HD Kumaraswamy: ನಿಖಿಲ್ ನಿನಗೆ ರಾಜಕೀಯ ಬೇಡ ಎಂದ ಎಚ್.ಡಿ.ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕಿಂತ ಹೆಚ್ಚಾಗಿ ಕಲಾವಿದರಾಗಿ ಇನ್ನೂ ಹಲವಾರು ವರ್ಷಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Written by - Zee Kannada News Desk | Last Updated : Dec 26, 2021, 12:15 PM IST
  • ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕಿಂತ ಸಿನಿಮಾ ಕ್ಷೇತ್ರದಲ್ಲಿ ಮುಂದುವರಿಯಬೇಕು
  • ನಿಖಿಲ್ ಇನ್ನೂ ಹೆಚ್ಚು ಹೆಚ್ಚು ಉತ್ತಮ ಸಿನಿಮಾಗಳಲ್ಲಿ ನಟಿಸಬೇಕು
  • ‘ರೈಡರ್’ ಸೆಲೆಬ್ರೆಟಿ ಶೋ ವೀಕ್ಷಿಸಿದ ಖುಷಿ ವ್ಯಕ್ತಪಡಿಸಿದ ಎಚ್.ಡಿ.ಕುಮಾರಸ್ವಾಮಿ
HD Kumaraswamy: ನಿಖಿಲ್ ನಿನಗೆ ರಾಜಕೀಯ ಬೇಡ ಎಂದ ಎಚ್.ಡಿ.ಕುಮಾರಸ್ವಾಮಿ title=
ಮಗನ ಸಿನಿಮಾ ನೋಡಿ ಕುಮಾರಸ್ವಾಮಿ ದಿಲ್ ಖುಷ್

ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ರಾಜಕೀಯ ಕ್ಷೇತ್ರಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ. ಸೆಲೆಬ್ರೆಟಿ ಶೋನಲ್ಲಿ ನಟ ನಿಖಿಲ್ ನಟನೆಯ ರೈಡರ್ ಸಿನಿಮಾ(Rider Celebrity Show) ನೋಡಿದ ಎಚ್ ಡಿಕೆ ಹಾಗೂ ಸ್ಟಾರ್ಸ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಮಗನ ಸಿನಿಮಾ ನೋಡಿ ತಂದೆ ಕುಮಾರಸ್ವಾಮಿ ದಿಲ್ ಖುಷ್ ಆಗಿದ್ದಾರೆ.

‘ನಿಖಿಲ್ ಕುಮಾರಸ್ವಾಮಿ(Nikhil Kumaraswamy) ರಾಜಕೀಯಕ್ಕಿಂತ ಹೆಚ್ಚಾಗಿ ಕಲಾವಿದರಾಗಿ ಇನ್ನೂ ಹಲವಾರು ವರ್ಷಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ಮುಂದುವರಿಯಬೇಕು. ಅನೇಕ ಸಿನಿಮಾಗಳಲ್ಲಿ ಅವರು ನಟಿಸಬೇಕು. ಕನ್ನಡ ಚಿತ್ರರಂಗಕ್ಕೆ ಇಂದು ನಟರ ಅವಶ್ಯಕತೆ ಇದೆ. ಅದರಂತೆಯೇ ನಿಖಲ್ ಇನ್ನೂ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಆ ನಟರ ಅವಶ್ಯಕತೆಯನ್ನು ಪೂರೈಸಬೇಕು’ ಅಂತಾ ಹೇಳಿದ್ದಾರೆ.   

ಇದನ್ನೂ ಓದಿ: ಡಿನ್ನರ್ ಡೇಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಆಲಿಯಾ - ರಣಬೀರ್, ವಿಡಿಯೋ ನೋಡಿ ಈ ಪ್ರಶ್ನೆ ಎತ್ತಿದ ಅಭಿಮಾನಿಗಳು

ನಿಖಿಲ್ ಗೆ ಒಬ್ಬ ಉತ್ತಮ ಕಲಾವಿದನಾಗಲು ದೇವರು ಅವಕಾಶ ನೀಡಿದ್ದಾರೆ. ನಿಖಿಲ್ ಒಬ್ಬ ಅತ್ಯುತ್ತಮ ನಟನೆಂಬುದನ್ನು ತಮ್ಮ 3ನೇ ಚಿತ್ರದಲ್ಲಿಯೂ ಸಾಬೀತುಪಡಿಸಿದ್ದಾರೆ. ‘ರೈಡರ್’ ಸಿನಿಮಾ(Rider Cinema)ನೋಡಿದಾಗ ಅವರು ರಾಜಕಾರಣಕ್ಕಿಂತ ಸಿನಿಮಾದ ಕಡೆಗೆ ಹೆಚ್ಚು ಗಮನಹರಿಸಬೇಕು. ಉತ್ತಮ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ಸೇವೆ ಸಲ್ಲಿಸಬೇಕು. ರಾಜಕಾರಣಕ್ಕಿಂತ ಚಿತ್ರರಂಗದಲ್ಲಿ ಮುಂದುವರಿಯುವಂತೆ ನಾನು ನಿಖಿಲ್ ಗೆ ಸಲಹೆ ನೀಡುತ್ತೇನೆ’ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಒಬ್ಬ ಶ್ರೇಷ್ಠ ಕಲಾವಿದ ಮತ್ತು ನಟರಾಗಿದ್ದರು. ಆದರೆ ದುರಾದೃಷ್ಟವಶಾತ್ ನಾವೆಲ್ಲರೂ ಅವರನ್ನು ಕಳೆದುಕೊಂಡಿದ್ದೇವೆ. ನಿಖಿಲ್ ಕೂಡ ಪುನೀತ್ ಅವರಂತೆಯೇ ಉತ್ತಮ ಚಿತ್ರಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಿ ಎಂದು ಹಾರೈಸುತ್ತೇನೆ. ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಉತ್ತಮ ಚಿತ್ರಗಳಲ್ಲಿ ನಟಿಸಲಿ ಎಂದು ಕುಮಾರಸ್ವಾಮಿ ಶುಭ ಹಾರೈಸಿದರು.

ಇದನ್ನೂ ಓದಿ: ಕಪಿಲ್ ದೇವ್ ಅವರ ಆ ಕ್ಯಾಚ್ ಅನುಕರಿಸಲು 6 ತಿಂಗಳ ತೆಗೆದುಕೊಂಡಿದ್ದ ರಣವೀರ್ ಸಿಂಗ್...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News