ಜ. 26ರಿಂದ ಶುರುವಾಗಲಿದೆ 'ಕನಕ'ನ ಅಬ್ಬರ

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಈ ಚಿತ್ರದ 'ಎಣ್ಣೆ ನಮ್ದು ಊಟ ನಿಮ್ದು' ಹಾಡು ಸೂಪರ್ ಡೂಪರ್ ಹಿಟ್ ಆಗಿದೆ.

Last Updated : Jan 11, 2018, 01:26 PM IST
ಜ. 26ರಿಂದ ಶುರುವಾಗಲಿದೆ 'ಕನಕ'ನ ಅಬ್ಬರ title=

ದುನಿಯಾ ವಿಜಿ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕನಕ'ನ ಅಬ್ಬರ ಜ. 26ರಿಂದ ರಾಜ್ಯಾದ್ಯಂತ ಶುರುವಾಗಲಿದೆ. ಈ ಚಿತ್ರದ 'ಎಣ್ಣೆ ನಮ್ದು ಊಟ ನಿಮ್ದು' ಹಾಡು ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸೂಪರ್ ಡೂಪರ್ ಹಿಟ್ ಆಗಿದೆ. ಈ ಚಿತ್ರಕ್ಕಾಗಿ ದುನಿಯಾ ವಿಜಿ ಅಭಿಮಾನಿಗಳು ಕಾತುರರಾಗಿದ್ದಾರೆ.

ಎಣ್ಣೆ ನಮ್ದು ಊಟ ನಿಮ್ದು ಹಾಡಿನ ದೃಶ್ಯವೊಂದರಲ್ಲಿ ದುನಿಯಾ ವಿಜಯ್....

ಇನ್ನು 'ಕನಕ' ಚಿತ್ರದ ಮೂಲಕ ಮೊದಲ ಬಾರಿಗೆ ಸಂಗೀತ ನಿರ್ದೇಶಿಸಿದ ನವೀನ ಸಜ್ಜು  'ಎಣ್ಣೆ ನಮ್ದು ಊಟ ನಿಮ್ದು' ಎನ್ನುತ್ತಲೇ ಚಂದನವನದಲ್ಲಿ ತಮ್ಮದೇ ಹವಾ ಸೃಷ್ಟಿಸಿದ್ದಾರೆ.

ಕೈಲಾಶ್ ಖೇರ್ ಹಾಡಿರುವ ಕನಕ ಚಿತ್ರದ ಟೈಟಲ್ ಸಾಂಗ್ ಗಿಂತ ಈ ಹಾಡು ಹೆಚ್ಚು ಜನಪ್ರಿಯವಾಗಿದೆ. ಆ ಮೂಲಕ ನವೀನ್  ತಮ್ಮ ಸಂಗೀತದ ಮೂಲಕ ಕನ್ನಡದ ಪ್ರೇಕ್ಷಕರ ತನು ಮನ ಸೆಳೆದಿದ್ದಾರೆ. ನವೀನ್ ಸಜ್ಜು ಕೇವಲ ಸಂಗೀತ ನಿರ್ದೇಶಕ ಮಾತ್ರವಲ್ಲ, ಗೀತೆ ರಚನೆಕಾರ ಮತ್ತು ಗಾಯಕ ಕೂಡ. ಒಟ್ಟಿನಲ್ಲಿ ನಟ ಬ್ಲಾಕ್ ಕೋಬ್ರಾ ಖ್ಯಾತಿಯ ದುನಿಯಾ ವಿಜಯ್, ನಿರ್ದೇಶಕ ಆರ್.ಚಂದ್ರು, ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿರುವ ಸಂಗೀತ ನಿರ್ದೇಶಕ ನವೀನ್ ಸಜ್ಜು ಕಾಂಬಿನೇಶನ್ನ ಈ  ಚಿತ್ರಕ್ಕಾಗಿ ಅಭಿಮಾನಿಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

ಈ ಚಿತ್ರದಲ್ಲಿ ನಟ ದುನಿಯಾ ವಿಜಿಗೆ ಮಾನ್ವಿಥ ಹರೀಶ್ ಜೋಡಿಯಾಗಿದ್ದಾರೆ.

Trending News