ವೈವಾಹಿಕ ವಿವಾದ ; ಆತ್ಮಹತ್ಯೆಗೆ ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ ಚೈತ್ರ ಕೊಟ್ಟೂರು ..!

ಕೆಲವು ದಿನಗಳ ಹಿಂದೆ ಚೈತ್ರ ಕೊಟೂರ್  ಉದ್ಯಮಿ ನಾಗಾರ್ಜುನ ಅವರನ್ನು ವಿವಾಹವಾಗಿದ್ದರು. ಸಾಮಾಜಿಕ ಜಾಲ ತಾಣಗಳಲ್ಲಿ ಮದುವೆಯ ಫೋಟೋವನ್ನು ಶೇರ್ ಮಾಡಿ ತಮ್ಮ ಮದುವೆಯ ಸುದ್ದಿಯನ್ನು ಚೈತ್ರ ಪ್ರಕಟಿಸಿದ್ದರು. 

Written by - Ranjitha R K | Last Updated : Apr 9, 2021, 12:09 PM IST
  • ಕನ್ನಡ ಬಿಗ್ ಬಾಸ್ ಸ್ಪರ್ಧಿ ಚೈತ್ರ ಕೊಟೂರ್ ಆತ್ಮಹತ್ಯೆಗೆ ಯತ್ನ
  • ಕೆಲ ದಿನಗಳ ಹಿಂದಷ್ಟೇ ನಾಗಾರ್ಜುನ್ ವಿವಾಹವಾಗಿದ್ದ ಚೈತ್ರ
  • ಮದುವೆಗೆ ನಾಗಾರ್ಜುನ್ ಕುಟುಂಬ ಒಪ್ಪಿರಲಿಲ್ಲ
ವೈವಾಹಿಕ ವಿವಾದ ; ಆತ್ಮಹತ್ಯೆಗೆ ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ ಚೈತ್ರ  ಕೊಟ್ಟೂರು ..! title=
ಕನ್ನಡ ಬಿಗ್ ಬಾಸ್ ಸ್ಪರ್ಧಿ ಚೈತ್ರ ಕೊಟೂರ್ ಆತ್ಮಹತ್ಯೆಗೆ ಯತ್ನ (photo instagram)

ನವದೆಹಲಿ :  ನಟಿ ಮತ್ತು ಕನ್ನಡ ಬಿಗ್ ಬಾಸ್ (Kannada Bigg boss) ಸ್ಪರ್ಧಿ ಚೈತ್ರ ಕೊಟೂರ್ (Chaitra Kotoor) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗುರುವಾರ, ತಮ್ಮ ಮನೆಯಲ್ಲಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಚೈತ್ರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ. 

ಕೆಲ ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಚೈತ್ರ :
ಕೆಲವು ದಿನಗಳ ಹಿಂದೆ ಚೈತ್ರ ಕೊಟೂರ್  (Chaitra Kotoor) ಉದ್ಯಮಿ ನಾಗಾರ್ಜುನ ಅವರನ್ನು ವಿವಾಹವಾಗಿದ್ದರು. ಸಾಮಾಜಿಕ ಜಾಲ ತಾಣಗಳಲ್ಲಿ (Social media) ಮದುವೆಯ ಫೋಟೋವನ್ನು ಶೇರ್ ಮಾಡಿ ತಮ್ಮ ಮದುವೆಯ ಸುದ್ದಿಯನ್ನು ಚೈತ್ರ ಪ್ರಕಟಿಸಿದ್ದರು. ಮೂಲಗಳ ಪ್ರಕಾರ ನಾಗಾರ್ಜುನ (Nagarjun) ಕುಟುಂಬ ಯಾವರಿಬ್ಬರ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ ಎನ್ನಲಾಗಿದೆ. ವಿಷಯ ಬೆಳಕಿಗೆ ಬಂದ ನಂತರ, ಕೆಲವರ ಒತ್ತಾಯದ ಮೇರೆಗೆ ತಮ್ಮ ಇಷ್ಟದ ವಿರುದ್ಧವಾಗಿ ಚೈತ್ರಳನ್ನು ಮದುವೆಯಾಗಿರುವುದಾಗಿ ನಾಗಾರ್ಜುನ ಹೇಳಿದ್ದಾರೆ. 

ಇದನ್ನೂ ಓದಿ : 'ಡ್ಯಾನ್ಸ್ ದಿವಾನೆ 3' ಜಡ್ಜ್ ಧರ್ಮೇಶ್ ಯೆಲಾಂಡೆಗೆ ಕರೋನಾ ಪಾಸಿಟಿವ್, Madhuri Dixit ವರದಿಯಲ್ಲೇನಿದೆ?

ಮದುವೆಯ ಫೋಟೋ ವೈರಲ್  :
ಮಾರ್ಚ್ 28 ರಂದು ನಾಗಾರ್ಜುನ ಮತ್ತು ಚೈತ್ರಾ  ಮದುವೆಯ  ಫೋಟೋ (Photo) ಬಹಿರಂಗವಾಗಿತ್ತು. ಇದಾದ ನಂತರ ಫೋಟೋ ಬಹಳ ವೈರಲ್ (Viral) ಆಗಿತ್ತು. ವೈರಲ್ ಫೋಟೋದಲ್ಲಿ ಇಬ್ಬರೂ ಮದುವೆಯ ನಂತರ ದೇವಾಲಯದಲ್ಲಿ ನಿಂತಿರುವುದು ಕಂಡುಬಂಡಿದೆ.  ಸರಳವಾಗಿ ನಡೆದ ವಿವಾಹ (Marraige) ಸಮಾರಂಭದಲ್ಲಿ ಚೈತ್ರಾ ಕುಟುಂಬ ಸದಸ್ಯರು ಹಾಜರಿದ್ದರು.  

ನಾಗಾರ್ಜುನ ಮದುವೆಗೆ ಸಿದ್ಧನಾಗಿರಲಿಲ್ಲ ಎನ್ನಲಾಗಿದೆ : 
ಮದುವೆಯ ನಂತರ, ನಾಗಾರ್ಜುನ ಮನೆಗೆ ಹೋದಾಗ, ಅವರಿಬ್ಬರನ್ನೂ ನಾಗಾರ್ಜುನ್ ಕುಟುಂಬದವರು ಮನೆಯೊಳಗೇ ಸೇರಿಸಿಕೊಳ್ಳಲಿಲ್ಲ ಎನ್ನಲಾಗಿದೆ. ಈ ಮದುವೆಯೇ ಅಮಾನ್ಯ ಎಂದು ಹೇಳಿ ಇಬ್ಬರನ್ನು ಮನೆಯಿಂದ ಹೊರ ಕಳುಹಿಸಿದ್ದರು ಎಂದು ಚೈತ್ರ ಪೋಲಿಸರಿಗೆ (Police) ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರೊಂದಿಗೆ, ನಾಗಾರ್ಜುನ್ ಮದುವೆಯನ್ನು ನಿರಂತರವಾಗಿ ಮುಂದೂಡುತ್ತಿದ್ದ ಎಂಬ ವಿಚಾರವನ್ನು ಕೂಡಾ ಬಹಿರಂಗಪಡಿಸಿದ್ದಾರೆ. 

ಇದನ್ನೂ ಓದಿ VIDEO : ವಿರಾಟ್ ಕೊಹ್ಲಿಯನ್ನು ಲಿಫ್ಟ್ ಮಾಡಿದ ಅನುಷ್ಕ ; ಫ್ಯಾನ್ಸ್ ನೀಡಿದ ಪ್ರತಿಕ್ರಿಯೆ ಹೀಗಿತ್ತು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News