Sudeep - Puneeth : ಅಪ್ಪು ಇದ್ರೆ ಕಾಲ್ ಮಾಡ್ತಿದ್ರು ಅನ್ಸುತ್ತೇ.! ಸುದೀಪ್‌ಗೆ ಪುನೀತ್‌ ವಿಶ್‌ ಮಾಡಿದ್ದ ಆಡಿಯೋ ವೈರಲ್‌

Puneeth Rajkumar Wish to Kiccha Sudeep :ಕಿಚ್ಚ ಸುದೀಪ್‌ ಮತ್ತು ಪುನೀತ್‌ ಸ್ನೇಹ ಎಲ್ಲರಿಗೂ ಚಿರಪರಿಚಿತ. ಕಿಚ್ಚ ಸುದೀಪ್ ಹಾಗೂ ಪುನೀತ್ ರಾಜ್‍ಕುಮಾರ್ ನಡುವೆ ಆತ್ಮೀಯ ಬಾಂಧವ್ಯವಿತ್ತು. ಅಪ್ಪು ಅಮರರಾದ ದಿನ ಸ್ನೇಹಿತನ ಕಳೆದು ಕೊಂಡ ದುಃಖದಲ್ಲಿ ಸುದೀಪ್‌ ಬಿಕ್ಕಿ ಬಿಕ್ಕಿ ಅತ್ತಿದ್ದರು.

Written by - Chetana Devarmani | Last Updated : Jan 31, 2023, 08:29 AM IST
  • ಕಿಚ್ಚನ ಸಿನಿ ಪಯಣಕ್ಕೆ 27 ವರ್ಷ
  • ಸುದೀಪ್‌ 25 ವರ್ಷ ಸಿನಿ ಜರ್ನಿ ಪೂರೈಸಿದಾಗ ಹಾರೈಸಿದ್ದ ಪುನೀತ್‌
  • ಸುದೀಪ್‌ಗೆ ಪುನೀತ್‌ ವಿಶ್‌ ಮಾಡಿದ್ದ ಆಡಿಯೋ ವೈರಲ್‌
Sudeep - Puneeth : ಅಪ್ಪು ಇದ್ರೆ ಕಾಲ್ ಮಾಡ್ತಿದ್ರು ಅನ್ಸುತ್ತೇ.! ಸುದೀಪ್‌ಗೆ ಪುನೀತ್‌ ವಿಶ್‌ ಮಾಡಿದ್ದ ಆಡಿಯೋ ವೈರಲ್‌   title=
Sudeep - Puneeth

27 Years Of Kichcha : ಕಿಚ್ಚ ಸುದೀಪ್ ಅವರ ಜೀವನದಲ್ಲಿ ಜನವರಿ 31 ಬಹಳ ವಿಶೇಷವಾದ ದಿನ. ಇಂದಿಗೆ ಸುದೀಪ್ ಚಿತ್ರರಂಗಕ್ಕೆ ಸುದೀಪ್‌ ಕಾಲಿಟ್ಟು 27 ವರ್ಷಗಳಾಗಿವೆ. 27 ವರ್ಷಗಳ ಹಿಂದೆ ಜನವರಿ 31 ರಂದು ಸುದೀಪ್ ತಮ್ಮ ಮೊದಲ ಚಿತ್ರಕ್ಕೆ ಬಣ್ಣ ಹಚ್ಚಿ, ಸಿನಿಲೋಕಕ್ಕೆ ಕಾಲಿಟ್ಟಿದ್ದರು. ಕಿಚ್ಚ ಸುದೀಪ್‌ ಮತ್ತು ಪುನೀತ್‌ ಸ್ನೇಹ ಎಲ್ಲರಿಗೂ ಚಿರಪರಿಚಿತ. ಕಿಚ್ಚ ಸುದೀಪ್ ಹಾಗೂ ಪುನೀತ್ ರಾಜ್‍ಕುಮಾರ್ ನಡುವೆ ಆತ್ಮೀಯ ಬಾಂಧವ್ಯವಿತ್ತು. ಅಪ್ಪು ಅಮರರಾದ ದಿನ ಸ್ನೇಹಿತನ ಕಳೆದು ಕೊಂಡ ದುಃಖದಲ್ಲಿ ಸುದೀಪ್‌ ಬಿಕ್ಕಿ ಬಿಕ್ಕಿ ಅತ್ತಿದ್ದರು. ಬಾಲ್ಯದಿಂದ ನಡೆದುಕೊಂಡ ಬಂದ ಈ ಸ್ನೇಹ ಪಯಣ ಸಿನಿರಂಗದಲ್ಲೂ ಎಲ್ಲರ ಗಮನಸೆಳೆದಿತ್ತು.

ಇದನ್ನೂ ಓದಿ : #27YearsOfKichcha : ಕಿಚ್ಚನ ಸಿನಿ ಪಯಣಕ್ಕೆ 27 ವರ್ಷ, ಫ್ಯಾನ್ಸ್‌ಗೆ ಬಿಗ್‌ ಸರ್‌ಪ್ರೈಸ್?

 

 

ಇಂದು ಸುದೀಪ್‌ 27 ವರ್ಷಗಳ ಸಿನಿ ಕರ್ನಿ ಪೂರೈಸಿದ ಹಿನ್ನೆಲೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಆಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ. ಸುದೀಪ್‌ ಅವರು 25 ವರ್ಷಗಳ ಸಿನಿಪಯಣ ಪೂರೈಸಿದ ದಿನ ಅಪ್ಪು ಅವರಿಗೆ ಕಾಲ್‌ ಮಾಡಿದ್ದರು. ಅಲ್ಲದೇ ಇವರಿಬ್ಬರ ಆತ್ಮೀಯವಾದ ಮಾತುಕತೆ ಇದಾಗಿದೆ. ಅಂದಿನ ಈ ಆಡಿಯೋ ಇದೀಗ ವೈರಲ್‌ ಆಗುತ್ತಿದೆ. ಆತ್ಮೀಯ ಗೆಳೆಯನ ಸಿನಿಪಯಣವನ್ನು ಅಪ್ಪು ಎಷ್ಟು ಸಂಭ್ರಮಿಸಿದ್ದರು ಎಂಬುದಕ್ಕೆ ಈ ಆಡಿಯೋ ಸಾಕ್ಷಿಯಾಗಿದೆ.

ಇದನ್ನೂ ಓದಿ : ಫೆ.4ಕ್ಕೆ "ಕಬ್ಜ" ಸಿನಿಮಾದ ಹಾಡು ರಿಲೀಸ್.. ಹೈದ್ರಾಬಾದ್ನಲ್ಲಿ ಅದ್ಧೂರಿ ಕಾರ್ಯಕ್ರಮ 

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಸಿನಿಜರ್ನಿ ಬಗ್ಗೆ ಸುದೀಪ್‌ , "ಪ್ರತಿ ಬಾರಿಯೂ ನನ್ನ ಜೊತೆಗೆ ನಿಂತಿದ್ದಕ್ಕೆ ನನ್ನ ಗೆಳೆಯರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನನ್ನು ನೀವೆಲ್ಲ ಆಶೀರ್ವದಿಸಿರುವಿರಿ ಮತ್ತು ತುಂಬಾ ಪ್ರೀತಿ ನಿಮ್ಮಿಂದ ಸಿಕ್ಕಿದೆ. ನನಗೆ ಅವಕಾಶಗಳನ್ನು ನೀಡಿದ್ದಕ್ಕಾಗಿ ಕೆಎಫ್‌ಐಗೆ ಧನ್ಯವಾದಗಳು. ನನ್ನನ್ನು ನಂಬಿದ್ದಕ್ಕಾಗಿ ಹಿಂದಿ, ತಮಿಳು ಮತ್ತು ತೆಲುಗು ಭ್ರಾತೃತ್ವಕ್ಕೆ ನಾನು ಧನ್ಯವಾದ ಹೇಳದಿದ್ದರೆ ಅದು ಅಪೂರ್ಣವಾಗಿರುತ್ತದೆ" ಎಂದು ಬರೆದುಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News