ಅತಿಯಾದ ಅಹಂಕಾರ ಈ ಸ್ಟಾರ್‌ ನಟನ ಜೀವನವನ್ನೇ ಹಾಳು ಮಾಡಿತು!?

Vishal Malhotra life story : ಸಲ್ಮಾನ್ ಖಾನ್ ಮತ್ತು ಶಾಹಿದ್ ಕಪೂರ್ ಅವರೊಂದಿಗೆ ಕೆಲಸ ಮಾಡಿದ ಈ ನಟ ಮತ್ತೆ ಸಿನಿರಂಗಕ್ಕೆ ಮರಳಿದ್ದಾರೆ. ಈ ನಟ ತಮ್ಮ ಕೆಲಸದ ಆಧಾರದ ಮೇಲೆ ನಿರಂತರವಾಗಿ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡುತ್ತಿದ್ದರು. ಆದರೆ ಹಅತಿಯಾದ ಅಹಂಕಾರ ಎಲ್ಲವನ್ನೂ ಹಾಳುಮಾಡಿತು. ಅಷ್ಟೇ ಅಲ್ಲ ಈ ನಟ ಷ್ಟೋ ವರ್ಷಗಳ ಕಾಲ ಮನೆಯಲ್ಲೇ ಕೂರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.    

Written by - Chetana Devarmani | Last Updated : Aug 2, 2023, 01:19 PM IST
  • ಅತಿಯಾದ ಅಹಂಕಾರವೇ ವಿನಾಶಕ್ಕೆ ಕಾರಣವಾಯಿತಾ?
  • ಈ ಸ್ಟಾರ್‌ ನಟನ ಜೀವನವನ್ನೇ ಹಾಳು ಮಾಡಿತು ಅಹಂಕಾರ!
  • ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡಿದ್ದರು ಈ ನಟ
ಅತಿಯಾದ ಅಹಂಕಾರ ಈ ಸ್ಟಾರ್‌ ನಟನ ಜೀವನವನ್ನೇ ಹಾಳು ಮಾಡಿತು!?  title=

Bollywood actor Vishal Malhotra: ಬಾಲಿವುಡ್‌ನಲ್ಲಿ ತಮ್ಮ ಕಠಿಣ ಪರಿಶ್ರಮದಿಂದ ಸಿಂಹಾಸನ ಏರಿದ ಅನೇಕ ತಾರೆಯರಿದ್ದಾರೆ. ಆದರೆ ಕೆಲವು ಸ್ಟಾರ್‌ಗಳ ಅಹಂಕಾರದಿಂದ ಅವರ ವೃತ್ತಿಜೀವನವು ಕೆಲವೇ ಸಮಯದಲ್ಲಿ ಕೊನೆಯಾಯಿಯಿತು. ಅಂತಹ ಒಬ್ಬ ನಟನ ಬಗ್ಗೆ ಇಂದು ಹೇಳಲಿದ್ದೇವೆ. ಆ ಬಾಲಿವುಡ್‌ ನಟನಟ ಹೆಸರು ವಿಶಾಲ್ ಮಲ್ಹೋತ್ರಾ. ವಿಶಾಲ್ ಒಂದಾನೊಂದು ಕಾಲದಲ್ಲಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಬಾಲಿವುಡ್‌ನ ಹಲವು ಹಿರಿಯ ತಾರೆಯರೊಂದಿಗೂ ಕೆಲಸ ಮಾಡಿದ್ದಾರೆ. ಆದರೆ ಅವರ ಒಂದು ತಪ್ಪು ಇಡೀ ವೃತ್ತಿಜೀವನವನ್ನು ನಾಶಮಾಡಿತು.

ವಿಶಾಲ್ ಮಲ್ಹೋತ್ರಾ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಸಲ್ಮಾನ್ ಖಾನ್ ಅವರ 'ಸಲಾಮ್-ಎ-ಇಷ್ಕ್' ಮತ್ತು ಶಾಹಿದ್ ಕಪೂರ್ ಅವರ ಚಿತ್ರ 'ಇಷ್ಕ್ ವಿಷ್ಕ್' ಸೇರಿವೆ. ಇದಲ್ಲದೆ, 'ಏಕ್ ವಿವಾಹ ಐಸಿ ಭಿ' ಮತ್ತು ಟಿವಿ ಶೋಗಳಾದ 'ಶರಾರತ್' ಮತ್ತು 'ಕ್ಯಾ ಮಸ್ತ್ ಲೈಫ್' ಸೇರಿವೆ. ಈ ಧಾರಾವಾಹಿಗಳು ಮತ್ತು ಚಲನಚಿತ್ರಗಳೊಂದಿಗೆ ವಿಶಾಲ್ ಅವರ ವೃತ್ತಿಜೀವನವು ಉತ್ತುಂಗಕ್ಕೇರಿತು. ಅವರು ಅನೇಕ ಚಿತ್ರಗಳಲ್ಲಿ ಪಾತ್ರಗಳನ್ನು ಪಡೆಯಲು ಪ್ರಾರಂಭಿಸಿದರು. ಯಶಸ್ಸು ವಿಶಾಲ್ ಅವರ ಮನಸ್ಸಿನ ಮೇಲೆ ಎಷ್ಟು ಪ್ರಭಾವ ಬೀರಿತು ಎಂದರೆ ಅವರು ತಮ್ಮನ್ನು ತಾವು ದೊಡ್ಡ ಸ್ಟಾರ್ ಎಂದು ಪರಿಗಣಿಸಲು ಪ್ರಾರಂಭಿಸಿದರು. ಇದರ ನಂತರ, ಅವರು ದೊಡ್ಡ ತಪ್ಪನ್ನು ಮಾಡಿದರು. ಅವರು ತಮ್ಮ ಜೀವನದುದ್ದಕ್ಕೂ ಪಶ್ಚಾತ್ತಾಪ ಪಡುವಂತಾಯಿತು. 

ಇದನ್ನೂ ಓದಿ:  ಕಾಂತಾರಾ V/S KGF-2; ಪ್ರಶಸ್ತಿ ರೇಸ್‌ನಲ್ಲಿ ಭಾರೀ ಪೈಪೋಟಿ..!‌

ವಿಶಾಲ್ ಅಹಂಕಾರದಿಂದ ಅವರು ಒಂದು ರೀತಿಯ ಪಾತ್ರವನ್ನು ಮಾಡಲು ಸುಸ್ತಾಗಿದ್ದಾರೆ ಎಂದು ಹೇಳಿದರು. ಅವರು ವಿಭಿನ್ನವಾಗಿ ಮಾಡಬೇಕೆಂದು ಬಯಸಿದ್ದರು ಮತ್ತು ಈ ಹಠಮಾರಿತನದಿಂದ ನಿರ್ಮಾಪಕರು ಅವರಿಗೆ ಚಿತ್ರಗಳ ಆಫರ್‌ಗಳನ್ನು ಕಡಿಮೆ ಮಾಡಿದರು ಮತ್ತು ಶೀಘ್ರದಲ್ಲೇ ಈ ಆಫರ್‌ಗಳು ಬರುವುದನ್ನು ನಿಲ್ಲಿಸಿದವು.

ವಿಶಾಲ್ ಮಲ್ಹೋತ್ರಾ ಅವರಿಗೆ ಸಿನಿಮಾಗಳ ಹಾದಿ ಸಂಪೂರ್ಣ ಮುಚ್ಚಿಹೋಗಿತ್ತು. ಇದರಿಂದಾಗಿ ಅವರು ಹಲವು ವರ್ಷಗಳ ಕಾಲ ಮನೆಯಲ್ಲಿ ಕುಳಿತುಕೊಳ್ಳಬೇಕಾಯಿತು. ಇದಾದ ನಂತರ ವಿಶಾಲ್ ಜಾಹೀರಾತು ಏಜೆನ್ಸಿಯನ್ನು ತೆರೆದರು. ಈ ಸಂದರ್ಭದಲ್ಲಿ, ಸಂದರ್ಶನವೊಂದರಲ್ಲಿ 'ಜನರು ನಟರಾಗಲು ತಮ್ಮ ಕೆಲಸವನ್ನು ಬಿಡುತ್ತಾರೆ ಮತ್ತು ನಾನು ನಟನಾದ ನಂತರ ಕೆಲಸ ಮಾಡುತ್ತಿದ್ದೇನೆ' ಎಂದು ವಿಶಾಲ್ ಹೇಳಿದ್ದರು. 

12 ವರ್ಷಗಳ ನಂತರ ನಟನಾ ಕ್ಷೇತ್ರಕ್ಕೆ ವಿಶಾಲ್‌ ಮಲ್ಹೋತ್ರಾ ಮರಳಿದರು. ಈಗ ಅವರು ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದಾರೆ. ಇವರ ಜಾಹೀರಾತು ಏಜೆನ್ಸಿಯ ವಹಿವಾಟು 4 ರಿಂದ 5 ಕೋಟಿ. ಪ್ರಸ್ತುತ, ನಟ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ: ಮುಂದಿನ ವಾರ ಜನ್ಮದಿನ ಆಚರಿಸಿಕೊಳ್ಳಬೇಕಿದ್ದ ಕಲಾ ನಿರ್ದೇಶಕ ನೇಣಿಗೆ ಶರಣು..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News