ಅಸಲಿ ಗಾಂಧಿ ಸೇರಿ ಎಲ್ಲವನ್ನೂ ಹೈಜಾಕ್ ಮಾಡಿರುವ ಕಾಂಗ್ರೆಸ್ ಅಸ್ತಿತ್ವವೇ ಶೂನ್ಯ: ಬಿಜೆಪಿ

ಸಿದ್ದರಾಮಯ್ಯ ಪಕ್ಷಾಂತರದ ಇತಿಹಾಸ ನೋಡಿದರೆ, ಕಾಂಗ್ರೆಸ್ಸಿನಲ್ಲಿ ಅವರ ಆಯಸ್ಸು ಮುಗಿದಂತೆ ಭಾಸವಾಗುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Written by - Zee Kannada News Desk | Last Updated : Jun 14, 2022, 01:35 PM IST
  • ಕಾಂಗ್ರೆಸ್‌ ಪಕ್ಷ‌ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಯೇ ಇಲ್ಲ, ಕಾಂಗ್ರೆಸ್‌ ಅನ್ನುವುದೊಂದು ಸ್ವಾತಂತ್ರ್ಯ ಚಳುವಳಿ ಅಷ್ಟೇ
  • ರಾಜಕೀಯ ಕಾಂಗ್ರೆಸ್‌ ಪಕ್ಷಕ್ಕೂ, ಕಾಂಗ್ರೆಸ್‌ ಚಳುವಳಿಗೂ ಸಂಬಂಧವೇ ಇಲ್ಲವೆಂದು ಕಿಡಿಕಾರಿದ ಬಿಜೆಪಿ
  • ಅಸಲಿ ಗಾಂಧಿಯನ್ನು ಸೇರಿ ಕಾಂಗ್ರೆಸ್ ಪಕ್ಷವು ಎಲ್ಲವನ್ನೂ ಹೈಜಾಕ್ ಮಾಡಿದೆ ಎಂದು ಟೀಕಿಸಿದ ಬಿಜೆಪಿ
ಅಸಲಿ ಗಾಂಧಿ ಸೇರಿ ಎಲ್ಲವನ್ನೂ ಹೈಜಾಕ್ ಮಾಡಿರುವ ಕಾಂಗ್ರೆಸ್ ಅಸ್ತಿತ್ವವೇ ಶೂನ್ಯ: ಬಿಜೆಪಿ title=
ಕಾಂಗ್ರೆಸ್ ಅಸ್ತಿತ್ವವೇ ಶೂನ್ಯವೆಂದ ಬಿಜೆಪಿ

ಬೆಂಗಳೂರು: ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಗುಂಡಿಗೆ ಹೆದರದ ಕಾಂಗ್ರೆಸ್ ನಿಮ್ಮ ಸರ್ಕಾರಕ್ಕೆ ಹೆದರುತ್ತಾ ಮೋದಿಜೀ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು ನೀಡಿದೆ. #FakeGandhisBachaoToolKit ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯನವರೇ, ಕಾಂಗ್ರೆಸ್‌ ಪಕ್ಷ‌ ದೇಶದ ಸ್ವಾತಂತ್ರ್ಯಕ್ಕಾಗಿ  ಹೋರಾಡಿಯೇ ಇಲ್ಲ. ಕಾಂಗ್ರೆಸ್‌ ಅನ್ನುವುದೊಂದು ಸ್ವಾತಂತ್ರ್ಯ ಚಳುವಳಿ ಅಷ್ಟೇ. ರಾಜಕೀಯ ಕಾಂಗ್ರೆಸ್‌ ಪಕ್ಷಕ್ಕೂ, ಕಾಂಗ್ರೆಸ್‌ ಚಳುವಳಿಗೂ ಸಂಬಂಧವೇ ಇಲ್ಲ. ಎಲ್ಲವನ್ನೂ ಹೈಜಾಕ್ ಮಾಡಿದ್ದೀರಿ ಅಷ್ಟೇ, ಅಸಲಿ ಗಾಂಧಿಯನ್ನೂ’ ಎಂದು ಟೀಕಿಸಿದೆ.

‘ಸರ್ಕಾರಕ್ಕೆ ಕಾಂಗ್ರೆಸ್‌ ಹೆದರುವುದು ಬೇಡ, ಅದರ ಅಗತ್ಯವೂ ಇಲ್ಲ. ಏಕೆಂದರೆ ಕಾಂಗ್ರೆಸ್‌ ಅಸ್ತಿತ್ವವೇ ಶೂನ್ಯ. ನೀವು ಈ ನೆಲದ ಕಾನೂನಿನ ಬಗ್ಗೆ, ಈ ನೆಲದ ಸಂವಿಧಾನ ಮೇಲೆ ಭಯ ಇಟ್ಟುಕೊಂಡರೆ ಸಾಕು. ಆದರೆ, ನಕಲಿ ಗಾಂಧಿ ಕುಟುಂಬ ಮೆಚ್ಚಿಸಲು ನೀವಿಂದು ಸಂವಿಧಾನವನ್ನು ಕಾಲಡಿಗೆ ಹಾಕುತ್ತಿದ್ದೀರಿ, ಅಕ್ಷಮ್ಯವಿದು ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ED ವಿಚಾರಣೆ ಅಂತ್ಯ: ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬಿಜೆಪಿ ಶೂನ್ಯದಿಂದ ಬೆಳೆದಿರುವ ಪಕ್ಷ, ಯಾರದ್ದೋ ಶ್ರೇಯವನ್ನು ಬೆನ್ನಿಗೆ ಅಂಟಿಸಿಕೊಂಡು ಬಂದಿಲ್ಲ. ಸಿದ್ದರಾಮಯ್ಯ ಪಕ್ಷಾಂತರದ ಇತಿಹಾಸ ನೋಡಿದರೆ, ಕಾಂಗ್ರೆಸ್ಸಿನಲ್ಲಿ ಅವರ ಆಯಸ್ಸು ಮುಗಿದಂತೆ ಭಾಸವಾಗುತ್ತಿದೆ. ಸಿಎಂ ಅಭ್ಯರ್ಥಿಯೆಂದು ಘೋಷಿಸದಿದ್ದರೆ ಮುಂದುವರಿಯುತ್ತೀರಾ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಸುಳ್ಳು ಪಾಪ, ಸತ್ಯ ತಪಸ್ಸು’ ಎಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಸಿಗರ ವಂಶವಾಹಿನಿಯಲ್ಲೇ ಸುಳ್ಳು ಪ್ರವಹಿಸುತ್ತಿದೆ. ಸತ್ಯದ ಸಮಾಧಿ ಮಾಡಿ, ಸುಳ್ಳಿನ ಅರಮನೆ ಕಟ್ಟದೇ ಇದ್ದಿದ್ದರೆ ಕಾಂಗ್ರೆಸ್ ಇಷ್ಟು ವರ್ಷ ದೇಶದಲ್ಲಿ ಆಡಳಿತ ನಡೆಸಲು ಸಾಧ್ಯವೇ ಇರಲಿಲ್ಲ’ವೆಂದು ಬಿಜೆಪಿ ಟೀಕಿಸಿದೆ.  

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಆರಂಭದಿಂದಲೂ ಸುಳ್ಳನ್ನೇ ಹೇಳುತ್ತಾ ಬರುತ್ತಿದೆ. ಕಾಂಗ್ರೆಸ್ ಸತ್ಯ ಹೇಳಿದ್ದರೆ, ಪ್ರಕರಣ ವಜಾಗೊಳಿಸುವಂತೆ ಕಾಂಗ್ರೆಸ್ ಪಕ್ಷದ ಘಟಾನುಘಟಿ ನ್ಯಾಯವಾದಿಗಳು ಮಾಡಿದ ವಾದವನ್ನು ನ್ಯಾಯಾಲಯ ವಜಾಗೊಳಿಸುತ್ತಿತ್ತೇ? ಕಾಂಗ್ರೆಸ್ ಪೋಣಿಸಿದ ಸುಳ್ಳಿನ ಮಣಿ ಭಗ್ನವಾಗಿದೆ’ ಎಂದು ಬಿಜೆಪಿ ಕುಟುಕಿದೆ.  

ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬ ನಡೆಸಿದ್ದು ಅಕ್ಷರಶಃ ಮನೆಗಳ್ಳತನ!: ಬಿಜೆಪಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News