"ಪೌರತ್ವ ಕಾಯ್ದೆ ರದ್ದುಗೊಳಿಸಿ ಇಲ್ಲವೇ ಇನ್ನೊಮ್ಮೆ ಶಾಹಿನ್ ಬಾಗ್ ತರಹದ ಹೋರಾಟ ಎದುರಿಸಿ"

ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಹಿಂತೆಗೆದುಕೊಳ್ಳುವಂತೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ ಮತ್ತು ಅದನ್ನು ರದ್ದುಗೊಳಿಸದಿದ್ದರೆ ಪ್ರತಿಭಟನಾಕಾರರು "ಉತ್ತರ ಪ್ರದೇಶದಲ್ಲಿ ಬೀದಿಗಿಳಿದು ಮತ್ತೊಂದು ಶಾಹೀನ್ ಬಾಗ್ ಮಾಡುತ್ತಾರೆ" ಎಂದು ಹೇಳಿದ್ದಾರೆ.

Last Updated : Nov 22, 2021, 08:15 AM IST
  • ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಹಿಂತೆಗೆದುಕೊಳ್ಳುವಂತೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ ಮತ್ತು ಅದನ್ನು ರದ್ದುಗೊಳಿಸದಿದ್ದರೆ ಪ್ರತಿಭಟನಾಕಾರರು "ಉತ್ತರ ಪ್ರದೇಶದಲ್ಲಿ ಬೀದಿಗಿಳಿದು ಮತ್ತೊಂದು ಶಾಹೀನ್ ಬಾಗ್ ಮಾಡುತ್ತಾರೆ" ಎಂದು ಹೇಳಿದ್ದಾರೆ.
"ಪೌರತ್ವ ಕಾಯ್ದೆ ರದ್ದುಗೊಳಿಸಿ ಇಲ್ಲವೇ ಇನ್ನೊಮ್ಮೆ ಶಾಹಿನ್ ಬಾಗ್ ತರಹದ ಹೋರಾಟ ಎದುರಿಸಿ"  title=
file photo

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಹಿಂತೆಗೆದುಕೊಳ್ಳುವಂತೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ ಮತ್ತು ಅದನ್ನು ರದ್ದುಗೊಳಿಸದಿದ್ದರೆ ಪ್ರತಿಭಟನಾಕಾರರು "ಉತ್ತರ ಪ್ರದೇಶದಲ್ಲಿ ಬೀದಿಗಿಳಿದು ಮತ್ತೊಂದು ಶಾಹೀನ್ ಬಾಗ್ ಮಾಡುತ್ತಾರೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಸ್ಲಿಮರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಲಾಭ ಸಿಗುತ್ತಿಲ್ಲ ಎಂದ ಓವೈಸಿ ಹೇಳಿಕೆಗೆ ಯೋಗಿ ಖಡಕ್ ಉತ್ತರ

ಬಾರಾಬುಂಕಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, "ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಹಿಂಪಡೆಯಲು ನಾನು ಭಾರತೀಯ ಜನತಾ ಪಕ್ಷದ ಸರ್ಕಾರವನ್ನು ಒತ್ತಾಯಿಸುತ್ತೇನೆ. ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿದ ರೀತಿಯಲ್ಲಿಯೇ ಸಿಎಎ ರದ್ದುಗೊಳಿಸಲು ಕೇಂದ್ರವು ಪರಿಗಣಿಸಬೇಕು ಎಂದು ಓವೈಸಿ (Asaduddin Owaisi) ಹೇಳಿದರು.

'ಸರ್ಕಾರವು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮೇಲೆ ಕಾನೂನನ್ನು ಮಾಡಿದರೆ ನಾವು ಮತ್ತೆ ಬೀದಿಗಿಳಿಯುತ್ತೇವೆ, ಇಲ್ಲಿಯೂ ಶಾಹೀನ್ ಬಾಗ್ ಮಾಡುತ್ತೇವೆ. ನಾನೇ ಇಲ್ಲಿಗೆ ಬರುತ್ತೇನೆ" ಎಂದು ಅವರು ಹೇಳಿದರು.

ಇದನ್ನೂ ಓದಿ: ಮುಸ್ಲಿಮರು 'ಬ್ಯಾಂಡ್ ಬಾಜಾ ಪಾರ್ಟಿ'ಯಂತೆ, ಅವರಿಗೆ ಯಾವುದೇ ನಾಯಕತ್ವವಿಲ್ಲ: ಅಸಾದುದ್ದೀನ್ ಓವೈಸಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) 403 ವಿಧಾನಸಭಾ ಸ್ಥಾನಗಳ ಪೈಕಿ 100 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿತು."ನಮ್ಮ ಪಕ್ಷವು 100 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ, ನಾವು ಇನ್ನೂ ಒಂದು ಅಥವಾ ಎರಡು ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಮತ್ತು ನಾವು ಮೈತ್ರಿ ಮಾಡಿಕೊಳ್ಳುತ್ತೇವೆಯೇ ಅಥವಾ ಇಲ್ಲವೇ ಎಂಬುದನ್ನು ಸಮಯ ಹೇಳುತ್ತದೆ.ನಾವು ಖಂಡಿತವಾಗಿಯೂ ಗೆಲ್ಲುವ ಸ್ಥಿತಿಯಲ್ಲಿರುತ್ತೇವೆ" ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News