Amul vs Nandini: "ಹಾಲುಂಡ ತವರಿಗೆ" ಏಕೆ ದ್ರೋಹ ಮಾಡುವಿರಿ? ಎಂದ ಕಾಂಗ್ರೆಸ್

Amul vs Nandini Milk war: 70 ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ ಎನ್ನುವ ಪ್ರಧಾನಿ ಮೋದಿಯವರೇ, ಇಂದು ನೀವು ಸಫಾರಿ ಮೋಜು ಮಾಡುತ್ತಿರುವ ಬಂಡೀಪುರದ ಹುಲಿ ಸಂರಕ್ಷಣಾ ಯೋಜನೆಯನ್ನು 1973ರಲ್ಲಿ ಜಾರಿಗೊಳಿಸಿದ್ದು ಕಾಂಗ್ರೆಸ್ ಸರ್ಕಾರವೇ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Written by - Puttaraj K Alur | Last Updated : Apr 9, 2023, 12:21 PM IST
  • ಅಮಿತ್ ಶಾ ಬಂದು ಹೋದನಂತರ KMF ಹಾಲು ಸಂಗ್ರಹಣೆ & ನಂದಿನಿ ಹಾಲು ಪೂರೈಕೆಯಲ್ಲಿ ಕುಸಿತ
  • ಇದು ವ್ಯವಸ್ಥಿತ ಸಂಚೇ ಅಥವಾ ಬಿಜೆಪಿ ದುರಾಡಳಿತದಲ್ಲಿ ರೈತರಿಗೆ ಒದಗಿದ ಸಂಕಷ್ಟವೇ?
  • ಬಂಡೀಪುರವನ್ನು ಅದಾನಿಗೆ ಮಾರಬೇಡಿ! ಎಂದು ಪ್ರಧಾನಿ ಮೋದಿಗೆ ಕಾಂಗ್ರೆಸ್ ವಿಶೇಷ ಮನವಿ
Amul vs Nandini: "ಹಾಲುಂಡ ತವರಿಗೆ" ಏಕೆ ದ್ರೋಹ ಮಾಡುವಿರಿ? ಎಂದ ಕಾಂಗ್ರೆಸ್ title=
ನಂದಿನಿ ಹಾಲು ಪೂರೈಕೆಯಲ್ಲಿ ಕುಸಿತ!

ಬೆಂಗಳೂರು: ನಂದಿನಿ ಹಾಲು ಪೂರೈಕೆಯಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡಿರುವ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಹಾಲುಂಡ ತವರಿಗೆ’ ಏಕೆ ದ್ರೋಹ ಮಾಡುವಿರಿ?’ ಎಂದು ಪ್ರಶ್ನಿಸಿದೆ.

‘ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದನಂತರ KMF ಹಾಲು ಸಂಗ್ರಹಣೆ ಹಾಗೂ ನಂದಿನಿ ಹಾಲು ಪೂರೈಕೆಯಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡಿರುವುದು ಅನುಮಾನಾಸ್ಪದವಾಗಿದೆ. ಅಮೂಲ್‌ನ ಬ್ರಾಂಡ್ ಅಂಬಾಸಿಡರ್ ರೀತಿ ವರ್ತಿಸುವ ಸಿಎಂ ಬಸವರಾಜ್ ಬೊಮ್ಮಾಯಿಯವರೇ, ಇದು ವ್ಯವಸ್ಥಿತ ಸಂಚೇ ಅಥವಾ ನಿಮ್ಮ ದುರಾಡಳಿತದಲ್ಲಿ ರೈತರಿಗೆ ಒದಗಿದ ಸಂಕಷ್ಟವೇ?’ ಎಂದು ಕಾಂಗ್ರೆಸ್ ಕುಟುಕಿದೆ.

ಇದನ್ನೂ ಓದಿ: ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

ಸಂತ್ರಸ್ತರನ್ನು ಎದುರುಗೊಳ್ಳಲು ಭಯವೇ?

ಪ್ರಧಾನಿ ಮೋದಿಯವರೇ ಕೋವಿಡ್ ಸಂದರ್ಭದಲ್ಲಿ ಕರ್ನಾಟಕಕ್ಕೆ ತಾವು ಮಾಡಿದ ಆಕ್ಸಿಜನ್ ವಂಚನೆ ಹಾಗೂ ಬಿಜೆಪಿ ಸರ್ಕಾರದ ಉಡಾಫೆಯಿಂದಾಗಿ ಆಕ್ಸಿಜನ್ ಸಿಗದೆ 36 ಜನ ಮೃತಪಟ್ಟಿದ್ದರು. ಚಾಮರಾಜನಗರಕ್ಕೆ ಬಂದಿದ್ದರೂ ಮೃತರ ಕುಟುಂಬದವರನ್ನು ಭೇಟಿಯಾಗುವ ಇಚ್ಛೆ ಇಲ್ಲವೇಕೆ? ಸಂತ್ರಸ್ತರನ್ನು ಎದುರುಗೊಳ್ಳಲು ಭಯವಾಗುತ್ತಿದೆಯೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬಂಡೀಪುರವನ್ನು ಅದಾನಿಗೆ ಮಾರಬೇಡಿ!

‘70 ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ" ಎನ್ನುವ ಪ್ರಧಾನಿ ಮೋದಿಯವರೇ, ಇಂದು ನೀವು ಸಫಾರಿ ಮೋಜು ಮಾಡುತ್ತಿರುವ ಬಂಡೀಪುರದ ಹುಲಿ ಸಂರಕ್ಷಣಾ ಯೋಜನೆಯನ್ನು 1973ರಲ್ಲಿ ಜಾರಿಗೊಳಿಸಿದ್ದು ಕಾಂಗ್ರೆಸ್ ಸರ್ಕಾರವೇ. ಅದರ ಪರಿಣಾಮವೇ ಇಂದು ದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ತಮ್ಮಲ್ಲಿ ವಿಶೇಷ ಮನವಿ ಬಂಡೀಪುರವನ್ನು ಅದಾನಿಗೆ ಮಾರಬೇಡಿ!’ ಎಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ರಸ್ತೆ ಅಪಘಾತ: ರಂಭಾಪುರಿ ಶ್ರೀಗಳು ಅಪಾಯದಿಂದ ಪಾರು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News