ತಾಯಿ ಜೊತೆ ಅಕ್ರಮ ಸಂಬಂಧದ ಶಂಕೆ : ವ್ಯಕ್ತಿಯನ್ನು ಇರಿದು ಕೊಂದ ಮಗ.!

ತಾಯಿಯ ಜೊತೆ ವ್ಯಕ್ತಿಯೊಬ್ಬನ ಅಕ್ರಮ ಸಂಬಂಧ ಇದೆ ಅಂತಾ ಅನುಮಾನಗೊಂಡಿದ್ದ ಮಗ ರವಿ ಭಂಡಾರಿ ಎಂಬಾತನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಚಾಕುವಿನಿಂದ ಎದೆಗೆ ಇರಿದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ.

Written by - VISHWANATH HARIHARA | Edited by - Krishna N K | Last Updated : Jul 29, 2023, 03:56 PM IST
  • ತಾಯಿಯ ಜೊತೆ ವ್ಯಕ್ತಿಯೊಬ್ಬನ ಅಕ್ರಮ ಸಂಬಂಧ ಶಂಕೆ
  • ಚಾಕುವಿನಿಂದ ಎದೆಗೆ ಇರಿದು ಹತ್ಯೆ ಮಾಡಿ ಎಸ್ಕೇಪ್
  • ಘಟನೆ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಯಿ ಜೊತೆ ಅಕ್ರಮ ಸಂಬಂಧದ ಶಂಕೆ : ವ್ಯಕ್ತಿಯನ್ನು ಇರಿದು ಕೊಂದ ಮಗ.! title=

ಬೆಂಗಳೂರು : ಅನುಮಾನ ಅನ್ನೋ ಭೂತ ಬಂದ್ರೆ ಅದು ಎಂತಹ ಕೃತ್ಯ‌ ಮಾಡಲು ಸಹ ಆಸ್ಪದ ಕೊಡುತ್ತೆ. ಹೀಗೆಯೇ ಅನುಮಾನ ತಲೆಗೆ ಹಚ್ಚಿಕೊಂಡಿದ್ದ ಯುವಕನೊಬ್ಬ ಸಿಟ್ಟಿನಲ್ಲಿ ಕೊಲೆಯೇ ಮಾಡಿಬಿಟ್ಟಿದ್ದಾನೆ. ಬಹುತೇಕ ಕೊಲೆಗಳು ಅನುಮಾನ, ಅಕ್ರಮ ಸಂಬಂಧದಲ್ಲೇ ನಡೆದೋಗುತ್ವೆ. ಅಂತಹದ್ದೇ ಒಂದು ಘಟನೆ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಯಿಯ ಜೊತೆ ವ್ಯಕ್ತಿಯೊಬ್ಬನ ಅಕ್ರಮ ಸಂಬಂಧ ಇದೆ ಅಂತಾ ಅನುಮಾನಗೊಂಡಿದ್ದ ಮಗ ರವಿ ಭಂಡಾರಿ ಎಂಬಾತನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಚಾಕುವಿನಿಂದ ಎದೆಗೆ ಇರಿದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಕೊಲೆಯಾದ ವ್ಯಕ್ತಿ ಉತ್ತರ ಕನ್ನಡದ ಹೊನ್ನಾವರದವನು. ಹೆಂಡತಿ ಮಕ್ಕಳಿದ್ರೂ ಕುಡಿತಕ್ಕೆ ದಾಸನಾಗಿ ಕೆಟ್ಟೋಗಿದ್ದ.

ಇದನ್ನೂ ಓದಿ: "ನಮಗೆ ವಿದ್ಯಾರ್ಥಿನಿಯರ ರಕ್ಷಣೆ ಮುಖ್ಯ": ಶೋಭಾ ಕರಂದ್ಲಾಜೆ

ಹೀಗೆ ಇದ್ರೆ ಆಗಲ್ಲ ಅಂತಾ ಅಣ್ಣನ ಮಗ ಸುರೇಶ್ ಭಂಢಾರಿ ರವಿ ಭಂಡಾರಿಯನ್ನ ಬೆಂಗಳೂರಿಗೆ ಕರೆ ತಂದಿದ್ದ.. ತನ್ನದೇ ಪಿಜಿಯಲ್ಲಿ ಕೆಲಸ ಕೊಟ್ಟೂ ಸಾಕುತ್ತಿದ್ದ.. ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದ ಭಂಡಾರಿ ಅದೇ ಪಿಜಿಯಲ್ಲಿ ಕೆಲಸ ಮಾಡ್ತಿದ್ದ ಪದ್ಮಾವತಿ ಎಂಬ 44ವರ್ಷದ ಮಹಿಳೆ ಜೊತೆ ಸ್ನೇಹ ಬೆಳಸಿದ್ದಾನೆ..

ಈ ವಿಚಾರ ಗೊತ್ತಾಗಿ ಪದ್ಮಾವತಿ ಮಗ ರಾಹುಲ್ ರವಿ ಭಂಡಾರಿಯನ್ನ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಇವರಿಬ್ಬರ ಬಗ್ಗೆ ಮೊದಲೇ ತಿಳಿದಿದ್ದ ಆರೋಪಿ ರಾಹುಲ್ ಇಬ್ಬರಿಗೂ ಬುದ್ದಿ ಹೇಳಿದ್ದ.. ಆದರೂ ಇಬ್ಬರು ತಮ್ಮ ಸ್ನೇಹ ಮುಂದುವರೆಸಿದ್ರು.. 28ನೇ ತಾರೀಖು ಇದೇ ವಿಚಾರವಾಗಿ ಮಾತನಾಡೋಕೆ ರವಿ ಭಂಡಾರಿಯನ್ನ ಮನೆಗೆ ಕರೆದಿದ್ದ ಆರೋಪಿ ರಾಹುಲ್ ಮಾತುಕತೆ ವೇಳೆ ಜಗಳ ಜೋರಾಗಿ ಕೊಲೆ ಮಾಡಿದ್ದಾನೆ.‌ 

ಇದನ್ನೂ ಓದಿ: ಕಾಂಗ್ರೆಸ್ ಮಾಜಿ ಸಚಿವರಿಗೆ ಜೀವ ಬೆದರಿಕೆ ಕರೆ!

ಮನೆಯಲ್ಲಿದ್ದ ಚಾಕುವಿನಿಂದ ರವಿ ಕೈಗೆ ಮತ್ತು ಎದೆಗೆ ಇರಿದು ಬರ್ಬರ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ ಅನ್ನೋದು ತನಿಖೆ ವೇಳೆ ಗೊತ್ತಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಮಾಗಡಿ ರೋಡ್ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.. 24 ವರ್ಷದ ಆರೋಪಿಗೆ ಮದುವೆ ಫಿಕ್ಸ್ ಆಗಿತ್ತು‌..‌ ಇನ್ನೇನು ಹೊಸ ಜೀವನಕ್ಕೆ ಕಾಲಿಡಲು ರೆಡಿಯಾಗುತ್ತಿದ್ದವನು ವ್ಯಕ್ತಿಯನ್ನ ಕೊಲೆ ಮಾಡಿ ಈಗ ಜೀವನವನ್ನೇ ಹಾಳು ಮಾಡಿಕೊಂಡಿದ್ದಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News