BBK 10: ಮೊದಲು ವಿನಯ್‌ ಜೊತೆ ಕಿತ್ತಾಟ, ಇದೀಗ ಕಾರ್ತಿಕ್‌ ಮೇಲೆ ಕೋಪ: ಅಸಲಿ ಕಾರಣವೇ ನಾಮಿನೇಷನ್!‌

Sangeetha Sringeri: ಬಿಗ್‌ಬಾಸ್‌ ಸೀಸನ್‌ 10ರ ಶೋ ಆರಂಭದಲ್ಲಿ ಸಂಗೀತಾ ಮೊದಲು ವಿನಯ್‌ ಜೊತೆ ನಾಮಿನೇಷನ್‌ ವಿಚಾರವಾಗಿ ಕಿತ್ತಾಡಕೊಂಡರೇ, ಆರನೇ ವಾರದ ನಾಮಿನೇಷನ್‌ ಟಾಸ್ಕ್‌ನಲ್ಲಿ ಸಂಗೀತಾ ಸೇಫ್ ಆಗಿದ್ದರೂ, ಕಾರ್ತಿಕ್‌, ತನಿಷಾ ಸೇಫ್‌ ಮಾಡಲಿಲ್ಲ ಅಂತ ಬೆಟ್ಟು ಮಾಡಿ ತೋರಿಸಿ ಸಂಗೀತಾ ಕಿತ್ತಾಡಿಕೊಂಡಿದ್ದರು. 

Written by - Zee Kannada News Desk | Last Updated : Nov 26, 2023, 09:52 AM IST
  • ಮೊದಲ ವಾರ ಅಸಮರ್ಥರ ಗುಂಪಿನಲ್ಲಿದ್ದ ಸಂಗೀತಾನ್ನ ವಿನಯ್ ನಾಮಿನೇಟ್ ಮಾಡಿ, "ರೂಲ್ಸ್‌ ಫಾಲೋ ಮಾಡಿಲ್ಲ. ಸೋಫಾ ಮೇಲೆ ಸಂಗೀತಾ ಕೂತರು" ಎಂಬ ಕಾರಣವನ್ನು ನೀಡಿದರು.
  • ಇದಾದ ಬಳಿಕ ವಿನಯ್ ಹಾಗೂ ಸಂಗೀತಾ ಮಧ್ಯೆ ಕಿತ್ತಾಟ ಮುಂದುವರೆದಿದ್ದು, ತಮ್ಮನ್ನ ವಿನಯ್ ಟಾರ್ಗೆಟ್‌ ಮಾಡ್ತಿದ್ದಾರೆ ಅಂತ ಸಂಗೀತಾ ಭಾವಿಸಿದ್ದರು.
  • ಕಾರ್ತಿಕ್ - ಸಂಗೀತಾ ಮಧ್ಯೆ ಅಂತರ ಜಾಸ್ತಿಯಾದಾಗ ಅಡುಗೆ ಮನೆ ವಿಚಾರಕ್ಕೆ ಕಿರಿಕ್ ಆಗಿ ಬಿಗ್‌ಬಾಸ್‌ ಮನೆಯ ಮುಖ್ಯದ್ವಾರದಿಂದ ಆಚೆ ಕಾಲಿಟ್ಟು ಸಂಗೀತಾ ವಾಪಸ್ ಬಂದರು.
BBK 10: ಮೊದಲು ವಿನಯ್‌ ಜೊತೆ ಕಿತ್ತಾಟ, ಇದೀಗ ಕಾರ್ತಿಕ್‌ ಮೇಲೆ ಕೋಪ: ಅಸಲಿ ಕಾರಣವೇ ನಾಮಿನೇಷನ್!‌ title=

Sangeetha, Vinay And Karthik In BBK: ಬಿಗ್‌ಬಾಸ್ ಕನ್ನಡ ಸೀಸನ್‌ 10ರ ಕಾರ್ಯಕ್ರಮದಲ್ಲಿ ಮೊದಲ ವಾರ ಕಾರ್ತಿಕ್, ತನಿಷಾ ಹಾಗೂ ಸಂಗೀತಾ ಅಸಮರ್ಥರ ಗುಂಪಿನಲ್ಲಿದ್ದು, ಅವಾಗಿಂದಲೇ ಮೂವರ ಮಧ್ಯೆ ಆತ್ಮೀಯತೆ ಬೆಳೆದಿತ್ತು. ಮೊದಲ ವಾರ ಅಸಮರ್ಥರ ಗುಂಪಿನಲ್ಲಿದ್ದ ಸಂಗೀತಾನ್ನ ವಿನಯ್ ನಾಮಿನೇಟ್ ಮಾಡಿ, "ರೂಲ್ಸ್‌ ಫಾಲೋ ಮಾಡಿಲ್ಲ. ಸೋಫಾ ಮೇಲೆ ಸಂಗೀತಾ ಕೂತರು" ಎಂಬ ಕಾರಣವನ್ನು ನೀಡಿದರು. ನಾಮಿನೇಷನ್ ಬಳಿಕ ವಿನಯ್ ಜೊತೆ ಸಂಗೀತಾ ಕ್ಯಾತೆ ತೆಗೆದು, "ನೀವು ನಿಮ್ಮ ಬಣ್ಣವನ್ನ ತೋರಿಸಿದ್ದೀರಿ" ಎಂದು ವಿನಯ್‌ಗೆ ಸಂಗೀತಾ ಚುಚ್ಚಿದ್ದರು.

ಇದಾದ ಬಳಿಕ ವಿನಯ್ ಹಾಗೂ ಸಂಗೀತಾ ಮಧ್ಯೆ ಕಿತ್ತಾಟ ಮುಂದುವರೆದಿದ್ದು, ತಮ್ಮನ್ನ ವಿನಯ್ ಟಾರ್ಗೆಟ್‌ ಮಾಡ್ತಿದ್ದಾರೆ ಅಂತ ಸಂಗೀತಾ ಭಾವಿಸಿದ್ದರು. ಬಳಿಕ ಸಂಗೀತಾ ಸಗಣಿ ಸ್ನಾನದ ಶಿಕ್ಷೆ ಅನುಭವಿಸಿದ್ದರು. ಎರಡನೇ ವಾರದ ಟಾಸ್ಕ್ ವಿಚಾರವಾಗಿ ವಿನಯ್ - ಸಂಗೀತಾ ಮಧ್ಯೆ ಮಾತಿನ ಚಕಮಕಿ ನಡೆಯುವಾಗ, ಮಾತಿಗೆ ಮಾತು ಬೆಳೆದು "ನನಗೆ ಭಯವಾಗುತ್ತಿದೆ. ನಿಮ್ಮಿಂದ ಥ್ರೆಟ್‌ ಆಗ್ತಿದೆ" ಅಂತ ವಿನಯ್‌ ಗೌಡಗೆ ಸಂಗೀತಾ ತಿವಿದಿದ್ದರಿಂದ ಬಿಗ್‌ಬಾಸ್‌ ಮನೆ ರಣರಂಗವಾಯಿತು.ವಿನಯ್ ಜೊತೆಗಿನ ಜೋರು ಗಲಾಟೆ ಬಳಿಕ "ನಾನು ಇಲ್ಲಿಗೆ ಬರಬಾರದಿತ್ತು. ನನಗೆ ಇಲ್ಲಿರೋಕೆ ಇಷ್ಟವಾಗ್ತಿಲ್ಲ. ನಾನು ಹೊರಗೆ ಹೋಗಬೇಕು’" ಅಂತ್ಹೇಳಿ ಸಂಗೀತಾ ಕಣ್ಣೀರು ಸುರಿಸಿದ್ದರು.

ಇದನ್ನೂ ಓದಿ: BBK 10: ವಿನಯ್‌ ಒಳ್ಳೆಯವರು..! ಕಾರ್ತಿಕ್‌ಗೆ ʼಸ್ನೇಹ ಅಂಥ ಒಳಒಳಗೆ ಸ್ಕೀಮ್‌ʼ ಹಾಕಿದ್ರಾ ಸಂಗೀತಾ..? 

ಆರು ವಾರಗಳ ಕಾಲ ಬಿಗ್‌ಬಾಸ್‌ ಮನೆಯಲ್ಲಿ ತನಿಷಾ, ಕಾರ್ತಿಕ್ ಜೊತೆಗೆ ಸಂಗೀತಾ ಕ್ಲೋಸ್ ಆಗಿದ್ದಚರು, ಆರನೇ ವಾರದ ನಾಮಿನೇಷನ್‌ಗಾಗಿ ಲೂಡೋ ಟಾಸ್ಕ್‌ ನೀಡಲಾಗಿದ್ದು, ಈ ಆಟದಲ್ಲಿ ಸಂಗೀತಾ ಗೆದ್ದು ಸೇಫ್ ಆದರು. ಆದರೆ ಆಟದಲ್ಲಿ ತಾವು ಗೆಲ್ಲುವ ಮುನ್ನ ಕಾರ್ತಿಕ್‌, ತನಿಷಾಗೆ ಅವಕಾಶ ಸಿಕ್ಕರೂ ಫ್ರೆಂಡ್‌ ಆಗಿ ಸೇಫ್ ಮಾಡಲಿಲ್ಲ ಎಂಬ ಕಾರಣಕ್ಕೆ ಸಂಗೀತಾ ಮುನಿಸಿಕೊಂಡು, ಇದೇ ವಿಚಾರಕ್ಕೆ ಕಾರ್ತಿಕ್, ತನಿಷಾ ಜೊತೆಗೆ ಸಂಗೀತಾ ಕಿತ್ತಾಡಿಕೊಂಡರು.

ಕಾರ್ತಿಕ್ - ಸಂಗೀತಾ ಮಧ್ಯೆ ಅಂತರ ಜಾಸ್ತಿಯಾದಾಗ ಅಡುಗೆ ಮನೆ ವಿಚಾರಕ್ಕೆ ಕಿರಿಕ್ ಆಗಿ ಬಿಗ್‌ಬಾಸ್‌ ಮನೆಯ ಮುಖ್ಯದ್ವಾರದಿಂದ ಆಚೆ ಕಾಲಿಟ್ಟು ಸಂಗೀತಾ ವಾಪಸ್ ಬಂದರು. "ನನಗೆ ಇಲ್ಲಿರೋಕೆ ಆಗ್ತಿಲ್ಲ. ಸ್ಟ್ರೆಸ್ ಜಾಸ್ತಿಯಾಗುತ್ತಿದೆ. ಪ್ರತಿ ದಿನ ಇಲ್ಲಿ ಸಾಯೋಕ್ಕಿಂತ ವಾಕ್‌ಔಟ್‌ ಆಗೋದು ವಾಸಿ" ಎಂದು ಸಂಗೀತಾ ನೊಂದುಕೊಂಡು ಹೇಳಿದ್ದರು.ಅಸಲಿಗೆ, ವರ್ಷಗಳ ಹಿಂದೆ ಪ್ರಸಾರವಾದ ‘ಹರ ಹರ ಮಹಾದೇವ’ ಸೀರಿಯಲ್‌ನಲ್ಲಿ ಸಂಗೀತಾ - ವಿನಯ್ ಒಟ್ಟಿಗೆ ಅಭಿನಯಿಸಿದ್ದರೀಮದ, ಫ್ರೆಂಡ್‌ ಅಂದುಕೊಂಡಿದ್ದ ವಿನಯ್‌, ತಮ್ಮನ್ನ ನಾಮಿನೇಟ್‌ ಮಾಡಿದಾಗ ಸಂಗೀತಾ ಬೇಸರಗೊಂಡಿದ್ದರು. ಇನ್ನೂ, ಬಿಗ್‌ಬಾಸ್‌ ಮನೆಯಲ್ಲಿ ತನಿಷಾ, ಕಾರ್ತಿಕ್‌ ಜೊತೆ ಸಂಗೀತಾ ಫ್ರೆಂಡ್‌ಶಿಪ್‌ಯಿದ್ದು, ಫ್ರೆಂಡ್ಸ್‌ ಸೇವ್‌ ಮಾಡಲಿಲ್ಲ ಅಂತಲೇ ಸಂಗೀತಾ ಅಸಮಾಧಾನಗೊಂಡರು. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News