Diwali 2022: ದೀಪಾವಳಿಯ ಬಳಿಕ ಈ ಅಪಾಯಕಾರಿ ಕಾಯಿಲೆಗಳ ದಾಳಿ ಸಾಧ್ಯತೆ, ಎಚ್ಚರ!

Diwali 2022:  ದೇಶಾದ್ಯಂತ ಜನರು ದೀಪಾವಳಿ ಮಹಾಪರ್ವದ ಆಚರಣೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಗಳಲ್ಲಿ ದೀಪಾವಳಿ ಹಬ್ಬದ ಭರಾಟೆಯನ್ನು ನೀವು ನೋಡಬಹುದು. ಮಾರುಕಟ್ಟೆಯಲ್ಲಿ ಎಲ್ಲ ಬಗೆಯ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ವಿಭಿನ್ನ ರೀತಿಯ ಹೊಳಪು ಕಾಣಸಸಿಗುತ್ತಿದೆ, ಆದರೆ ದೀಪಾವಳಿ ನಂತರ, ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ದೊಡ್ಡ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.  

Written by - Nitin Tabib | Last Updated : Oct 21, 2022, 09:12 PM IST
  • ದೀಪಾವಳಿ ನಂತರ, ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ದೊಡ್ಡ ಅಪಾಯ ಎದುರಾಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.
  • ಬದಲಾಗುತ್ತಿರುವ ಹವಾಮಾನ, ಫಸಲಿನ ಕಸ ಸುಡುವಿಕೆ ಮತ್ತು ಪಟಾಕಿಗಳನ್ನು ಸಿಡಿಸುವುದರಿಂದ ಗಾಳಿಯ ಗುಣಮಟ್ಟವು ಆತಂಕಕಾರಿ ಮಟ್ಟವನ್ನು ತಲುಪುತ್ತದೆ.
Diwali 2022: ದೀಪಾವಳಿಯ ಬಳಿಕ ಈ ಅಪಾಯಕಾರಿ ಕಾಯಿಲೆಗಳ ದಾಳಿ ಸಾಧ್ಯತೆ, ಎಚ್ಚರ! title=
Diwali 2022 Health Precautions

Happy Diwali 2022: ದೇಶಾದ್ಯಂತ ಜನರು ದೀಪಾವಳಿ ಆಚರಣೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಗಳಲ್ಲಿ ದೀಪಾವಳಿಯ ಸಂಭ್ರಮವನ್ನು ನೀವು ಕಾಣಬಹುದು. ಮಾರುಕಟ್ಟೆಯಲ್ಲಿ ಎಲ್ಲ ಬಗೆಯ ವಸ್ತುಗಳಿಗೆ ಬೇಡಿಕೆ ಹೆಚ್ಚಾಗತೊಡಗಿದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಹೊಸ ಭರಾಟೆ ಕಾಣಸಿಗುತ್ತಿದೆ, ಆದರೆ ದೀಪಾವಳಿ ನಂತರ, ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ದೊಡ್ಡ ಅಪಾಯ ಎದುರಾಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಬದಲಾಗುತ್ತಿರುವ ಹವಾಮಾನ, ಫಸಲಿನ ಕಸ ಸುಡುವಿಕೆ ಮತ್ತು ಪಟಾಕಿಗಳನ್ನು ಸಿಡಿಸುವುದರಿಂದ ಗಾಳಿಯ ಗುಣಮಟ್ಟವು ಆತಂಕಕಾರಿ ಮಟ್ಟವನ್ನು ತಲುಪುತ್ತದೆ. ಈ ಬಾರಿ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚು ಕಟ್ಟುನಿಟ್ಟಾಗಿವೆ. ದೆಹಲಿ ಸರ್ಕಾರವು ಜನವರಿ 1, 2023 ರವರೆಗೆ ಎಲ್ಲಾ ರೀತಿಯ ಪಟಾಕಿಗಳ ಮಾರಾಟ, ಬಳಕೆ ಮತ್ತು ತಯಾರಿಕೆಯನ್ನು ನಿಷೇಧಿಸಿದೆ. ಇದೇ ವೇಳೆ  ಉತ್ತರ ಪ್ರದೇಶ ಸರ್ಕಾರ ಎನ್‌ಸಿಆರ್‌ನಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ದೀಪಾವಳಿಯ ನಂತರ ಅನೇಕ ಮಾರಣಾಂತಿಕ ಕಾಯಿಲೆಗಳ ಅಪಾಯವು ಹೆಚ್ಚಾಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಇದರಿಂದ ನೀವೂ ಕೂಡ ಜಾಗರೂಕರಾಗಬೇಕು.

ಈ ರೋಗಗಳ ಬಗ್ಗೆ ಎಚ್ಚರವಹಿಸಿ
1. ದೀಪಾವಳಿಯ ನಂತರ ಅನೇಕ ಮಾರಣಾಂತಿಕ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಏಕೆಂದರೆ ಈ ಸಮಯದಲ್ಲಿ ಹೆಚ್ಚಿನ ನಗರಗಳ ಗಾಳಿಯಲ್ಲಿ ಮಾಲಿನ್ಯದ ಮಟ್ಟವು ಅಪಾಯಕಾರಿ ಮಟ್ಟವನ್ನು ತಲುಪುತ್ತದೆ. ಇದರಿಂದ ಜನರು ಅಸ್ವಸ್ಥರಾಗುತ್ತಾರೆ ಎಂದರೆ ಅವರು ದೀರ್ಘಕಾಲದವರೆಗೆ ಔಷಧಿಗಳ ಮೇಲೆ ಅವಲಂಬಿತರಾಗುತ್ತಾರೆ.

2. ಅಪಾಯಕಾರಿ ಗುಣಮಟ್ಟದ ಗಾಳಿಯಿಂದಾಗಿ, COPD ರೋಗಗಳು ಜನರನ್ನು ಆವರಿಸುತ್ತವೆ. ಈ ಕಾರಣದಿಂದಾಗಿ ನಿಮಗೆ ಒಣ ಕೆಮ್ಮು, ಉಸಿರಾಟದ ತೊಂದರೆ ಮತ್ತು ಗಂಟಲಿನ ಸೋಂಕು ಕಾಣಿಸಿಕೊಳ್ಳಬಹುದು.

3. ಪಟಾಕಿಗಳಿಂದ ಉಂಟಾಗುವ ಮಾಲಿನ್ಯವು ಅಸ್ತಮಾ ರೋಗಿಗಳನ್ನು ಅಪಾಯಕ್ಕೆ ತಳ್ಳುತ್ತವೆ. ಇದರೊಂದಿಗೆ, ಉಸಿರಾಟದ ಸಮಸ್ಯೆಯಿಂದ ತೊಂದರೆಗೊಳಗಾದ ಜನರನ್ನು ಆಸ್ಪತ್ರೆಗೆ ದಾಖಲಾಗಬೇಕಾಗಬಹುದು. ಹೀಗಾಗಿ ಮುಂಜಾಗ್ರತೆವಹಿಸಿ.

4. ಪಟಾಕಿಯ ಹೊಗೆಯು ಜನರಲ್ಲಿ ಶ್ವಾಸಕೋಶದ ಸೋಂಕನ್ನು ಉಂಟುಮಾಡಬಹುದು. ಏಕೆಂದರೆ ಪಟಾಕಿಯಿಂದ ಹೊರಬರುವ ಹೊಗೆ ಬ್ರಾಂಕೈಟಿಸ್‌ನಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

5. ದೀಪಾವಳಿ ಸಮಯದಲ್ಲಿ ಜನರು ತಮ್ಮ ಆಹಾರದ ಮೇಲೆ ನಿಯಂತ್ರಣ ಹೊಂದಿರುವುದಿಲ್ಲ. ಈ ಸಮಯದಲ್ಲಿ ಹೆಚ್ಚು ಕರಿದ ಮತ್ತು ಹುರಿದ ಪದಾರ್ಥಗಳನ್ನು ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಕಳಪೆ ಜೀರ್ಣಕ್ರಿಯೆಯಿಂದಾಗಿ, ಬೊಜ್ಜು ಹೆಚ್ಚಾಗಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ-ಡಯಾಬಿಟೀಸ್ ರೋಗಿಗಳು ಈ ನಾಲ್ಕು ಹಣ್ಣುಗಳನ್ನು ತಿನ್ನಲೇ ಬಾರದು.!

6. ದೀಪಾವಳಿಯ ನಂತರ, ಜನರು ಶುಗರ್ ಮತ್ತು ಅಧಿಕ ಬಿಪಿ ಸಮಸ್ಯೆಯನ್ನು ಎದುರಿಸುತ್ತಾರೆ. ಪಟಾಕಿಗಳ ಜೋರಾದ ಶಬ್ದದಿಂದ ಅಧಿಕ ಬಿಪಿ ಇರುವವರು ಹಾಗೂ ಹೃದ್ರೋಗದಿಂದ ಬಳಲುತ್ತಿರುವವರು ಅಪಾಯ ಎದುರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ-Mung Bean Benefits : ಪ್ರತಿದಿನ ಸೇವಿಸಿ ಹೆಸರು ಬೇಳೆ, ಈ ರೋಗಗಳಿಂದ ದೂರವಿಡುತ್ತೆ ನಿಮ್ಮನ್ನು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹ್ತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News