Health Tips: ಎಳ್ಳಿಕಾಯಿ ಮರ ಇದ್ದರೆ ಅಪ್ಪಿತಪ್ಪಿ ಕಡಿಯದಿರಿ..!

Health Tips: ಮಲೇನಾಡು ಭಾಗಗಳಲ್ಲಿ ಹೇರಳವಾಗಿ ಸಿಗುವ ಈ ಹಣ್ಣು  ಸಿಟ್ರಸ್‌ ಗುಂಪಿಗೆ ಸೇರಿದಾಗಿದೆ. ಹಣ್ಣಿನಲ್ಲಿ ವಿಟಮಿನ್ ಸಿ ಹೊಂದಿದೆ.ಮನೆಯ ಹಿತ್ಲಲ್ಲಿ ಇದರ ಮರ ಇದ್ದರೆ ಕಡಿಯುವ ಯೋಚನೆ ಮಾಡಬೇಡಿ ಏಕೆಂದರೆ ಇದರ ಉಪಯೋಗ ತಿಳಿದರೆ ನೀವೇ ಆಶ್ಚರ್ಯ ಪಡುತ್ತಿರಾ..

Written by - Zee Kannada News Desk | Last Updated : Mar 6, 2023, 10:46 AM IST
  • ಸಿಟ್ರಸ್‌ ಗುಂಪಿಗೆ ಸೇರಿದಾಗಿದೆ ಹಣ್ಣಿನಲ್ಲಿ ವಿಟಮಿನ್ ಸಿ ಹೊಂದಿದೆ
  • ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕರಿಸುತ್ತದೆ
  • ತೆ ಪಿತ್ತಾ ಸಂಬಂಧಿಸಿದ ಖಾಯಿಲೆ ನಿವಾರಣೆ
Health Tips: ಎಳ್ಳಿಕಾಯಿ ಮರ ಇದ್ದರೆ ಅಪ್ಪಿತಪ್ಪಿ ಕಡಿಯದಿರಿ..! title=

Health Tips: ಮಲೇನಾಡು ಭಾಗಗಳಲ್ಲಿ ಹೇರಳವಾಗಿ ಸಿಗುವ ಈ ಹಣ್ಣು  ಸಿಟ್ರಸ್‌ ಗುಂಪಿಗೆ ಸೇರಿದಾಗಿದೆ. ಹಣ್ಣಿನಲ್ಲಿ ವಿಟಮಿನ್ ಸಿ ಹೊಂದಿದೆ.ಮನೆಯ ಹಿತ್ಲಲ್ಲಿ ಇದರ ಮರ ಇದ್ದರೆ ಕಡಿಯುವ ಯೋಚನೆ ಮಾಡಬೇಡಿ ಏಕೆಂದರೆ ಇದರ ಉಪಯೋಗ ತಿಳಿದರೆ ನೀವೇ ಆಶ್ಚರ್ಯ ಪಡುತ್ತಿರಾ...ಆಹಾರದ ಬಳಕೆಯಲ್ಲಿ ಇವುಗಳನ್ನು ಪ್ರಮುಖವಾಗಿ ಉಪ್ಪಿನಕಾಯಿ ತಯಾರಿಕೆಯಲ್ಲಿ ಬಳಸುತ್ತಾರೆ.ಇದರ ರಸವನ್ನು ಚಿತ್ರಾನ್ನ,ರಸಂ, ಸಾರು, ಗೊಜ್ಜು, ಚಟ್ನಿ, ಜ್ಯೂಸ್ ಪಾನಕ ತಯಾರಿಕೆಯಲ್ಲಿ ಬಳಸುತ್ತಾರೆ.

ಇದರಲ್ಲಿರುವ ಪೋಷಕಾಂಶಗಳು 

*ಪ್ರೋಟೀನ್

*ಕೊಬ್ಬು

*ಕಾರ್ಬೋಹೈಡ್ರೇಟ್ಗಳು

* ಕ್ಯಾಲ್ಸಿಯಂ

*ಮೆಗ್ನೀಸಿಯ

*ಮ್ವಿಟಮಿನ್ ಎ

*ವಿಟಮಿನ್ ಸಿ

ಶ್ವಾಸಕೋಶ ಮತ್ತು ಕರುಳು ಸಂಬಂಧಿ ಕಾಯಿಲೆಗಳ ನಿವಾರಣೆಗೆ ಬಳಸುತ್ತಾರೆ.ಹೇರಳೆಕಾಯಿ ಯಿಂದ ತಯಾರಿಸುವ ಖಾದ್ಯಗಳು ದೇಹವನ್ನು ತಂಪಾಗಿಸುತ್ತವೆ.ಸ್ವಲ್ಪ ಬೀಸಿ ನೀರಿನಲ್ಲಿ  ಬೆಳಗಿನ ಜಾವ ಕುಡಿಯುವುದರಿಂದ   ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಸಿಟ್ರಾನ್ ಲೈಮ್ ಪೊಟ್ಯಾಸಿಯಮ್ ಅನ್ನು ಹೊಂದಿರುವುದರಿಂದ  ಹೃದಯದ ಸಂಬಂಧಿ  ಖಾಯಿಲೆ  ನಿವಾರಿಸುತ್ತದೆ. 

ಹೇರಳೆಕಾಯಿ ತಲೆತಿರುಗುವಿಕೆ ಮತ್ತು ವಾಕರಿಕೆ ಸೇರಿದಂತೆ ಪಿತ್ತಾ ಸಂಬಂಧಿಸಿದ  ಖಾಯಿಲೆ ನಿವಾರಿಸುತ್ತದೆ.  ತಿಂದ ಊಟ ಅಜೀರ್ಣ ಆಗಿ ವಾಕರಿಕೆ  ಬರುವಂತ್ತಿದ್ದರೆ ಅಂತಹ ಸಂದರ್ಭದಲ್ಲಿ ಇದು ಉಪಯೋಗಕ್ಕೆ ಬರುತ್ತದೆ.ಆಗಾಗ ಮಹಿಳೆಯರು ನಿಶ್ಚಿಂತೆ ಇಂದ ಇದರ ರಸ ಸೇವಿಸ ಬಹುವುದು. 

ಇದನ್ನೂ ಓದಿ: ಬೇಸಿಗೆಯಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸಬಲ್ಲ 7 ಚಮತ್ಕಾರಿ ಪಾನೀಯಗಳಿವು

ಈ ಹಣ್ಣು ರೋಗ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ.  ಇದು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವುದರಿಂದ, ಸಿಟ್ರಾನ್ ನಿಂಬೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹವು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರ ಉರಿಯೂತದ ಗುಣಲಕ್ಷಣಗಳು ಆಸ್ಟಿಯೋ- ಮತ್ತು ರುಮಟಾಯ್ಡ್ ಸಂಧಿವಾತದ ಕೆಲವು ನೋವಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಉದರದ ಆರೋಗ್ಯ ವೃದ್ದಿಗೆ ಈ ಪಾನೀಯಗಳನ್ನು ಸೇವಿಸಿ

ಸಿಟ್ರಾನ್ ನಿಂಬೆ ಸಿಪ್ಪೆಯನ್ನು ಚರ್ಮದಿಂದ ಕಪ್ಪು ಕಲೆಗಳನ್ನು ತೆಗೆದುಹಾಕಲು ಬಳಸಬಹುದು. ಸಿಪ್ಪೆಯನ್ನು ಮುಖಕ್ಕೆ ಉಜ್ಜುವುದರಿಂದ ಪಿಗ್ಮೆಂಟ್ ಕಡಿಮೆಯಾಗುತ್ತದೆ. ಸಿಟ್ರಾನ್ ಲೈಮ್ ಅನ್ನು ಬೆಳಿಗ್ಗೆ ಬೆಚ್ಚಗಿನ ನೀರು ಮತ್ತು ಜೇನುತುಪ್ಪದೊಂದಿಗೆ ಸೇವಿಸಿದಾಗ ಉತ್ತಮ ಚರ್ಮ ಮತ್ತು ಮೈಬಣ್ಣವನ್ನು ನೀಡುತ್ತದೆ. ಯಾವುದೇ ರೀತಿಯ ಸುಣ್ಣವನ್ನು ಕೂದಲ ರಕ್ಷಣೆಗೆ ಬಳಸಬಹುದು. ಕೂದಲು ತೊಳೆಯುವ ಮೊದಲು ರಸವನ್ನು  ಹಚ್ಚಿ  ಕೂದಲು ತೊಳೆಯುವುದರಿಂದ ಡ್ಯಾಂಡ್ರಫ್ ಕಡಿಮೆ ಮಾಡುತ್ತದೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News