Seetha Raama Serial : ರಾಮ್ ಬದುಕಿನಲ್ಲಿ ಮತ್ತೆ ಚಾಂದಿನಿ ಪ್ರವೇಶ ! ಸೀತಾ ಬಾಳಲ್ಲಿ ಏಳುತ್ತಾ ಬಿರುಗಾಳಿ ?

Seetha Raama Serial:ಹೇಳದೆ ಕೇಳದೆ ದೂರವಾದ ಚಾಂದಿನಿ  ಈಗ ಮತ್ತೆ  ರಾಮ್ ಬದುಕಿನಲ್ಲಿ ಬಂದಿದ್ದಾದರೂ ಯಾಕೆ?  ಚಾಂದಿನಿ  ಮತ್ತೆ ರಾಮ್ ಬದುಕಿನಲ್ಲಿ ಕಾಲಿಡಲು ಅಶೋಕ್ ಬಿಡುತ್ತಾನಾ? ಈ ಎಲ್ಲಾ ಪ್ರಶ್ನೆಗಳು ಇದೀಗ ಪ್ರೇಕ್ಷಕರನ್ನು ಕಾಡುತ್ತಿದೆ. 

Written by - Ranjitha R K | Last Updated : Oct 18, 2023, 12:43 PM IST
  • 'ಸೀತಾ ರಾಮ' ಧಾರಾವಾಹಿ ಇದೀಗ ಹೊಸ ತಿರುವು ಪಡೆದುಕೊಂಡಿದೆ.
  • ರಾಮ್ ಬಾಳಲ್ಲಿ ಮತ್ತೆ ಚಾಂದಿನಿ ಪ್ರವೇಶ
  • ಇನ್ನು ಮುಂದೆ ಸೀತಾ, ಸಿಹಿ ಕತೆ ಏನು ?
Seetha Raama Serial : ರಾಮ್ ಬದುಕಿನಲ್ಲಿ ಮತ್ತೆ ಚಾಂದಿನಿ ಪ್ರವೇಶ ! ಸೀತಾ ಬಾಳಲ್ಲಿ ಏಳುತ್ತಾ ಬಿರುಗಾಳಿ ?  title=

Seetha Raama Serial : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೀತಾ ರಾಮ' ಧಾರಾವಾಹಿ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ತಿರುವು ಪ್ರೇಕ್ಷಕರ ಕುತೂಹಲ ಕೂಡಾ ಹೆಚ್ಚಿಸಿದೆ. ಇಲ್ಲಿಯವರೆಗೆ ಧಾರಾವಾಹಿಯ ಮುಖ್ಯ ಪಾತ್ರದಾರಿಗಳಾದ ಸೀತಾ ಮತ್ತು ರಾಮ್ ಇಬ್ಬರ ಬದುಕಿನಲ್ಲಿ ಹಿಂದೆ ನಡೆದ ಘಟನೆಯನ್ನು ಸಸ್ಪೆನ್ಸ್ ಆಗಿ ಇಡಲಾಗಿತ್ತು. ಆದರೆ ಇಬ್ಬರಿಗೂ ಒಂದು ಪಾಸ್ಟ್ ಇದೆ ಅನ್ನುವುದು ಮಾತ್ರ ಪದೇ ಪದೇ ಗೊತ್ತಾಗುತ್ತಿತ್ತು. ಇದೀಗ ರಾಮ್ ಹಿಂದಿನ ಬದುಕು ತೆರೆದು ಕೊಳ್ಳುವ ಕಾಲ ಬಂದಿದೆ. 

ರಾಮ್ ಬಾಳಲ್ಲಿ ಮತ್ತೆ ಚಾಂದಿನಿ ಪ್ರವೇಶ : 
ಹೌದು, ರಾಮ್ ಬಾಳಲ್ಲಿ ಮತ್ತೆ ಚಾಂದಿನಿ ಪ್ರವೇಶವಾಗಿದೆ. ಇದ್ದಕ್ಕಿದ್ದಂತೆ ತನ ಬಾಳಿನಿಂದ ದೂರವಾಗಿದ್ದ ಚಾಂದಿನಿ  ಮತ್ತೆ ರಾಮ್ ಕಣ್ಣಿಗೆ ಬೀಳುತ್ತಾಳೆ. ಚಾಂದಿನಿ ಕಂಡ ಕೂಡಲೇ ರಾಮ್ ಕುಸಿದು ಬೀಳುತ್ತಾನೆ.  ಚಾಂದಿನಿ  ಬಗ್ಗೆ ಗೆಳೆಯ ಅಶೋಕ್ ಜೊತೆ ಚರ್ಚೆಯೂ ಆಗುತ್ತದೆ. ಇಲ್ಲಿ ಚಾಂದಿನಿ  ಮತ್ತೆ ರಾಮ್ ಬದುಕಿನಲ್ಲಿ ಬಂದಿರುವುದು ಗೆಳೆಯ ಅಶೋಕ್ ಗೆ ಎಳ್ಳಷ್ಟೂ ಇಷ್ಟವಿಲ್ಲ 

ಇದನ್ನೂ ಓದಿ : ಪ್ರಿಯಾಂಕಾ ನಟನೆಯ 'ಕ್ಯಾಪ್ಚರ್' ಚಿತ್ರದ ಟೈಟಲ್ ಪೋಸ್ಟರ್ ವಿಭಿನ್ನವಾಗಿ ಲಾಂಚ್

ಎಲ್ಲದರ ಹಿಂದೆ ಚಿಕ್ಕಿ ಕೈವಾಡ : 
ಹೇಳದೆ ಕೇಳದೆ ದೂರವಾದ ಚಾಂದಿನಿ ಈಗ ಮತ್ತೆ ಬಂದಿರುವುದರ ಹಿಂದೆ ಚಿಕ್ಕಿ ಭಾರ್ಗವಿ ಕೈವಾಡ ಇದೆ ಅನ್ನಿಸುತ್ತದೆ. ಆದರೆ ಇವರಿಬ್ಬರೂ ದೂರವಾಗಿದ್ದು ಯಾಕೆ, ಮತ್ತೆ ಚಾಂದಿನಿ  ಬಂದಿರುವುದಾದರೂ ಯಾಕೆ? ಚಾಂದಿನಿ ಎಕ್ಸಿಟ್ ಮತ್ತು ಎಂಟ್ರಿ ಮೇಲೆ ಭಾರ್ಗವಿ ಚಿಕ್ಕಿ ಕೈವಾಡ ಇರುವುದಾದರೆ ಅವರಿಬ್ಬರಿಗೆ ಇರುವ ಸಂಬಂಧ ಏನು ಎನ್ನುವುದೇ ಸದ್ಯದ ಸಸ್ಪೆನ್ಸ್. 

ಇದೀಗ ಚಾಂದಿನಿ ಮರಳಿ ಬಂದಾಯಿತು ಅಂದ ಮೇಲೆ ಸೀತಾ ಕತೆ ಏನು? ಸಿಹಿ ಜೊತೆಗೆ ರಾಮ್  ಸ್ನೇಹ ಹೀಗೆಯೇ ಮುಂದುವರೆಯುತ್ತಾ?  ಚಾಂದಿನಿ  ಮತ್ತೆ ರಾಮ್ ಬದುಕಿನಲ್ಲಿ ಕಾಲಿಡಲು ಅಶೋಕ್ ಬಿಡುತ್ತಾನಾ? ಎನ್ನುವ ಹತ್ತು ಹಲವು ಪ್ರಶ್ನೆಗಳು ಇಲ್ಲಿವೆ. ಇಲ್ಲಿಯವರೆಗೆ ಸಸ್ಪೆನ್ಸ್ ನಲ್ಲಿ ಇಟ್ಟಿದ್ದ ರಾಮ್ ಪಾಸ್ಟ್ ಲೈಫ್ ಅಂದರೆ ರಾಮ್ ಮತ್ತು ಚಾಂದಿನಿ  ಕತೆಯ ಸುತ್ತ ಮುಂದಿನ ಕೆಲವು ಕಂತುಗಳು  ಪ್ರಸಾರವಾಗಬಹುದು. 

ಇದನ್ನೂ ಓದಿ :  BBK10: ಕಠೋರ ಶಪಥ ಮಾಡಿದ ತುಕಾಲಿ..! ಸದ್ಯ ಮನೆಯೊಳಗೆ ಸಂತೋಷ್ ಪರಿಸ್ಥಿತಿ ಏನಾಯ್ತು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News