PM Kisan: ಪಟ್ಟಿಯಿಂದ 2 ಕೋಟಿ ರೈತರ ಹೆಸರನ್ನು ಕೈಬಿಟ್ಟ ಸರ್ಕಾರ

ಪಿಎಂ ಕಿಸಾನ್ ಸಮ್ಮನ್ ನಿಧಿ (PM Kisan Yojana)ಯ ಏಳನೇ ಕಂತು ಇನ್ನೂ ಅನೇಕ ರೈತರಿಗೆ ದೊರೆತಿಲ್ಲ. ಪೋರ್ಟಲ್‌ನಿಂದ ಹಲವು ರೈತರ ಹೆಸರನ್ನು ಕೈಬಿಡಲಾಗಿದೆ.  ಪೋರ್ಟಲ್‌ನಿಂದ ರೈತರ ಹೆಸರನ್ನು ತೆಗೆದುಹಾಕಲು ಬಹುಮುಖ್ಯ ಕಾರಣವೆಂದರೆ ತಪ್ಪಾದ ಮಾಹಿತಿ ಮತ್ತು ಡೇಟಾವನ್ನು ನವೀಕರಿಸದಿರುವುದು. 

Written by - Yashaswini V | Last Updated : Dec 5, 2020, 02:52 PM IST
  • ಪೋರ್ಟಲ್‌ನಿಂದ 2 ಕೋಟಿಗೂ ಹೆಚ್ಚು ರೈತರ ಹೆಸರನ್ನು ಕೈಬಿಡಲಾಗಿದೆ.
  • ನಕಲಿ ದಾಖಲೆ ಒದಗಿಸಿ ಯೋಜನೆಯ ಲಾಭ ಪಡೆದ ರೈತರಿಂದ ಹಣ ಹಿಂಪಡೆಯಲಿರುವ ಸರ್ಕಾರ
  • ನೀವು ಯೋಜನೆಯ ನಿಯಮಗಳ ಪ್ರಕಾರ ಅರ್ಹರಾಗಿದ್ದೀರೆ ಎಂದು ನಿಮ್ಮ ಡೇಟಾವನ್ನು ಒಮ್ಮೆ ಪರಿಶೀಲಿಸಿ.
PM Kisan: ಪಟ್ಟಿಯಿಂದ 2 ಕೋಟಿ ರೈತರ ಹೆಸರನ್ನು ಕೈಬಿಟ್ಟ ಸರ್ಕಾರ  title=

ನವದೆಹಲಿ: ದೇಶಾದ್ಯಂತದ ರೈತರಿಗೆ 6 ಸಾವಿರ ರೂಪಾಯಿ ಅನುದಾನ ನೀಡುವ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಿಂದ 2 ಕೋಟಿಗೂ ಹೆಚ್ಚು ರೈತರ ಹೆಸರನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಸರ್ಕಾರ ಪ್ರಸ್ತುತ ಏಳನೇ ಕಂತಿನಡಿ ರೈತರ ಖಾತೆಗಳಲ್ಲಿ 2 ಸಾವಿರ ರೂಪಾಯಿಗಳನ್ನು ವರ್ಗಾಯಿಸುತ್ತಿದೆ.

ಮತ್ತೊಂದೆಡೆ ತಪ್ಪಾದ ಮಾಹಿತಿ ನೀಡಿರುವ ರೈತರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಈ ಸಮಯದಲ್ಲಿ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ (PM Kisan Samman Nidhi Yojana) ಯಲ್ಲಿ ಯೋಜನೆಯ ಲಾಭ ಪಡೆಯುವ ರೈತರ ಸಂಖ್ಯೆ 9 ಕೋಟಿ 97 ಲಕ್ಷಕ್ಕೆ ಹತ್ತಿರದಲ್ಲಿದ್ದರೆ, ಕೆಲವು ದಿನಗಳ ಹಿಂದೆ ಈ ಸಂಖ್ಯೆ ಸುಮಾರು 11 ಕೋಟಿ ಇತ್ತು.

ಏಳನೇ ಕಂತು ಡಿಸೆಂಬರ್ 1 ರಿಂದ ಖಾತೆಗೆ ವರ್ಗಾವಣೆಯಾಗುತ್ತಿದೆ:
ಪ್ರತಿ ನಾಲ್ಕು ತಿಂಗಳಿಗೊಮ್ಮೆ ಸರ್ಕಾರವು 2 ಸಾವಿರ ರೂಪಾಯಿಗಳನ್ನು ರೈತರ (Farmers) ಖಾತೆಗೆ ಜಮಾ ಮಾಡುತ್ತಿದೆ. ಇದರ ಅಡಿಯಲ್ಲಿ ಡಿಸೆಂಬರ್ 1 ರಿಂದ 2 ಸಾವಿರ ರೂಪಾಯಿ ರೈತರ ಖಾತೆಯನ್ನು ತಲುಪುತ್ತಿದೆ. ಈ ಮಧ್ಯೆ ಕೆಲವು ರೈತ ಕುಟುಂಬದಲ್ಲಿ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಇದರ ಲಾಭ ಪಡೆಯುತ್ತಿದ್ದಾರೆ ಎಂಬುದನ್ನು ಸರ್ಕಾರ ಗಮನಿಸಿದೆ. ಜೊತೆಗೆ ಕೆಲವು ರೈತರು ನಕಲಿ ದಾಖಲೆಗಳನ್ನು ಒದಗಿಸಿ ಇದರ ಲಾಭ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಹಲವು ರೈತರ ಹೆಸರನ್ನು ಕೈಬಿಡಲಾಗಿದೆ. ಇಲ್ಲಿಯವರೆಗೆ ಅಂತಹ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಿಂದ ಎಂದು ಮಾಹಿತಿ ಲಭ್ಯವಾಗಿದೆ. ಇದಲ್ಲದೆ ಲಕ್ಷಾಂತರ ರೈತರನ್ನು ಅವರ ತಪ್ಪಾದ ಮಾಹಿತಿಯ ಕಾರಣದಿಂದಾಗಿ ಪೋರ್ಟಲ್‌ನಿಂದ ತೆಗೆದುಹಾಕಲಾಗಿದೆ.

PM Kisan Samman Nidhi Yojana: ನಿಮ್ಮ ಹಣ ಎಲ್ಲಿ ಸಿಲುಕಿದೆ ಎಂದು ತಿಳಿಯಿರಿ

ರೈತರು ಪ್ರತಿ ಬಾರಿಯೂ ಕಡಿಮೆಯಾಗುತ್ತಿದ್ದಾರೆ:
ಕಂತಿನ ಮೂಲಕ ಯೋಜನೆಯ ಲಾಭವನ್ನು ಪಡೆಯುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ಪಿಎಂ ಕಿಸಾನ್ (PM Kisan) ಪೋರ್ಟಲ್ ಪ್ರಕಾರ ಮೊದಲ ಕಂತಿನಲ್ಲಿ 10.52 ಕೋಟಿ ರೈತರು ಈ ಯೋಜನೆಯ ಲಾಭ ಪಡೆದಿದ್ದರೆ, ಎರಡನೇ ಕಂತಿನಲ್ಲಿ 9.97 ಕೋಟಿ ರೈತರು, ಮೂರನೇ ಕಂತಿನಲ್ಲಿ 9.05 ಕೋಟಿ ರೈತರು, ನಾಲ್ಕನೇ ಕಂತಿನಲ್ಲಿ 7.83 ಕೋಟಿ ರೈತರು ಮತ್ತು ಐದನೇ ಕಂತಿನಲ್ಲಿ 6.58 ಕೋಟಿ ರೈತರಿಗೆ ಈ ಯೋಜನೆ ಲಾಭ ತಲುಪಿದ್ದರೆ, ಆರನೇ ಕಂತಿನಲ್ಲಿ ಇದರ ಲಾಭ  ಪಡೆಯುವ ರೈತರ ಸಂಖ್ಯೆ ಕೇವಲ 3.84 ಕೋಟಿ. ಅಂತಹ ಪರಿಸ್ಥಿತಿಯಲ್ಲಿ, ಏಳನೇ ಕಂತು ಪಡೆಯುವ ರೈತರ ಸಂಖ್ಯೆ ಇದಕ್ಕಿಂತ ಕಡಿಮೆಯಿರಬಹುದು.

ಮಹಾರಾಷ್ಟ್ರದಲ್ಲಿ ತೆರಿಗೆ ಪಾವತಿಸುವ 2.30 ಲಕ್ಷ ರೈತರಿಗೆ ಸಮ್ಮನ್ ನಿಧಿಯ ಮೂಲಕ ಹಣ ನೀಡಲಾಗಿದೆ. ಅಂತಹ ರೈತರಿಗೆ ಒಟ್ಟು 208.5 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈಗ ಸರ್ಕಾರ ಈ ಮೊತ್ತವನ್ನು ಅವರಿಂದ ಸಂಗ್ರಹಿಸಲಿದೆ. ತಮಿಳುನಾಡಿನಲ್ಲಿ 5.95 ಲಕ್ಷ ಫಲಾನುಭವಿಗಳ ಖಾತೆಗಳನ್ನು ತನಿಖೆ ಮಾಡಲಾಗಿದ್ದು, ಅದರಲ್ಲಿ 5.38 ಲಕ್ಷ ನಕಲಿ ಎಂದು ತಿಳಿದುಬಂದಿದೆ. ಅಂತಹ ಜನರಿಂದ ಸರ್ಕಾರ ಹಣವನ್ನು ಹಿಂಪಡೆಯಲಿದೆ. ಇದೇ ರೀತಿಯ ವಂಚನೆಯ ಸುದ್ದಿಯನ್ನು ಇನ್ನೂ ಅನೇಕ ರಾಜ್ಯಗಳಿಂದ ಸ್ವೀಕರಿಸಲಾಗಿದೆ. ಇದರಲ್ಲಿ ಲಕ್ಷಾಂತರ ಅನರ್ಹ ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

PM Kisan Samman Nidhi: ನಿಮ್ಮ ಖಾತೆಗೆ 6000 ರೂ. ಬರದಿದ್ದರೆ ಇಲ್ಲಿ ದೂರು ನೀಡಿ

ಹೊಸ ಪಟ್ಟಿಯಲ್ಲಿ ಈ ರೀತಿಯ ನಿಮ್ಮ ಹೆಸರನ್ನು ಪರಿಶೀಲಿಸಿ:
* Pmkisan.gov.in ವೆಬ್‌ಸೈಟ್‌ಗೆ ಹೋಗಿ.
* ಮುಖಪುಟದಲ್ಲಿರುವ ಮೆನು ಬಾರ್ ಅನ್ನು ನೋಡಿ ಮತ್ತು ಇಲ್ಲಿ 'ಫಾರ್ಮರ್ ಕಾರ್ನರ್' ಗೆ  ಹೋಗಿ.
* ಇಲ್ಲಿ 'ಫಲಾನುಭವಿಗಳ ಪಟ್ಟಿ' ಲಿಂಕ್ ಕ್ಲಿಕ್ ಮಾಡಿ.
* ಇದರ ನಂತರ ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ವಿವರಗಳನ್ನು ನಮೂದಿಸಿ.
* ಇದನ್ನು ಭರ್ತಿ ಮಾಡಿದ ನಂತರ, ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ ಮತ್ತು ಸಂಪೂರ್ಣ ಪಟ್ಟಿಯನ್ನು ಪಡೆಯಿರಿ

Trending News