ರಾಮನ ಪ್ರತಿಮೆ ಅನಾವರಣಗೊಳಿಸಲು ಇಂದು ಅಯೋಧ್ಯೆಗೆ ಭೇಟಿ ನೀಡಲಿರುವ ಯುಪಿ ಸಿಎಂ ಯೋಗಿ!

ಈ ಮೂರ್ತಿಯನ್ನು ರೋಸ್ವುಡ್ ನಿಂದ ತಯಾರಿಸಲಾಗಿದ್ದು, ಕರ್ನಾಟಕದಿಂದ ಕರ್ನಾಟಕದಿಂದ 35 ಲಕ್ಷ ರೂ.ಗೆ ಖರೀದಿಸಲಾಗಿದೆ.

Last Updated : Jun 7, 2019, 08:53 AM IST
ರಾಮನ ಪ್ರತಿಮೆ ಅನಾವರಣಗೊಳಿಸಲು ಇಂದು ಅಯೋಧ್ಯೆಗೆ ಭೇಟಿ ನೀಡಲಿರುವ ಯುಪಿ ಸಿಎಂ ಯೋಗಿ! title=

ಅಯೋಧ್ಯೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶೋಧ ಸಂಸ್ಥಾನ ಮ್ಯೂಸಿಯಂನಲ್ಲಿ ಏಳು ಅಡಿ ಎತ್ತರದ ರಾಮದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲು ಇಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. 

ಈ ಮೂರ್ತಿಯನ್ನು ರೋಸ್ವುಡ್ ನಿಂದ ತಯಾರಿಸಲಾಗಿದ್ದು, ಕರ್ನಾಟಕದಿಂದ ಕರ್ನಾಟಕದಿಂದ 35 ಲಕ್ಷ ರೂ.ಗೆ ಖರೀದಿಸಲಾಗಿದೆ. ಈ ಪ್ರತಿಮೆಯನ್ನು ಕರ್ನಾಟಕ ರಾಜ್ಯ ಆರ್ಟ್ಸ್ ಮತ್ತು ಕ್ರಾಫ್ಟ್ ಎಂಪೋರಿಯಮ್ನಿಂದ ಖರೀದಿಸಲಾಯಿತು. ಈ ಮೂರ್ತಿಯು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಗೊಳ್ಳಲಿದೆ.

ರಾಮದ ಐದು ಅವತಾರಗಳಲ್ಲಿ ಒಂದಾದ ಕೋದಂಡರಾಮ ನನ್ನು ಈ ಪ್ರತಿಮೆಯು ಬಿಂಬಿಸುತ್ತದೆ. ರಾಮ ಮತ್ತು ರಾಮನ ಜೀವನಕ್ಕೆ ಸಂಬಂಧಿಸಿದ 2,500 ಕ್ಕೂ ಅಧಿಕ ಕಲಾಕೃತಿಗಳನ್ನು ವಸ್ತುಸಂಗ್ರಹಾಲಯವು ಹೊಂದಿದ್ದರೂ, ಅದು ಕೋದಂಡರಾಮನನ್ನು ಬಿಂಬಿಸುವ ಯಾವ ತುಣುಕನ್ನು ಹೊಂದಿಲ್ಲ. 

ಮುಖ್ಯಮಂತ್ರಿ ಆದಿತ್ಯನಾಥ್ ಅವರು ಮಧ್ಯಾಹ್ನ 2.30 ರಿಂದ 3.20 ರವರೆಗೆ ಅಯೋಧ್ಯೆಯನ್ನು  ತಲುಪಲಿದ್ದಾರೆ. ಬಳಿಕ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

Trending News