ್ಚ ಮಾತನಾಡಿದ್ದಾರೆ.

ಕಿಚ್ಚನ ಪಂಚಾಯ್ತಿಯಲ್ಲಿ ಡ್ರೋನ್‌ ಪ್ರತಾಪ್‌ ವಿಚಾರ ಹೆಚ್ಚು ಚರ್ಚೆಗೆ ಬಂದಿದೆ. ಡ್ರೋನ್‌ ಪ್ರತಾಪ್‌ ಮೊದ ಮೊದಲು ಸಿಕ್ಕಾಪಟ್ಟೆ ಸೈಲೆಂಟ್‌ ಆಗಿದ್ರು. ಆದರೆ ನಂತರದ ದಿನಗಳಲ್ಲಿ ಕೊಂಚ ಬದಲಾವಣೆ ಕಂಡಿತು. ನಿಧಾನವಾಗಿ ತಮಗೆ ನೋವಾದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಲು ಶುರು ಮಾಡಿದರು. ಆದರೆ ಅನೇಕ ವಿಚಾರಗಳಲ್ಲಿ ಮನೆಯವರು ಪ್ರತಾಪ್‌ನನ್ನು ಹರಕೆಯ ಕುರಿ ಮಾಡಿದ್ದಾರೆ.  

ಈ ವಿಚಾರ ನಿನ್ನೆ ಸುದೀಪ್‌ ಚರ್ಚಿಸಿದ್ದಾರೆ. ಮೊದಲು ಭಾಗ್ಯಶ್ರೀಯವರಿಗೆ ರೊಟ್ಟಿ ತಟ್ಟಿಕೊಟ್ಟ ವಿಚಾರದಲ್ಲಿ ಸುದೀಪ್‌ ಪ್ರತಾಪ್‌ ಪರವಾಗಿ ಮಾತನಾಡಿದರು. ಬಿಗ್‌ ಬಾಸ್‌ ಮನೆಯಲ್ಲಿ ಸಮರ್ಥರು ಅಸಮರ್ಥರು ಎಂದು ಎರಡು ಗುಂಪುಗಳನ್ನು ಮಾಡಲಾಗಿದೆ. ಪ್ರತಾಪ್‌ ಅಮರ್ಥರ ಗುಂಪಿನಲ್ಲಿದ್ದರು. ಮನೆಯ ಎಲ್ಲ ಕೆಲಸಗಳನ್ನು ಮಾಡುವ ಜವಾಬ್ದಾರಿ ಅಸಮರ್ಥರದ್ದಾಗಿತ್ತು. 

ಇದನ್ನೂ ಓದಿ: ರಕ್ಷಕ್‌ ಬುಲೆಟ್ ಬಿಗ್‌ ಬಾಸ್‌ ಮನೆಗೆ ಬಂದಿದ್ದು ಯಾಕೆ ಗೊತ್ತಾ? ‌ಪ್ರಥಮ್‌ ಎದುರು ಹೇಳೇ ಬಿಟ್ರು ಆ ಗುಟ್ಟು!! 

ಭಾಗ್ಯಶ್ರೀ ಅವರಿಗೆ ರಾತ್ರಿ ಲೈಟ್‌ ಆಫ್‌ ಆದ್ಮೇಲೆ ಹೊಟ್ಟೆ ಹಸಿವದ ಕಾರಣ ಅವರು ಸಕ್ಕರೆ ತಿಂದು ನೀರು ಕುಡಿಯಲು ಹೋಗಿದ್ದರಂತೆ. ಆಗ ಅಲ್ಲಿಗೆ ಪ್ರತಾಪ್‌ ಬಂದಿದ್ದಾರೆ. ಭಾಗ್ಯಶ್ರೀಗೆ ಹಸಿವಾಗಿದ್ದನ್ನು ತಿಳಿದು ಅವರು ರೊಟ್ಟಿ ತಟ್ಟಿ ಕೊಟ್ಟಿದ್ದಾರೆ. ಭಾಗ್ಯಶ್ರೀ ಬೇಡವೆಂದರು, ಪ್ರತಾಪ್‌ ಹಸಿವಾಗಿದೆ ತಿನ್ನಿ ಎಂದು ಮಾನವೀಯತೆಯಿಂದ ಮಾಡಿಕೊಟ್ಟ ರೊಟ್ಟಿ ವಿಚಾರ ಮನೆಯಲ್ಲಿ ಗಂಭೀರ ಸ್ವರೂಪ ಪಡೆದಿತ್ತು. 

 

 

ಈ ವಿಚಾರದಿಂದಲೇ ಜಗಳವಾಗಿತ್ತು. ಆದರೆ ತನಿಷಾ ಮತ್ತು ಸಂಗೀತಾ ಪ್ರತಾಪ್‌ಗೆ ಯಾಕೆ ಮಾಡಿಕೊಟ್ರಿ ಎಂದು ಬೈದಿದ್ದನ್ನು ಭಾಗ್ಯಶ್ರೀ ಕೇಳಿಸಿಕೊಂಡಿದ್ದರಂತೆ. ಇದಕ್ಕೆ ಅವರು ನಾನು ಕೇಳಿರಲಿಲ್ಲ ಪ್ರತಾಪ್‌ ಅವರೇ ಮಾಡಿಕೊಟ್ಟಿದ್ದು ಎಂದು ಮನೆಯವರ ಮುಂದೆ ವಾದಿಸಿದ್ದರು. ಈ ಸಂಪೂರ್ಣ ಜಗಳದಲ್ಲಿ ಮನೆಯವರ ದೃಷ್ಟಿಯಲ್ಲಿ ತಪ್ಪಿತಸ್ಥರಾಗಿದ್ದು ಪ್ರತಾಪ್‌. ಹೀಗಾಗಿ ನಿನ್ನೆ ಸುದೀಪ್‌ ಪ್ರತಾಪ್‌ ಪರ ಬ್ಯಾಟ್‌ ಬೀಸಿದ್ದಾರೆ. ಭಾಗ್ಯಶ್ರೀ ಅವರು ಪ್ರತಾಪ್‌ ಪರ ಯಾಕೆ ಸ್ಟ್ಯಾಂಡ್‌ ತಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ 10 : ಈ ವಾರ ಮನೆಯಿಂದ ಹೊರ ಹೋಗೋರು ಯಾರು?

ಇದಲ್ಲದೇ ಮನೆಯಲ್ಲಿ ಪದೆ ಪದೇ ಪ್ರತಾಪ್‌ ಡ್ರೋನ್‌ ವಿಚಾರ ಇಟ್ಕೊಂಡು ತುಕಾಲಿ ಸಂತು ಕೀಟಲೆ ಮಾಡ್ತಿದ್ದರು. ಸ್ನೇಹಿತ್‌ ಮತ್ತು ಪ್ರತಾಪ್‌ ಅವರಿಗೆ ಇದೇ ವಿಚಾರಕ್ಕೆ ಜಗಳ ಕೂಡ ಆಗಿತ್ತು. ಅಲ್ಲದೇ ಸಂತೋಷ ಹಳ್ಳಿಕಾರ್‌ ಮತ್ತು ಪ್ರತಾಪ್‌ ಮಧ್ಯೆಯೂ ಡ್ರೋನ್‌ ವಿಚಾರವೇ ಮನಸ್ತಾಪಕ್ಕೆ ಕಾರಣವಾಗಿತ್ತು. 

ತುಕಾಲಿ ಸಂತೋಷ್‌ ಮಾತ್ರ ಪದೆ ಪದೇ ಪ್ರತಾಪ್‌ ಅವರ ಡ್ರೋನ್‌ ವಿಚಾರವನ್ನು ಎಲ್ಲರ ಮುಂದೆ ಮಾತನಾಡಿ ಕಾಲೆಳೆಯುತ್ತಿದ್ದರು. ಆದರೆ ನಿನ್ನೆ ಸುದೀಪ್‌ ಇದೇ ವಿಚಾರಕ್ಕೆ ತುಕಾಲಿ ಸಂತು ಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಕೊನೆಯಲ್ಲಿ ತುಕಾಲಿ ಸಂತು ಅವರು ಪ್ರತಾಪ್‌ ಬಳಿ ಕ್ಷಮೆ ಕೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News